ಬೇಡಗಂನಲ್ಲಿ ಯುವಕ ಹಾಗೂ ಪೊಲೀಸ್ಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಆರೋಪಿಗಳನ್ನು ಘಟನೆ ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹ
ಕಾಸರಗೋಡು: ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನಾಡ್ ಅರಿಚ್ಚೆಪ್ಪು ಎಂಬಲ್ಲಿ ಅಧ್ಯಾಪಕ ದಂಪತಿಗಳಿಗೆ ಹಲ್ಲೆಗೈಯ್ಯಲು ಯತ್ನಿಸಿದ ವಿಷಯ ತಿಳಿದು ತಲುಪಿದ ಯುವಕ ಹಾಗೂ ಪೊಲೀಸ್ನನ್ನು ಕೊಲೆಗೈಯ್ಯ ಲೆತ್ನಿಸಿದ ಪ್ರಕರಣದ ಆರೋಪಿಗಳನ್ನು ಕಸ್ಟಡಿಗೆ ತೆಗೆದು ಘಟನೆ ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹಿಸ ಲಾಯಿತು. ಅರಿಚ್ಚೆಪ್ಪು ಪುಳಿಕ್ಕಾಲ್ ಹೌಸ್ನ ಜಿಷ್ಣು ಸುರೇಶ್ ಯಾನೆ ಸುರೇಶ್ (24), ಸಹೋದರ ವಿಷ್ಣು ಸುರೇಶ್ (25) ಎಂಬಿವರಿಂದ ಬೇಡಗಂ ಪೊಲೀಸ್ ಇನ್ಸ್ಪೆಕ್ಟರ್ ರಾಜೀವನ್ ವಲಿಯವಳಪ್ಪಿಲ್ ಅವರ ನೇತೃತ್ವದಲ್ಲಿ ಮಾಹಿತಿ ಸಂಗ್ರಹಿಸಲಾಯಿತು. ಘಟನೆ ನಡೆದ ಸ್ಥಳ, …