ಬಿರುಸಾಗುತ್ತಿರುವ ಮಳೆ : ಸಾರ್ವಜನಿಕರಿಗೆ ನಿರ್ದೇಶಗಳು

ಕಾಸರಗೋಡು: ತೀವ್ರ ಮಳೆ ಲಭಿಸುತ್ತಿರುವ ಮಲೆನಾಡು ವಲಯದಲ್ಲಿ ಮಣ್ಣು ಕುಸಿತ, ಗುಡ್ಡೆ ಕುಸಿತ, ನೆರೆ ಸಾಧ್ಯತೆ ಇರುವ ಪ್ರದೇಶಗಳಲ್ಲಿರುವವರು ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರ ಗೊಂಡು ವಾಸಮಾಡಬೇಕಾಗಿದೆ. ಹಗಲು ಹೊತ್ತಿನಲ್ಲಿಯೇ ಸ್ಥಳಾಂತರಗೊಳ್ಳ ಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕೇಂದ್ರ ಹವಾಮಾನ ಇಲಾಖೆ ನೀಡಿದ ಮುನ್ನೆಚ್ಚರಿಕೆ ಕ್ರಮದಂಗವಾಗಿ ಅಧಿಕಾರಿಗಳು ಈ ಎಚ್ಚರಿಗೆ ನೀಡಿದ್ದಾರೆ. ಸ್ಥಿರವಾಗಿ ನೀರು ಸಂಗ್ರಹವಾಗುತ್ತಿರುವ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಶಿಬಿರಗಳಿಗೆ ಸ್ಥಳಾಂತರವಾಗಬೇಕು. ತೀವ್ರವಾದ ಗಾಳಿಗೆ ಸಾಧ್ಯತೆ ಇರುವ ಕಾರಣ ಗಟ್ಟಿ ಮುಟ್ಟಾಗಿಲ್ಲದ ಮನೆಗಳಲ್ಲಿ  ವಾಸಿಸುವ ವರು, ಛಾವಣಿಯಿಲ್ಲದ  …

ಮಧೂರು ಭಾಗದಿಂದ ಕಾಸರಗೋಡು ರೈಲು ನಿಲ್ದಾಣ ಭಾಗಕ್ಕೆ ತೆರಳಲು ಕರಂದಕ್ಕಾಡ್‌ನಿಂದಲೇ ಸೌಕರ್ಯ ಏರ್ಪಡಿಸಬೇಕು- ಬಿಎಂಎಸ್

ಕಾಸರಗೋಡು: ಮಧೂರು ಭಾಗದಿಂದ ಕಾಸರಗೋಡು ಹಳೆ ಬಸ್ ನಿಲ್ದಾಣ ಭಾಗಕ್ಕೆ ವಿವಿಧ ಅಗತ್ಯಗಳಿಗಾಗಿ ದಿನಂಪ್ರತಿ ಹಲವು ವಾಹನಗಳು ತೆರಳುತ್ತಿವೆ. ಈ ವಾಹನಗಳಿಗೆ ಪ್ರಸ್ತುತ ಹೈವೇಯ ಪ್ಲಾನಿಂಗ್ ಪ್ರಕಾರ ಹೊಸ ಬಸ್ ನಿಲ್ದಾಣ ಮೂಲಕ ಸುತ್ತಾಡಿ ಕರಂದಕ್ಕಾಡ್ ಭಾಗಕ್ಕೆ ತಲುಪ ಬೇಕಾಗಿದೆ. ಇದರಿಂದ ಪ್ರಯಾಣಿಕ ರಿಗೆ ಹಾಗೂ ವಾಹನಗಳಿಗೆ ಭಾರೀ ದೂರ ಸಂಚರಿಸಬೇಕಾಗಿದ್ದು, ಇದು ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ ಹೆದ್ದಾರಿಯ ನಿರ್ಮಾಣ ಚಟುವಟಿಕೆ ಗಳಿಗೆ ಮುಂಚೆ ಹೈವೇ ಅಧಿಕಾರಿಗಳು  ಮೇಲ್ಸೇತುವೆಯ ಅಡಿಯಲ್ಲಾಗಿ ಸಾಗಲು ಸೌಕರ್ಯ ಏರ್ಪಡಿಸಿ ಕೊಡುವುದಾಗಿ ತಿಳಿಸಿದ್ದರು. …

ಎಡರಂಗ ಸರಕಾರದ ವಾರ್ಷಿಕ ದಿನಾಚರಣೆ: ಐಕ್ಯರಂಗದಿಂದ ಕಪ್ಪು ಪತಾಕೆ ಮೆರವಣಿಗೆ

ಕಾಸರಗೋಡು: ಎಡರಂಗ ಸರಕಾರದ ನಾಲ್ಕನೇ ವಾರ್ಷಿಕ ದಿನವಾದ ನಿನ್ನೆ ಐಕ್ಯರಂಗದ ನೇತೃತ್ವದಲ್ಲಿ ರಾಜ್ಯ ವ್ಯಾಪಕವಾಗಿ ನಡೆಸಿದ ಆಂದೋಲನದಂಗವಾಗಿ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ಕಪ್ಪು ಪತಾಕೆ ಮೆರವಣಿಗೆ, ಪ್ರತಿಭಟನಾ ಸಮಾ ವೇಶವನ್ನು ನಡೆಸಿದೆ. ಜನವಿರೋಧಿ ನಿಲುವು, ಭ್ರಷ್ಟಾಚಾರವಾಗಿದೆ. ಪಿಣರಾಯಿ ವಿಜಯನ್‌ರ ದ್ವಿತೀಯ ಬಾರಿಯ ನಾಲ್ಕನೇ ವರ್ಷದ ಮುಖಮುದ್ರೆ ಎಂದು  ಯುಡಿಎಫ್ ಜಿಲ್ಲಾ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಆಪಾದಿಸಿದರು. ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆದ ಸಭಯನ್ನು ಉದ್ಘಾಟಿಸಿ ಅವರು ಮತನಾಡುತ್ತಿದ್ದರು. ಕಾಸರಗೋಡು  ವಿಧಾನಸಭಾ ಮಂಡಲ ಅಧ್ಯಕ್ಷ …

ರಾಷ್ಟ್ರೀಯ ಹೆದ್ದಾರಿ ದುರಂತ : ವಿವಿಧ ಅಧಿಕಾರಿಗಳ ಸಭೆ ಇಂದು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿ ಮಳೆಗಾಲದ ಪೂರ್ವಭಾವಿಯಾಗಿ ದುರಿತ ಸಾಧ್ಯತೆಯನ್ನು ಹೊರತು ಪಡಿಸಲು   ತುರ್ತು ಕ್ರಮ ಕೈಗೊಳ್ಳುತ್ತಿರುವುದಾಗಿ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ತಿಳಿಸಿದ್ದಾರೆ. ಮಟ್ಟಲಾಯಿಕುನ್ನ್, ವೀರಮಲಕುನ್ನ್, ಚೆರ್ಕಳ ಎಂಬೆಡೆಗಳಲ್ಲಿ ಪಾರ್ಶ್ವ ಭಿತ್ತಿ ಸಂರಕ್ಷಣೆ ಖಚಿತಪಡಿಸಲು, ಗುಡ್ಡೆ ಕುಸಿತಗಳನ್ನು ತಡೆಯುವುದಕ್ಕಾಗಿ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ, ನಿರ್ಮಾಣ ಕಂಪೆನಿಗಳಿಗೂ ಈಗಾಗಲೇ ನಿರ್ದೇಶ ಲಿಖಿತವಾಗಿ ನೀಡಲಾಗಿದೆಯೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ವಿಕೋಪ ಸಾಧ್ಯತೆ ಅಧ್ಯಯನ ನಡೆಸಲು ರಾಜ್ಯ ವಿಕೋಪ ನಿವಾರಣೆ ಪ್ರಾಧಿಕಾರದೊಂದಿಗೆ ಆಗ್ರಹಿಸಲಾಗಿದೆ. ಮಟ್ಟಲಾಯಿ, ವೀರಮಲದಲ್ಲ್ಲಿ ನಡೆಸುವ ಕೆಲಸಗಳ …

ಪಂಚಾಯತ್ಗಳ ವಾರ್ಡ್ ವಿಭಜನೆಯ ಅಂತಿಮ ಪಟ್ಟಿ ಪ್ರಕಟ: ಒಟ್ಟು 17,337 ವಾರ್ಡ್ಗಳು

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಶೀಘ್ರ ಚುನಾವಣೆ ನಡೆಯಲಿರುವಂತೆಯೇ, ಅದರ ಪೂರ್ವಭಾವಿಯಾಗಿ ನಡೆಸಲಾದ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆಯಂತೆ ಗ್ರಾಮ ಪಂಚಾ ಯತ್ಗಳ ಅಂತಿಮ ವಾರ್ಡ್ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಹಲವು ವಾರ್ಡ್ಗಳನ್ನು ವಿಭಜಿಸಿ ಈ ಹೊಸ ಯಾದಿ ತಯಾರಿಸಲಾಗಿದೆ.ಇದರಂತೆ ರಾಜ್ಯದ 941 ಗ್ರಾಮ ಪಂಚಾಯತ್ಗಳ ವಾರ್ಡುಗಳ ಸಂಖ್ಯೆ ಈಗ 15,962ರಿಂದ 17,337 ಕ್ಕೇರಿದೆ. ಅಂದರೆ ವಾರ್ಡ್ಗಳ ಸಂಖ್ಯೆಯಲ್ಲಿ 1375ರಷ್ಟು ಹೆಚ್ಚಳ ಉಂಟಾಗಿದೆ. 2010ರ ಬಳಿಕ ವಾರ್ಡ್ ವಿಭಜನೆ ನಡೆದಿದ್ದು ಇದೇ ಪ್ರಥಮವಾಗಿದೆ. ಇನ್ನು ನಗರಸಭೆಗಳು …

‘ಬಣ್ಣದಜ್ಜನ ಸ್ಮೃತಿಯಾನ’ ಕುಬಣೂರಿನಲ್ಲಿ 23ರಂದು

ಉಪ್ಪಳ: ಪುತ್ತೂರು ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ವತಿಯಿಂದ ‘ಬಣ್ಣದಜ್ಜನ ಸ್ಮೃತಿಯಾನ’ ಬಣ್ಣದ ಮಹಾಲಿಂಗರ ನೆನಪಿನಲ್ಲೊಂದು ಯಕ್ಷ ಪಯಣ ಈ ತಿಂಗಳ  ಕಾರ್ಯಕ್ರಮ 23ರಂದು ಕುಬಣೂರು ಶ್ರೀರಾಮ ಅನುದಾನಿತ ಹಿರಿಯಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಸಂಸ್ಮರಣೆ, ಯಕ್ಷಸ್ಮೃತಿ, ಸನ್ಮಾನ, ತಾಳಮದ್ದಳೆ ನಡೆಯಲಿದೆ. ಪ್ರಗತಿಪರ ಕೃಷಿಕ ಭಾಸ್ಕರ ರಾವ್ ಉಬರಳೆ ದೀಪ ಪ್ರಜ್ವಲಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿ  ಅಧ್ಯಕ್ಷತೆ ವಹಿಸುವರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಸಂಸ್ಮರಣೆ ನಡೆಸುವರು. ಹಿರಿಯ ಯಕ್ಷಗಾನ ಕಲಾವಿದ ಪರಪ್ಪು ನಾರಾಯಣ ಶೆಟ್ಟಿಯವರಿಗೆ …

ವರ್ಕಾಡಿ ಪಂಚಾಯತ್‌ನಲ್ಲಿ ನಾಲ್ಕು ರಸ್ತೆಗಳ ಉದ್ಘಾಟನೆ

ವರ್ಕಾಡಿ: ವರ್ಕಾಡಿ ಪಂಚಾಯತ್‌ನ ನಾಲ್ಕು ರಸ್ತೆಗಳನ್ನು ಸಾರಿಗೆ ಯೋಗ್ಯಗೊಳಿಸಲಾಯಿತು.  ಶಾಸಕರ  ಫಂಡ್ ಉಪಯೋಗಿಸಿ ಅಭಿವೃದ್ಧಿ ಪಡಿಸಿದ ರಸ್ತೆಗಳನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು.   7ನೇ ವಾರ್ಡ್‌ನ ಬೋಲ್ಮಡಗುರಿ- ತಟ್ಟಾರಬಳಪ್ಪು- ಬಾಳೆಪುಣಿ ರಸ್ತೆ , 10ನೇ ವಾರ್ಡ್ ಬೋರ್ಕಳ -ಲೆಂಕಿರಿಕಾಡ್    ರಸ್ತೆ  , 13ನೇ ವಾರ್ಡ್ ಅಡೆಕಳಕಟ್ಟೆ-ಕೇಂಪಲದೆರೆ ರಸ್ತೆ, ೧೫ನೇ ವಾರ್ಡ್‌ನ  ಮುಟ್ಲಕಳ್ಳಾಜೆ-ಪೊಯ್ಯೆ ರಸ್ತೆಯನ್ನು ಉದ್ಘಾಟಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಸದಸ್ಯರಾದ ಅಬ್ದುಲ್ ಮಜೀದ್ ಬಿ.ಎ, ಉಮ್ಮರ್ ಬೋರ್ಕಳ, ಇಬ್ರಾಹಿಂ, ಮಾಲತಿ ಕೆ, …

ಮಳೆ : ಹಲವೆಡೆ ಮಣ್ಣು ಕುಸಿತ; ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ವಾಹನ ಸಂಚಾರ ಸಂದಿಗ್ಧತೆ

ಕಾಸರಗೋಡು:  ಮಳೆ ತೀವ್ರಗೊಳ್ಳುವುದರೊಂದಿಗೆ  ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳು ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆಗಳು ಕುಸಿದು ವಾಹನಗಳು ಮಣ್ಣಿನಲ್ಲಿ ಹೂತುಹೋಗುತ್ತಿದ್ದು,  ಮಳೆ ನೀರು ಅಲ್ಲಲ್ಲಿ ಕಟ್ಟಿ ನಿಂತು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಎದುರಾಗಿದೆ.    ನಿನ್ನೆ ರಾತ್ರಿ ಹಾಗೂ ಇಂದು ಬೆಳಿಗ್ಗೆ ಸುರಿದ ತೀವ್ರ ಮಳೆಯಿಂದ ಮಾವುಂಗಾಲ್ ಸರ್ವೀಸ್ ರಸ್ತೆ ಕುಸಿದು ಸಾರಿಗೆ ಅಡಚಣೆ ಉಂಟಾಗಿದೆ.  ಚೆಮ್ಮಟ್ಟಂವ ಯಲ್‌ನಲ್ಲಿ ಸೇತುವೆ ಕೆಲಸ ನಡೆಯುತ್ತಿರುವುದರಿಂದ ಆ ಮೂಲಕ ವಾಹನ ಸಂಚಾರ ನಿಲುಗಡೆಗೊಳಿ ಸಲಾಗಿದೆ. ಪೆರಿಯ, ಕುಟ್ಟಿಯಡ್ಕದಲ್ಲಿ …

ಮದ್ರಸ ವಿದ್ಯಾರ್ಥಿನಿಯನ್ನು ಬೈಕ್‌ಗೆ ಹತ್ತಿಸಿ ಕಿರುಕುಳ: ಆರೋಪಿಗಾಗಿ ಶೋಧ

ಉಪ್ಪಳ: ಮದ್ರಸದಿಂದ ಮನೆಗೆ ಹೋಗುತ್ತಿದ್ದ ೧೦ರ ಹರೆಯದ ಬಾಲಕಿಯನ್ನು ಬೈಕ್‌ನಲ್ಲಿ ಹತ್ತಿಸಿ ಕರೆದೊಯ್ದು ಕಿರುಕುಳ ನೀಡಿದ ಬಗ್ಗೆ ದೂರುಂಟಾಗಿದೆ. ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಈ ಘಟನೆ ನಡೆದಿದೆ. ಬಾಲಕಿ ಮದ್ರಸದಿಂದ ಮನೆಗೆ ಹೋಗುತ್ತಿದ್ದಳು. ಈ ಮಧ್ಯೆ ತಲುಪಿದ ವ್ಯಕ್ತಿ ಬಾಲಕಿಯ ಸಮೀಪ ಬೈಕ್ ನಿಲ್ಲಿಸಿ ಮನೆಗೆ ತಲುಪಿಸುವುದಾಗಿ ತಿಳಿಸಿ ಆಕೆಯನ್ನು ಬೈಕ್‌ಗೆ ಹತ್ತಿಸಿದ್ದಾನೆಂದು ಹೇಳಲಾಗುತ್ತಿದೆ. ಪ್ರಯಾಣ ಮಧ್ಯೆ ಬಾಲಕಿಗೆ …

ಉಗ್ರ ಹಫೀಸ್‌ನನ್ನು ನಮಗೆ ಒಪ್ಪಿಸಿ-ಭಾರತ

ನವದೆಹಲಿ: ಭಾರತದ ವಿರುದ್ಧ ಭಯೋತ್ಪಾದನೆಗೆ ಸದಾ ನೇತೃತ್ವ ನೀಡುತ್ತಿರುವ ಹಾಗೂ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ಹಾಗೂ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಂಡ್ ಭಯೋತ್ಪಾದಕರಾದ ಪಾಕಿಸ್ತಾನದ ಹಫೀಸ್ ಸಯ್ಯಿದ್, ಸಾಜಿದ್ ಮಿರ್ ಮತ್ತು ಝಕೀರ್ ರಹಮಾನ್ ಕಖ್ವಿಯನ್ನು ನಮಗೆ ಹಸ್ತಾಂತರಿಸುವಂತೆ ಭಾರತದ ರಾಯಭಾರಿ ಕೆ.ಪಿ. ಸಿಂಗ್ ಪಾಕಿಸ್ತಾನದೊಡನೆ ಒತ್ತಾಯಿಸಿದ್ದಾರೆ. ಈ ಉಗ್ರರನ್ನು ಭಾರತಕ್ಕೆ ಒಪ್ಪಿಸಿದಲ್ಲಿ  ಭಯೋತ್ಪಾದನೆಯನ್ನು ನಿಗ್ರಹಿಸಲು ಸಾಧ್ಯವೆಂದು ಅವರು ಹೇಳಿದ್ದಾರೆ.