ಕೇರಳ ಲಾಟರಿ: ಇನ್ನು ಮುಂದೆ ಪ್ರಥಮ ಬಹುಮಾನ ೧ಕೋಟಿ ರೂ. ಟಿಕೆಟ್‌ಗೆ 50ರೂ.

ಕಾಸರಗೋಡು: ಒಂದು ಕೋಟಿ ರೂಪಾಯಿ ಪ್ರಥಮ ಬಹುಮಾನ ವುಳ್ಳ 50 ರೂಪಾಯಿಯ ನೂತನ ಲಾಟರಿ ಟಿಕೆಟ್‌ನ ಮೊದಲ ಡ್ರಾ ಮೇ 2ರಂದು ನಡೆಯಲಿದೆ. ಶುಕ್ರವಾರದ ‘ಸುವರ್ಣ ಕೇರಳಂ’ ಟಿಕೆಟ್ ಡ್ರಾ ಅಂದು ನಡೆಯಲಿ ರುವುದು ದ್ವಿತೀಯ ಬಹುಮಾನ 30 ಲಕ್ಷ ರೂಪಾಯಿ, ತೃತೀಯ ಬಹುಮಾನ 25 ಲಕ್ಷ ರೂಪಾಯಿ ಆಗಿರುವುದು. ರಾಜ್ಯದಲ್ಲಿ ಏಳು ಲಾಟರಿ ಟಿಕೆಟ್‌ಗಳ ಪ್ರಥಮ ಬಹುಮಾನ ಒಂದು ಕೋಟಿ ರೂಪಾಯಿಯಾಗಿ ನಿಗದಿಪಡಿಸಿದ್ದಲ್ಲದೆ ಟಿಕೆಟ್ ದರವನ್ನು 50 ರೂಪಾಯಿಗೇರಿಸಿ ಲಾಟರಿ ಇಲಾಖೆ ಆದೇಶ ಹೊರಡಿ ಸಿದೆ. …

ಎಸ್‌ಎಸ್‌ಎಫ್ ಸ್ಥಾಪಕ ದಿನ: ಉಪ್ಪಳ, ಮಂಜೇಶ್ವರ ವಲಯದಲ್ಲಿ ಇಂದು ಸಮಾವೇಶ

ಕುಂಬಳೆ: ಎಸ್‌ಎಸ್‌ಎಫ್ ಸ್ಥಾಪಕ ದಿನದಂಗವಾಗಿ ಉಪ್ಪಳ ಡಿವಿಶನ್, ಮಂಜೇಶ್ವರ ಡಿವಿಶನ್ ಆಶ್ರಯದಲ್ಲಿ ಸೆಲೆಬ್ರಿಟಿಂಗ್ ಹ್ಯುಮ್ಯಾನಿಟಿ ಎಂಬ ಹೆಸರಲ್ಲಿ ಇಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಉಪ್ಪಳ ಡಿವಿಶನ್ ಸಮ್ಮೇಳನ ಮುಟ್ಟಂ ಮಕ್ದೂಮ್‌ನಲ್ಲಿ ನಡೆಯಲಿದೆ. ಮಂಜೇಶ್ವರ ಡಿವಿಶನ್ ಸಮ್ಮೇಳನ ಕೋಳ್ಯೂರುಪದವಿನಲ್ಲಿ ನಡೆಯಲಿದೆ. ಅಪರಾಹ್ನ ೧ ಗಂಟೆಗೆ ಆರಂಭಗೊಳ್ಳುವ ಸಮ್ಮೇಳನ ಸಂಜೆ 5 ಗಂಟೆಗೆ ವಿದ್ಯಾರ್ಥಿ ರ‍್ಯಾಲಿಯೊಂದಿಗೆ ಸಮಾಪ್ತಿಗೊಳ್ಳಲಿದೆ. ಕಾರ್ಯಕ್ರಮಗಳಲ್ಲಿ ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಸಖಾಫಿ ಉಪ್ಪಳ ವಲಯ ಸಮಾವೇಶವನ್ನು ಉದ್ಘಾಟಿಸುವರು.  ಮೊಹಮ್ಮದ್ ಅಲಿ ಅಹ್ಸಲಿ ಮುಸೋಡಿ, ಎಸ್‌ಎಸ್‌ಎಫ್ ರಾಜ್ಯ …

ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿ ರೀಲ್ಸ್ ಚಿತ್ರೀಕರಣ ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರನ್ನು ಪೊಲೀಸರು ಬೆನ್ನಟ್ಟಿ ಸೆರೆ

ಕುಂಬಳೆ: ಅಪಾಯಕಾರಿ ರೀತಿಯಲ್ಲಿ ಫೋರ್ಚುನರ್ ಕಾರು ಚಲಾಯಿಸಿ ರೀಲ್ಸ್ ಚಿತ್ರೀಕರಿಸುತ್ತಿದ್ದ ತಂಡದ ಓರ್ವನನ್ನು ಪೊಲೀಸರು ಬೆನ್ನಟ್ಟಿ ಸೆರೆಹಿಡಿದಿದ್ದಾರೆ. ಕಾರು ಚಲಾಯಿಸಿದ ವ್ಯಕ್ತಿ ಸೆರೆಗೀಡಾಗಿದ್ದು, ಆತನನ್ನು ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಉಪ್ಪಳ ಸೋಂಕಾಲು ಕೋಡಿ ಬೈಲಿನ ಮುಹಮ್ಮದ್ ರಿಯಾಸ್ (19) ಎಂಬಾತ ಸೆರೆಗೀಡಾದ ವ್ಯಕ್ತಿ. ನಿನ್ನೆ ಸಂಜೆ ೫.೩೦ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಸೀತಾಂಗೋಳಿ-ಮಾಯಿಪ್ಪಾಡಿ ರಸ್ತೆಯಲ್ಲಿ ರಾಜಸ್ತಾನ್ ಮಾರ್ಬಲ್ ಸಮೀಪದ ಮೈದಾನದಲ್ಲಿ ಘಟನೆ ನಡೆದಿದೆ. ಕಾರನ್ನು ಅಪಾಯಕಾರಿ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದುದಾಗಿ ದೂರಲಾಗಿದೆ. ವಿಷಯ ತಿಳಿದು …

ಬಾಕ್ರಬೈಲಿನಲ್ಲಿ ಯುವಕನಿಗೆ ಗುಂಡೇಟಿನಿಂದ ಗಂಭೀರ ಗಾಯ

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಕ್ರಬೈಲಿನಲ್ಲಿ ಯುವಕನೋರ್ವ ಗುಂಡೇಟುತಗಲಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬಾಕ್ರಬೈಲು ನಿವಾಸಿ ಸವಾದ್ ಎಂಬವರಿಗೆ ಗುಂಡು ತಗಲಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 10.30ರ ವೇಳೆ ಘಟನೆ ನಡೆದಿದೆ. ಗುಡ್ಡೆಯ ಮೇಲಿಂದ ಬೆಳಕು ಕಂಡು ಬಂದ ಹಿನ್ನೆಲೆಯಲ್ಲಿ ಸವಾದ್ ಅಲ್ಲಿಗೆ ತೆರಳಿದ್ದಾರೆಂದೂ ಈ ವೇಳೆ ಅವರಿಗೆ ಗುಂಡೇಟು ತಗಲಿದೆಯೆಂಬುದಾಗಿ ಪೊಲೀಸರಿಗೆ ಲಭಿಸಿದ ಪ್ರಾಥಮಿಕ ಮಾಹಿತಿಯಾಗಿದೆ. ಪೊಲೀಸರು ಸ್ಥಳದಲ್ಲಿ ನಡೆಸಿದ ತಪಾಸಣೆ ವೇಳೆ ಇಲಿಗಳನ್ನು ಕೊಲ್ಲಲು ಬಳಸುವ ಉಪಕರಣದಿಂದ …

ಎಂಡಿಎಂಎ ಸಹಿತ ಓರ್ವ ಸೆರೆ

ಮಂಜೇಶ್ವರ: ಎಂಡಿಎಂಎ ಸಹಿತ ಓರ್ವನನ್ನು ಮಂಜೇಶ್ವರ  ಪೊಲೀಸರು ಸೆರೆಹಿಡಿದಿದ್ದಾರೆ.1.97 ಗ್ರಾಂ ಎಂಡಿಎಂಎ ಸಹಿತ ಉಳ್ಳಾಲದ ಮಾಸ್ತಿಕಟ್ಟೆ ಆಜಾದ್ ನಗರದ ಶೈನಾಜ್ ಕೊಟೇಜ್ ನಿವಾಸಿ ಫಸಲ್ ಹುಸೈನ್ (32)ನನ್ನು ಶನಿವಾರ ರಾತ್ರಿ ತಲಪ್ಪಾಡಿಯಿಂದ ಸೆರೆಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಿಐ ಅನೂಪ್ ಕುಮಾರ್ ನೇತೃತ್ವದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ  ರಸ್ತೆ ಬದಿಯಲ್ಲಿದ್ದ ಈತನನ್ನು ಪರಿಶೀಲಿಸಿದಾಗ ಎಂಡಿಎಂಎ ಪತ್ತೆಯಾಗಿದೆ. ಬಳಿಕ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಲ್ಯೋಟ್‌ನಲ್ಲಿ ವೃದ್ಧನ ಮೃತದೇಹ ಬಾವಿಯಲ್ಲಿ ಪತ್ತೆ

ಪೆರಿಯ:  ಕಲ್ಯೋಟ್‌ನಲ್ಲಿ ವೃದ್ಧ  ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಕಲ್ಯೋಟ್ ಭಗವತೀ ಕ್ಷೇತ್ರ ಸಮೀಪದ ಕುಂಞಾಚ್ಚಂ ವೀಟಿಲ್ ವಿ. ನಾರಾಯಣ (60)ರನ್ನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾ ಗಿದ್ದು, ಇವರು ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದಾರೆನ್ನಲಾಗಿದೆ. ನಿನ್ನೆ ಸಂಜೆ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ಮಧ್ಯೆ ಮೃತದೇಹ ಬಾವಿಯಲ್ಲಿ ಪತ್ತೆಹಚ್ಚಲಾಗಿದೆ. ಹಗ್ಗ ಬಾವಿಗೆ ಜೋತಾಡಿಕೊಂಡಿತ್ತು. ಇದನ್ನು ನೋಡಿ ಬಾವಿ ಪರಿಶೀಲಿಸಿ ದಾಗ ಮೃತದೇಹ ಕಂಡುಬಂದಿದೆ. ನೀರು ಸೇದುತ್ತಿರುವ ಮಧ್ಯೆ ಬಾವಿಗೆ  ಬಿದ್ದಿರ ಬೇಕೆಂದು ಶಂಕಿಸಲಾಗಿದೆ. ಮೃತದೇ ಹವನ್ನು ಮೇಲೆತ್ತಿ ಮಹಜರಿಗಾಗಿ …

ಅಬಕಾರಿ ದಾಳಿ: ಕರ್ನಾಟಕ ಮದ್ಯ, ಬಿಯರ್ ಸಹಿತ ಇಬ್ಬರ ಸೆರೆ

ಕಾಸರಗೋಡು: ಅಬಕಾರಿ ತಂಡ ಎರಡೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ಮದ್ಯ ಮತ್ತು ಬಿಯರ್ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಕಾಸರಗೋಡು ಎಕ್ಸೈಸ್ ಸರ್ಕಲ್ ಕಚೇರಿಯ ಸರ್ಕಲ್ ಇನ್ಸ್‌ಪೆಕ್ಟರ್ ಅರುಣ್ ಡಿ.ಯವರ ನೇತೃತ್ವದ ಅಬಕಾರಿ ತಂಡ ಪೆರ್ಲಕ್ಕೆ ಸಮೀಪದ ಶೇಣಿಯಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ ಸ್ಕೂಟರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4.32 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಶೇಣಿ, ಗೋಳಿತ್ತಡ್ಕದ ಹರೀಶ್ ಅಲಿಯಾಸ್ ಶಶಿಧರ (37) ಎಂಬಾತನನ್ನು ಅಬಕಾರಿ ತಂಡ …

ಕಾರಿನಲ್ಲಿ 52 ಕಿಲೋ ಗಾಂಜಾ ಸಾಗಾಟ ಆರೋಪಿಗೆ 10 ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನೊಳಗೆ ಗುಪ್ತ ಸೆರೆ ನಿರ್ಮಿಸಿ ಅದರೊಳಗೆ 52 ಕಿಲೋ ಗಾಂಜಾ ಬಚ್ಚಿಟ್ಟು ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಹತ್ತು ವರ್ಷ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕೋಟ್ಟಯಂ ಪೊನ್ ಕುನಂ, ಚಿರಂಗೆಡವು ಕಾನಾಪರಂಬಿಲ್‌ನ ಕೆ.ಎ. ನವಾಜ್ (44) ಎಂಬಾತ ನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ …

ನಗರದಲ್ಲಿ ಬಸ್‌ಗಳು ಢಿಕ್ಕಿ ಹೊಡೆದು 25 ಮಂದಿಗೆ ಗಾಯ

ಕಾಸರಗೋಡು: ನಗರದ ಪೊಲೀಸ್ ಠಾಣೆಯ ಎದುರುಗಡೆ ಬ್ಯಾಂಕ್ ರಸ್ತೆಯಲ್ಲಿ ನಿನ್ನೆ ಸಂಜೆ ಖಾಸಗಿ ಟೂರಿಸ್ಟ್ ಬಸ್ ಮತ್ತು ವಿವಾಹ ತಂಡ ಸಂಚರಿಸುತ್ತಿದ್ದ ಬಸ್ ಪರಸ್ಪರ  ಢಿಕ್ಕಿ ಹೊಡೆದು ೨೫ ಮಂದಿ ಗಾಯಗೊಂಡ ಘಟನೆ ನಡೆದಿದೆ. ಮಧೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಆಲಂಪಾಡಿಯಿಂದ ಮದುವೆ ತಂಡದವರನ್ನು ಹೇರಿಕೊಂಡು ನೆಲ್ಲಿಕುಂಜೆಗೆ ಹೋಗುತ್ತಿದ್ದ ಟೂರಿಸ್ಟ್ ಬಸ್ ಪರಸ್ಪರ ಢಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಖಾಸಗೀ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ. ವಿಷಯ ತಿಳಿದ ಕಾಸರಗೋಡು ಅಗ್ನಿಶಾಮಕ …

ಟೋಪಿಯೊಳಗೆ ಬಚ್ಚಿಟ್ಟು ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಟೋಪಿಯೊಳಗೆ ಬಚ್ಚಿಟ್ಟು 5.13 ಗ್ರಾಂ ಮಾದಕ ವಸ್ತುವಾದ ಎಂಡಿಎಂಎ ಸಾಗಿಸಿದ ಯುವಕನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಅಡ್ಕತ್ತ್‌ಬೈಲ್‌ನ ಮುಹಮ್ಮದ್ ಸುರೈಬ್ (26) ಬಂಧಿತ ಆರೋಪಿ. ಕೂಡ್ಲು ಚೌಕಿಯಿಂದ ಮೊನ್ನೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈತ ಬೆಂಗಳೂರಿನಿಂದ ಬರುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.