ಸೂರ್ಲು ತೋಡಿಗೆ ಮಲಿನ ಜಲ ಹರಿಯಬಿಟ್ಟ ಸಂಸ್ಥೆಗೆ ದಂಡ : ವಿವಿಧ ಕಡೆ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನಿಂದ ತಪಾಸಣೆ

ಕಾಸರಗೋಡು: ಸೂರ್ಲು ತೋಡಿಗೆ ಉಪಯೋಗಶೂನ್ಯ ಜಲವನ್ನು ಹರಿಯಬಿಟ್ಟು ಮಲಿನಗೊಳಿಸಲಾಗಿದೆ ಎಂಬ ದೂರಿನಂತೆ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ ನಡೆಸಿದ ಪರಿಶೀಲನೆ ಯಲ್ಲಿ ಹೊಸ ಬಸ್ ನಿಲ್ದಾಣ ಸಮೀಪದ ಕಾಂಪ್ಲೆಕ್ಸ್‌ನ ಹೋಟೆಲ್‌ನಿಂದ ಉಪ ಯೋಗಶೂನ್ಯ ಜಲವನ್ನು ಪ್ರತ್ಯೇಕ ವ್ಯವಸ್ಥೆ ಮೂಲಕ ಸಾರ್ವಜನಿಕ ಚರಂಡಿಗೆ ಹರಿಯ ಬಿಟ್ಟಿರುವುದನ್ನು ಪತ್ತೆಹಚ್ಚಲಾಯಿತು. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲಕನಿಗೆ 10,000 ರೂ. ದಂಡ ಹೇರಲಾಯಿತು. ಕಾಂಪ್ಲೆಕ್ಸ್‌ಗೆ ಬೇಕಾಗಿ ಸಿದ್ಧಪಡಿಸಿದ ಸೋಕ್‌ಪಿಟ್‌ಗೆ ಉಪಯೋಗಶೂನ್ಯ ಜಲವನ್ನು ಹರಿಸಲು ನಿರ್ದೇಶ ನೀಡಲಾ ಯಿತು. ಕಾಂಪ್ಲೆಕ್ಸ್‌ನಿಂದಿರುವ ಮಲಿನ …

ಕನ್ನಡಿಗರ ಭಾವನೆಗೆ ನೋವು: ಸೋನು ನಿಗಮ್ ವಿರುದ್ಧ ಪೊಲೀಸ್‌ಗೆ ದೂರು

ಬೆಂಗಳೂರು: ಸಂಗೀತ ಕಾರ್ಯಕ್ರಮದ ಮಧ್ಯೆ ಕನ್ನಡಿಗರಿಗೆ ನೋವುಂಟುಮಾಡುವ ರೀತಿಯ ಪರಾಮರ್ಶೆ ನಡೆಸಿದ ಗಾಯಕ ಸೋನು ನಿಗಮ್ ವಿರುದ್ಧ ದೂರು ನೀಡಲಾಗಿದೆ. ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಇದರ ಜಿಲ್ಲಾಧ್ಯಕ್ಷ ದೂರು ನೀಡಿದ್ದಾರೆ. ಭಾಷಾ ಪರವಾದ ವಿಂಗಡನೆಗೆ, ಆಕ್ರಮಣಕ್ಕೆ ಕಾರಣವಾಗುವುದಾಗಿದೆ ಸೋನು ನಿಗಮ್‌ರ ಪರಾಮರ್ಶೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎಪ್ರಿಲ್ 25, 26ರಂದು ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸ್ತುತ ಪಡಿಸಿದ ಸಂಗೀತ ಕಾರ್ಯಕ್ರಮದಲ್ಲಿ  ಕೇಸಿಗೆ ಆಸ್ಪದವಾದ ಘಟನೆ ಸಂಭವಿಸಿದೆ. ಕನ್ನಡ ಹಾಡು ಹಾಡಲು ಓರ್ವ …

ವಾಹನ ಅಪಘಾತ: ವಿದ್ಯಾರ್ಥಿಗೆ ಒಂದು ಕೋಟಿ ರೂ. ನಷ್ಟ ಪರಿಹಾರ ನೀಡಲು ತೀರ್ಪು

ಕಾಸರಗೋಡು: ವಾಹನ ಅಪ ಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಗೆ ಒಂದು ಕೋಟಿ ರೂ. ನಷ್ಟ ಪರಿಹಾರ ನೀಡುವಂತೆ ಕಾಸರಗೋಡು ಮೋಟಾರು ಆಕ್ಸಿಡೆಂಟ್ ಕ್ಲೈಮ್ ಟ್ರಿಬ್ಯೂನಲ್ ತೀರ್ಪು ನೀಡಿದೆ. ಇದರಂತೆ ಪ್ಲಸ್‌ವನ್ ವಿದ್ಯಾರ್ಥಿ ಚೆಮ್ನಾಡು ಪಂಚಾಯತ್‌ನ ವಳಪೋತ್ತ್ ತಾನಂ ಪುರಕ್ಕಲ್ ವೀಡಿನ ಸುಕುಮಾರನ್-ಪ್ರೇಮ ದಂಪತಿ ಪುತ್ರ ಅಭಿಜಿತ್ (17) ಎಂಬಾತನಿಗೆ  ಕೋಮಲ್ ಸುಂದರಂ ಜನರಲ್ ಇನ್ಶೂರೆನ್ಸ್ ಕಂಪೆನಿ ಈ ನಷ್ಟಪರಿಹಾರ ನೀಡಬೇಕಾಗಿದೆ. ಚೆಮ್ನಾಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಯಾಗಿರುವ ಅಭಿಜಿತ್ 2022 ಎಪ್ರಿಲ್ 27ರಂದು ಬೆಳಿಗ್ಗೆ …

ಮಾದಕದ್ರವ್ಯ ವ್ಯಸನ ಸಂದೇಶ ಯಾತ್ರೆ  5ರಿಂದ: ಲಾಂಛನ ಬಿಡುಗಡೆ

ಕಾಸರಗೋಡು: ಮಾದಕದ್ರವ್ಯ ವ್ಯಸನದ ವಿರುದ್ಧ ರಾಜ್ಯ ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ಮೇ ೫ರಂದು ಕಾಸರಗೋಡಿನಿಂದ ಆರಂಭಗೊಳ್ಳುವ ಸಂದೇಶ ಯಾತ್ರೆಯ ಲಾಂಛನವನ್ನು ಕ್ರೀಡಾ ಸಚಿವ ವಿ. ಅಬ್ದುಲ್ ರಹ್ಮಾನ್ ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ಪ್ರಕಾಶನಗೈದರು. ಮೇ ೫ರಂದು ಕಾಸರಗೋ ಡಿನಿಂದ ಆರಂಭಗೊಳ್ಳುವ ಈ ಸಂದೇಶ ಯಾತ್ರೆ ಕ್ರೀಡಾ ಸಚಿವ ಎ. ಅಬ್ದುಲ್ ರಹ್ಮಾನ್‌ರ ನೇತೃತ್ವದಲ್ಲಿ ನಡೆಯಲಿದೆ. ಈ ಸಂದೇಶಯಾತ್ರೆ ವಿವಿಧ ದಿನಾಂಕದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರ್ಯಟನೆ ನಡೆಸಿದ ಬಳಿಕ ಮೇ ೨೨ರಂದು ಎರ್ನಾಕು ಳಂನಲ್ಲಿ ಸಮಾಪ್ತಿಹೊಂದಲಿದೆ. ಸಮಾರೋಪ …

ಸುಹಾಸ್ ಶೆಟ್ಟಿ ಕೊಲೆ: ಆರೋಪಿಗಳ ಗುರುತು ಪತ್ತೆ

ಮಂಗಳೂರು: ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳ ಗುರುತು ಸಿಕ್ಕಿದ್ದು, ಅವರನ್ನು ಶೀಘ್ರ ಬಂಧಿಸಲಾಗುವುದೆಂದು ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಇಂದು ಬೆಳಿಗ್ಗೆ ಸುದ್ಧಿಗಾರರಲ್ಲಿ ತಿಳಿಸಿದ್ದಾರೆ. ಸುಹಾಸ್ ಹತ್ಯೆ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆದ್ದರಿಂದ ನಾವು ಭದ್ರತೆಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿದ್ದೇವೆ. ಸುಹಾಸ್‌ರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಅಂತಿಮ ಕ್ರಿಯೆಗಳ ಸಿದ್ಧತೆಯನ್ನು ನಡೆಸಲಾಗುತ್ತಿದೆ. ಆ ವೇಳೆ ಇನ್ನಷ್ಟು ಹೆಚ್ಚಿನ ಭದ್ರತೆ ಏರ್ಪಡಿಸಲಾಗುವುದು. ಜನತೆ …

ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕಗ್ಗೊಲೆ: ನಿಷೇಧಾಜ್ಞೆ ಜ್ಯಾರಿ; ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ

ಮಂಜೇಶ್ವರ: ಮಂಗಳೂರು ಬಜಪೆ ಕಿನ್ನಿಪದವಿನ ಬಜರಂಗದಳ ಕಾರ್ಯ ಕರ್ತ ಸುಹಾಸ್ ಶೆಟ್ಟಿ (36)ರನ್ನು ನಿನ್ನೆ ರಾತ್ರಿ 8.30ರ ಸುಮಾರಿಗೆ ಮಂಗಳೂರು ಹೊರ ವಲಯದ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕಿನ್ನಿಪದವಿನಲ್ಲಿ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ  ಬರ್ಬರ ವಾಗಿ ಕೊಲೆ ನಡೆಸಿದುದನ್ನು ಪ್ರತಿಭಟಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇಂದು ನೀಡಿರುವ ಬಂದ್‌ಗೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಸ್ತಬ್ದಗೊಳಿಸಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿ.ಎನ್.ಎಸ್. ಕಲಂ ೧೬೩ರ ಅಡಿ …

ಹಲಸಿನಕಾಯಿ ತುಂಡರಿಸುವ ಕತ್ತಿ ಮೇಲೆ ಬಿದ್ದು ಬಾಲಕ ದಾರುಣ ಮೃತ್ಯು

ಬದಿಯಡ್ಕ: ತಾಯಿ ಹಲಸಿನಕಾಯಿ ತುಂಡರಿಸುತ್ತಿದ್ದ ವೇಳೆ ಹಲಗೆಯಲ್ಲಿ ಜೋಡಿಸಿದ ಕತ್ತಿಯ ಮೇಲೆ ಬಿದ್ದು ಪುತ್ರ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಬದಿಯಡ್ಕ ಬಳಿಯ ಪಿಲಾಂಕಟ್ಟೆಯ ಆಟೋ ಚಾಲಕ ಅಮೀರ್ ಕೋಳಾರಿ- ಸುಲೈಕಾ ದಂಪತಿಯ ಅವಳಿ ಮಕ್ಕಳಲ್ಲಿ ಓರ್ವನಾದ ಹುಸೈನ್ ಶಹಬಾಸ್ (8) ಮೃತಪಟ್ಟ ದುರ್ದೈವಿಯಾಗಿ ದ್ದಾನೆ. ಬುಧವಾರ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ತಾಯಿಯೊಂದಿಗೆ ಆಲಂಪಾಡಿ ಬೆಳ್ಳೂರಡ್ಕದ ಮನೆಗೆ ಹುಸೈನ್ ಶಹಬಾಸ್ ತಲುಪಿದ್ದನು. ತಾಯಿ ಅಡುಗೆ ಕೋಣೆ ಭಾಗದಲ್ಲಿ ಕುಳಿತು ಹಲಸಿನಕಾಯಿ ತುಂಡರಿಸುತ್ತಿದ್ದರು. ಆ ವೇಳೆ …

ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋರಿಕ್ಷಾಕ್ಕೆ ಕಾರು ಢಿಕ್ಕಿ: ಚಾಲಕ ಸ್ಥಳದಲ್ಲೇ ಮೃತ್ಯು

ಉಪ್ಪಳ: ಆಟೋರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಳ ಗೇಟ್ ರಾಷ್ಟಿçÃಯ ಹೆದ್ದಾರಿಯಲ್ಲಿ ಬುಧವಾರ ಸಂಜೆ 4.45ರ ವೇಳೆ ನಡೆದಿದೆ. ಕಾಞಂಗಾಡ್ ಬಳಿಯ ನಿಟ್ಟಡುಕಂ ನಿವಾಸಿ ಆಟೋರಿಕ್ಷಾ ಚಾಲಕ ಮೋಹನನ್ (51) ಎಂಬವರು ಮೃತಪಟ್ಟಿದ್ದಾರೆ. ಇವರು ಆಟೋರಿಕ್ಷಾದಲ್ಲಿ ತಲಪಾಡಿಯಲ್ಲಿರುವ ದೈವಸ್ಥಾನಕ್ಕೆ ದೈವದ ಮೊಗಗಳನ್ನು ತಲುಪಿಸಲು ಕಾಞಂಗಾಡಿನಿAದ ಹೊರಟಿದ್ದರು. ಈ ಮಧ್ಯೆ ಉಪ್ಪಳ ಗೇಟ್‌ಗೆ ತಲುಪಿದಾಗ ಎದುರು ಭಾಗದಿಂದ ಅಮಿತ ವೇಗದಲ್ಲಿ ಬಂದ ಕಾರು ಡಿಕ್ಕಿಹೊಡೆದಿದೆ. ಇದರಿಂದ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಗ್ನಿ …

ವಿವಿಧೆಡೆಗಳಲ್ಲಿ ಅಬಕಾರಿ ದಾಳಿ: ಮಾದಕದ್ರವ್ಯ, ಕರ್ನಾಟಕ ಮದ್ಯ, ಹುಳಿರಸ ವಶ

ಕಾಸರಗೋಡು: ಅಬಕಾರಿ ತಂಡ  ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಸಿದ ಕಾರ್ಯಾಚ ರಣೆಗಳಲ್ಲಾಗಿ ಮಾದಕದ್ರವ್ಯ, ಕರ್ನಾಟಕ ನಿರ್ಮಿತ ಮದ್ಯ ಹಾಗೂ ಹುಳಿರಸ ಪತ್ತೆಹಚ್ಚಿ ವಶಪಡಿಸಿಕೊಂ ಡಿದೆ. ನಗರದ ಕರಂದಕ್ಕಾಡ್‌ನ ಮನೆಯೊಂದರ ಬಳಿ ಕಾಸರಗೋಡು ಎಕ್ಸೈಸ್ ರೇಂಜ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 34.56 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿದೆ. ಇದಕ್ಕೆ ಸಂಬಂಧಿಸಿ ದಿನೇಶ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆಯೆಂದೂ ಆತ ಆವೇಳೆ ಪರಾರಿಯಾಗಿದ್ದು, ಬಂಧಿಸಲು ಸಾಧ್ಯವಾಗಿಲ್ಲವೆಂದು ಅಬಕಾರಿ ಅಧಿಕಾರಿಗಳು …

ಕುಂಜತ್ತೂರು: ಆಟೋ ಚಾಲಕನನ್ನು ಇರಿದು ಕೊಲೆಗೈಯ್ಯಲು ಬಳಸಿದ ಚಾಕು ಬಾವಿಯಲ್ಲಿ ಪತ್ತೆ

ಮಂಜೇಶ್ವರ: ಮಂಗಳೂರು ಮುಲ್ಕಿ ಬಳಿಯ ಕೊಲ್ನಾಡು ನಿವಾ ಸಿಯೂ ಮಂಗಳೂರಿನಲ್ಲಿ ಆಟೋ ಚಾಲಕನಾಗಿದ್ದ ಮೊಹಮ್ಮದ್ ಶರೀಫ್ (52)  ಎಂಬವರನ್ನು ಕೊಲೆಗೈಯ್ಯಲು ಬಳಸಿದ ಚಾಕುವನ್ನು ಕುಂಜತ್ತೂರು ಬಳಿಯ ಅಡ್ಕಪ್ಪಳ್ಳ ಮಾನಿಗುಡ್ಡೆ ಎಂಬಲ್ಲಿನ ಬಾವಿಯಲ್ಲಿ ಪತ್ತೆಹಚ್ಚಲಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾಗಿ ರಿಮಾಂ ಡ್‌ನಲ್ಲಿದ್ದ ಸುರತ್ಕಲ್ ಬಳಿಯ ಕಲ್ಲಾಪುವಿನ ಅಭಿಷೇಕ್ ಶೆಟ್ಟಿ (25)ಯನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದಾಗ ಕೊಲೆಗೆ ಬಳಸಿದ ಚಾಕುವನ್ನು ಮಾನಿಗುಡ್ಡೆಯಲ್ಲಿರುವ ಬಾವಿಗೆ  ಎಸೆದಿರುವುದಾಗಿ ಹೇಳಿಕೆ ನೀಡಿದ್ದನು. ಈ ಹಿನ್ನೆಲೆಯಲ್ಲಿ ನಿನ್ನೆ ಉಪ್ಪಳ ಅಗ್ನಿಶಾಮಕದಳದ ಸಹಾಯದೊಂದಿಗೆ …