ಕೃತಿ ಬಿಡುಗಡೆ 27ರಂದು

ಕಾಸರಗೋಡು :ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಬೇಕಲ ರಾಮನಾಯಕ ಸ್ಮರಣಾಂಜಲಿ, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಂಧ್ಯಾರಾಣಿ ಟೀಚರ್ ನೇತೃತ್ವದ ನುಳ್ಳಿಪ್ಪಾಡಿಯ ಕನ್ನಡ ಭವನ ಪ್ರಕಾಶನದಿಂದ ಪ್ರಕಟಗೊಂಡ “ಮೌನ ಮಾತಾದಾಗ” ಕವನ ಸಂಕಲನ ಎ.27ರಂದು ಅಪರಾಹ್ನ 2ಗಂಟೆಗೆ ಬಿಡುಗಡೆ ಗೊಳ್ಳಲಿದೆ. ಕಾಸರಗೋಡು ಬೀರಂತಬೈಲ್‌ನ ಮೇಘಾ ಶಿವರಾಜ್ ಬರೆದ ಈ ಕವನ ಸಂಕಲನವನ್ನು ದಕ್ಷಿಣ ಕನ್ನಡ ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟ ಗೌರವ ಅಧ್ಯಕ್ಷ ಡಾ. ಜೆ. ರವೀಂದ್ರ ಮಂಗಳೂರು ಜಿಲ್ಲಾ ರಾಮರಾಜ ಕ್ಷತ್ರಿಯ ಸೇವಾ ಸಂಘ …

ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರಿಗೆ ಬಿಜೆಪಿ ಜಿಲ್ಲಾ ಸಮಿತಿಯಿಂದ ಸ್ಮಾರಕ

ಕಾಸರಗೋಡು: ಬಿಜೆಪಿ ಕಾರ್ಯಕರ್ತ ರಿಂದ ಧನ ಸಂಗ್ರಹ ನಡೆಸಿ ಜಿಲ್ಲೆಯಲ್ಲಿ ಸಂವಿಧಾನಶಿಲ್ಪಿಯಾದ ಡಾ. ಬಿ.ಆರ್. ಅಂಬೇಡ್ಕರ್‌ರ ಪ್ರತಿಮೆಯನ್ನು ಹಾಗೂ ಸೂಕ್ತವಾದ ಸ್ಮಾರಕವನ್ನು ನಿರ್ಮಿಸಲು ಬಿಜೆಪಿ ಮುಂದಾಗಲಿದೆ ಎಂದು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದರು. ಡಾ. ಬಿ.ಆರ್. ಅಂಬೇಡ್ಕರ್‌ರ ಜಯಂತಿಯಂ ಗವಾಗಿ ಜಿಲ್ಲಾ ಸಮಿತಿ ಆಯೋಜಿಸಿದ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.  ಈ ಹಿಂದಿನ ಕಾಲಘಟ್ಟ ಗಳಲ್ಲಿ ಅಂಬೇಡ್ಕರ್‌ಗೆ ಭಾರತರತ್ನ ನಿಷೇಧಿಸಿದ ಕಾಂಗ್ರೆಸ್ ಈಗ ಅಂಬೇಡ್ಕರ್‌ರೊಂದಿಗೆ ಪ್ರೀತಿ ತೋರಿಸುತ್ತಿದೆ ಎಂದು ಅಶ್ವಿನಿ ಆರೋಪಿಸಿದರು. ರಾಜ್ಯ ಕೌನ್ಸಿಲ್ ಸದಸ್ಯ …

ನೆಟ್ಟಣಿಗೆ ದೇವಸ್ಥಾನದಲ್ಲಿ ಶ್ರೀ ಭೂತ ಬಲಿ ಉತ್ಸವ 30ರಿಂದ

ಮುಳ್ಳೇರಿಯ: ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಶ್ರೀ ಭೂತಬಲಿ ಉತ್ಸವ ಎಪ್ರಿಲ್ 30ರಿಂದ ನಡೆಯಲಿದೆ. 30ರಂದು ರಾತ್ರಿ ಉಗ್ರಾಣ ತುಂಬಿಸುವುದು, ಹುಲಿಭೂತ, ಧೂಮಾವತಿ, ಪಟ್ಟದ ಅರಸ, ಬೀರ್ನಾಳ್ವ ಗುಳಿಗ ದೈವಗಳಿಗೆ ತಂಬಿಲ ಸೇವೆ, ಮೇ 1ರಂದು ಬೆಳಿಗ್ಗೆ ಏಕಾದಶ ರುದ್ರ ಪೂಜೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ 7.30ಕ್ಕೆ ಶ್ರೀ ದೇವರ ಶೃಂಗಾರ ಬಲಿ ಉತ್ಸವ, ಅನ್ನ ಸಂತರ್ಪಣೆ, ೨ರಂದು ಬೆಳಿಗ್ಗೆ ೯ಕ್ಕೆ ಶ್ರೀ ದೇವರ ದರ್ಶನ ಬಲಿ, ಬಟ್ಲು …

ನೇತ್ರಾವತಿ ಕುಟುಂಬಶ್ರೀಗೆ ಪ್ರಶಸ್ತಿ

ಕಾಸರಗೋಡು: ಕಾಸರಗೋಡು ನಗರಸಭೆಯ ಸಿಡಿಎಸ್ ನಡೆಸಿದ ಫುಡ್‌ಫೆಸ್ಟ್‌ನಲ್ಲಿ ೯ನೇ ವಾರ್ಡ್ ನೇತ್ರಾವತಿ ಕುಟುಂಬಶ್ರೀ ಅಣಂಗೂರು ಬಹುಮಾನ ಗಳಿಸಿದೆ. ಕುಟುಂಬಶ್ರೀಯ ವಿವಿಧ ವಿಷಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಲ್ಲಾ ಚಟುವಟಿಕೆಗಳನ್ನು ಸದಸ್ಯೆಯರು ಒಗ್ಗಟ್ಟಿನಿಂದ ನಿರ್ವಹಿಸಿದ ಹಿನ್ನೆಲೆಯಲ್ಲಿ ಈ ಕುಟುಂಬಶ್ರೀಗೆ ಪ್ರಶಸ್ತಿ ಲಭಿಸಿದೆ. ಕುಟುಂಬಶ್ರೀಯ ಅಧ್ಯಕ್ಷೆಯಾಗಿ ನಿರ್ಮಲ ಚಂದ್ರಶೇ ಖರ್ ಹಾಗೂ ಕಾರ್ಯದರ್ಶಿ ಯಾಗಿ ಆಶಾ ಹರೀಶ್ ಸೇವೆ ಸಲ್ಲಿಸುತ್ತಿದ್ದು, ಒಟ್ಟು 20 ಸದಸ್ಯರು ಒಳಗೊಂಡಿದ್ದಾರೆ.

ಇಡಿಯಡ್ಕ ದೇವಸ್ಥಾನದಲ್ಲಿ ಮೇ ೫ರಂದು ರಾಷ್ಟ್ರವಿಜಯ ಯಜ್ಞ, ಪವಮಾನ ಹೋಮ

ಪೆರ್ಲ: ರಾಷ್ಟ್ರವಿಜಯ ಯಜ್ಞ ಸಮಿತಿ ಪೆರ್ಲ ಇದರ ನೇತೃತ್ವದಲ್ಲಿ ಮೇ ೫ರಂದು ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದಲ್ಲಿ ರಾಷ್ಟ್ರವಿಜಯ ಯಜ್ಞ ಹಾಗೂ ಪವಮಾನ ಹೋಮ ನಡೆಯಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಆಮಂತ್ರಿತ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ 82 ಸಂವತ್ಸರಗಳನ್ನು ಪೂರೈಸಿರುವ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಯಜ್ಞ ಹಾಗೂ ಹೋಮ ನಡೆಸಲಾಗುವುದು. ಅಂದು ಬೆಳಿಗ್ಗೆ 10.45ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ …

ವಿವಿಧೆಡೆ ಅಬಕಾರಿ ದಾಳಿ: ಅಮಲು ಪದಾರ್ಥ, ಮದ್ಯ ವಶ; ಮೂವರ ಸೆರೆ

ಕಾಸರಗೋಡು: ಅಬಕಾರಿ ತಂಡ ನಿನ್ನೆ ಜಿಲ್ಲೆಯ ವಿವಿಧೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಅಮಲು ಪದಾರ್ಥ ಮತ್ತು ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಉದುಮ ಪಡಿಞಾರ್‌ನಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಶೋಬ್ ಕೆ.ಎಸ್.ರ ನೇತೃತ್ವದ ತಂಡ ನಿನ್ನೆ ನಡೆಸಿದ ದಾಳಿಯಲ್ಲಿ ಅಮಲು ಪದಾರ್ಥವಾದ 17.23 ಗ್ರಾಂ ಮೆಥಾಫಿಟಮಿನ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಉದುಮ ಪಡಿಞಾರ್ ಬೇವೂರಿನ ಪಿ.ಎಂ. ಮಂಜಿಲ್ ನಿವಾಸಿ ಮೊಹಮ್ಮದ್ ರಾಸಿಕ್ ಪಿ.ಎಂ. (29) ಎಂಬಾತನನ್ನು ಬಂಧಿಸಿ …

ಅಬಕಾರಿ ಅಧಿಕಾರಿಗಳಿಂದ ಬೆದರಿಕೆ ಆರೋಪ: ಪೆರ್ಲದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಲಾಟರಿ ಏಜೆಂಟ್

ಪೆರ್ಲ: ಪೆರ್ಲ ಚೆಕ್‌ಪೋಸ್ಟ್ ಬಳಿಯ ಲಾಟರಿ ಮಾರಾಟಗಾರನೂ, ವಿಕಲಚೇತನರಾದ ಕನ್ನಟಿಕಾನದ ಮೊಯ್ದೀನ್ ಎಂಬವರು ನ್ಯಾಯ ದೊರಕಿಸಬೇಕೆಂಬ  ಬೇಡಿಕೆಯೊಡ್ಡಿ ಮೂರು ದಿನಗಳಿಂದ ಲಾಟರಿ ಅಂಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ಅಬಕಾರಿ ತಂಡ ಮೊಯ್ದೀನ್‌ರ ಲಾಟರಿ ಅಂಗಡಿಗೆ ತಲುಪಿ ಅವರನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿತ್ತು. ಅಂಗಡಿಯಲ್ಲಿ ಅನಧಿಕೃv ವಾಗಿ ಮದ್ಯ ಮಾರಾಟ ನಡೆಯು ತ್ತಿದೆಯೆಂದು ಆರೋಪಿಸಿ ಮೊಯ್ದೀನ್‌ರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯ ಮೊಯ್ದೀನ್‌ರಿಗೆ 22 ದಿನಗಳ ಸಜೆ ವಿಧಿಸಿತ್ತು. ವಾರದಲ್ಲಿ ಒಂದು ದಿನ …

ಪಹಲ್ಗಾಮ್ ಭಯೋತ್ಪಾದಕರ ದಾಳಿ : ಭಾರತದ ಕ್ರಮಕ್ಕೆ ಪಾಕ್ ಗಢಗಢ; ಉನ್ನತ ಮಟ್ಟದ ಸಭೆ ಕರೆದ ಶೆಹ್‌ಬಾಜ್ ಶರೀಫ್

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ  26  ಮಂದಿಯನ್ನು ಬಲಿತೆಗೆದುಕೊಂಡ ಬೆನ್ನಲ್ಲೇ ಅದಕ್ಕೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ವಿರುದ್ಧ ಕೈಗೊಂಡ ಹಲವು ಕ್ರಮಗಳು ಇಡೀ ಪಾಕಿಸ್ತಾನವನ್ನೇ ನಡುಗುವಂತೆ ಮಾಡಿದೆ. ಇದರಿಂದ ತತ್ತರಿಸಿದ ಪಾಕ್ ಪ್ರಧಾನಮಂತ್ರಿ ಶೆಹ್‌ಬಾಜ್ ಶೆರೀಫ್ ಇಂದು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಪಾಕಿಸ್ತಾನ ಮಾತ್ರವಲ್ಲ ಅಲ್ಲಿನ ಭಯೋತ್ಪಾದಕರ ನೆಲೆಗಳಿಗೆ ಭಾರತ ಅದ್ಯಾವುದೇ ಕ್ಷಣದಲ್ಲೂ ದಾಳಿ ನಡೆಸಬಹುದೆಂಬ ಭೀತಿ  ಪಾಕಿಸ್ತಾನಕ್ಕೆ ಉಂಟಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಕೆಂಡಾಮಂಡಲವಾಗಿದೆ. ಪ್ರವಾಸಿಗರನ್ನು ಅದರಲ್ಲೂ …

ಸ್ಕೂಟರ್-ಲಾರಿ ಢಿಕ್ಕಿ ಹೊಡೆದು ಅಪಘಾತ: ಯುವತಿ ಮೃತ್ಯು; ಪುತ್ರಿಗೆ ಗಂಭೀರ

ಕಾಸರಗೋಡು: ಕಾಞಂಗಾಡ್ ಐಂ ಙೋತ್ತ್‌ನಲ್ಲಿ ಸಂಭವಿ ಸಿದ ವಾಹನ ಅಪಘಾತ ದಲ್ಲಿ ಯುವತಿ ಮೃv ಪಟ್ಟರು.  ಹಿಂಬದಿ ಸವಾರೆ ಪುತ್ರಿಯನ್ನು ಗಂಭೀರ ಗಾಯಗಳೊಂ ದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಡನ್ನಕ್ಕಾಡ್ ಕರುವಳಂ ಕುಯ್ಯಾಲ್ ನಿವಾಸಿ ಸಮದ್‌ರ ಪತ್ನಿ ರಂಸೀನ(32) ಮೃತಪಟ್ಟವರು. ಪುತ್ರಿ ಆಯಿಶತ್ ಶಂನಾ ಗಾಯಗೊಂಡಿದ್ದಾರೆ. ಬೆಳಿಗ್ಗೆ 10 ಗಂಟೆಗೆ  ಐಂಙೋತ್ತ್ ಪೆಟ್ರೋಲ್ ಬಂಕ್ ಸಮೀಪ ಅಪಘಾತ ಸಂಭವಿಸಿದೆ. ಕಾಞಂ ಗಾಡ್ ಭಾಗದಿಂದ ಸ್ಕೂಟರ್‌ನಲ್ಲಿ ರಂಸೀನ  ಆಗಮಿಸುತ್ತಿದ್ದ ವೇಳೆ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. …

ಕಣ್ಣೂರಿನ ಆಸ್ಪತ್ರೆ ಮಾಲಕನ ಪುತ್ರ ವಿರಾಜಪೇಟೆ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಣ್ಣೂರಿನ ಕೊಯ್ಲಿ ಆಸ್ಪತ್ರೆ ಮಾಲಕನ ಪುತ್ರ ಕರ್ನಾಟಕದ ವಿರಾಜಪೇಟೆ ಬಳಿ ಬಿ ಶೆಟ್ಟಗೇರಿ ಎಂಬಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಯ್ಲಿ ಆಸ್ಪತ್ರೆಯ ಮಾಲಕ ದಿ| ಕೊಯ್ಲಿ ಭಾಸ್ಕರನ್‌ರ ಪುತ್ರ ಪ್ರದೀಪ್ ಕೊಯ್ಲಿ (49) ಮೃತಪಟ್ಟ ವ್ಯಕ್ತಿ. ಮೃತದೇಹದ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿದೆ.  ಇದರಿಂದ ಇದು ಕೊಲೆಕೃತ್ಯವಾಗಿರ ಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಗೋಣಿಕೊಪ್ಪ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಪ್ರದೀಪ್‌ರಿಗೆ ಅಲ್ಲಿ 32 ಎಕ್ರೆಯಷ್ಟು  ಕಾಫಿ ತೋಟವಿದೆ. ಅದನ್ನು ಮಾರಾಟಗೈಯ್ಯುವ ಪ್ರಯತ್ನದಲ್ಲಿ ಅವರು ತೊಡಗಿದ್ದರೆ …