ಚು. ಸಾ.ಪ. ದ.ಕ ಜಿಲ್ಲಾ ಘಟಕ ಉದ್ಘಾಟನೆ ಇಂದು

ಕಾಸರಗೋಡು: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಉದ್ಘಾಟನೆ ಇಂದು ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ನಡೆಯಲಿದೆ. ಅಪರಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪದಗ್ರಹಣ, ಪ್ರಶಸ್ತಿಪ್ರದಾನ, ಪುಸ್ತಕ ಬಿಡುಗಡೆ, ಚುಟುಕು ಕವಿಗೋಷ್ಠಿ ನಡೆಯಲಿರುವುದು. ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಗೌರವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸುವರು. ಕಾಸರಗೋಡು ಕನ್ನಡ ಭವನದ ರೂವಾರಿ, ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ದೀಪ ಪ್ರಜ್ವಲನೆ ನಡೆಸುವರು. ಕನ್ನಡ …

ಎ.ಟಿ.ಎಂ ಕೌಂಟರ್ ದರೋಡೆಗೆತ್ನ ಪ್ರಕರಣ: ಆರೋಪಿ ಸೆರೆ, ನ್ಯಾಯಾಂಗ ಬಂಧನ ; ಬಂಧಿತ ಆರು ವಾಹನ ಕಳವು ಪ್ರಕರಣಗಳಲ್ಲೂ ಆರೋಪಿ

ಕಾಸರಗೋಡು: ನಗರದ ಎಂ.ಜಿ ರಸ್ತೆ ಬಳಿಯ ಬ್ಯಾಂಕ್ ಆಫ್ ಇಂಡಿ ಯಾದ ಎಟಿಎಂ  ಕೌಂಟರ್‌ನ್ನು ಒಡೆದು ದರೋಡೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಯನ್ನು ಕಾಸರ ಗೋಡು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ತಚ್ಚಂಗಾಡ್ ಅರವತ್ತ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿ ರುವ ಪಿ.ಕೆ. ಮುಹಮ್ಮದ್ ಸಫ್ವಾನ್ (19) ಬಂಧಿತ ಆರೋಪಿ. ಕಳೆದ ಸೋಮವಾರ ಮುಂಜಾನೆ ಎಟಿಎಂ ಕೌಂಟರ್‌ನಲ್ಲಿ ದರೋಡೆಗೆ ಯತ್ನ ನಡೆಸಲಾಗಿತ್ತು. ಇದರ ಡಿಜಿಟಲ್ ಲಾಕ್‌ನ್ನು ಹೊಡೆದು ಹಾನಿಗೊಳಿಸಲಾಯಿತಾದರೂ ಹಣ ಒಳಗೊಂಡ ಲಾಕರನ್ನು ತೆರೆಯಲು ಸಾಧ್ಯವಾಗದಾಗ  ಆರೋಪಿ ಬಳಿಕ ಆ ಯತ್ನವನ್ನು ಅಲ್ಲಿಗೇ ಉಪೇಕ್ಷಿಸಿದ್ದನೆಂದು …

ಕೂಲಿ ಕಾರ್ಮಿಕ  ಬಸ್ ತಂಗುದಾಣದಲ್ಲಿ  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ:  ಕೆಲಸಕ್ಕೆಂದು ತಿಳಿಸಿ ಮನೆಯಿಂದ ಹೋದ ವ್ಯಕ್ತಿ  ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳ್ಳೂರು ಬಳಿಯ ನೆಟ್ಟಣಿಗೆಯಲ್ಲಿ ಸಂಭವಿಸಿದೆ. ಕಿನ್ನಿಂಗಾರು ಮದಕ್ಕ ನಿವಾಸಿ ಕುಂಞ ( 50) ಎಂಬವರು ಮೃತ ಪಟ್ಟ ವ್ಯಕ್ತಿ.   ಕೂಲಿ ಕಾರ್ಮಿಕ ನಾದ ಇವರು ಇಂದು ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ತಿಳಿಸಿ ತೆರಳಿದ್ದರೆನ್ನಲಾಗಿದೆ. 8 ಗಂಟೆ ವೇಳೆ ಇವರು ನೆಟ್ಟಣಿಗೆಯಲ್ಲಿರುವ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಮಲಗಿ ರುವುದನ್ನು ಸ್ಥಳೀಯರು ಕಂಡಿದ್ದಾರೆ. ಕೂಡಲೇ ಸಮೀಪಕ್ಕೆ ತೆರಳಿ ನೋಡಿ …

ಚಿನ್ನ ಗಗನದತ್ತ: ಪವನ್ನಲ್ಲಿ 840 ರೂ. ಹೆಚ್ಚಳವಾಗಿ 71360ಕ್ಕೆ ನೆಗೆತ

ತಿರುವನಂತಪುರ: ಯುಎಸ್ ಚೈನ ವ್ಯಾಪಾರ ಬಿಕ್ಕಟ್ಟು ತೀವ್ರ ಗೊಂಡ ಹಿನ್ನೆಲೆಯಲ್ಲಿ ಚಿನ್ನದ ದರ ಬಾನೆತ್ತರಕ್ಕೆ ಏರುತ್ತಿದೆ. ರಾಜ್ಯದಲ್ಲಿ ಇಂದು ಪವನ್ಗೆ 840 ರೂ. ಹೆಚ್ಚಳವಾಗಿ 71360 ರೂ.ಗೆ ತಲುಪಿದೆ. ನಿನ್ನೆ 70520 ರೂ. ಆಗಿತ್ತು ಒಂದು ಪವನ್ ಚಿನ್ನದ ಬೆಲೆ. ಗ್ರಾಂಗೆ 8815 ರೂ. ಆಗಿದ್ದ ಬೆಲೆ ಇಂದು 8920ಕ್ಕೆ ತಲುಪಿದೆ. ಗ್ರಾಂ ನಲ್ಲಿ 105 ರೂ. ಹೆಚ್ಚಳಗೊಂಡಿದೆ. ಒಂದು ವಾರದ ಮಧ್ಯೆ 2860 ರೂ. ಒಂದು ಪವನ್ನಲ್ಲಿ ಹೆಚ್ಚಳವಾಗಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಟ್ರೋಯ್ ಔನ್ಸ್ಗೆ ಇತಿಹಾ …

ಪ್ರಗತಿಪರ ಕೃಷಿಕ ನಿಧನ

ಮುಳ್ಳೇರಿಯ: ಆದೂರು ನಡುಮನೆ ನಿವಾಸಿ ಕೋಡಿಬೈಲು  ವಿಠಲ ರೈ (92) ನಿಧನ ಹೊಂದಿದರು. ಪ್ರಗತಿಪರ ಕೃಷಿಕರಾಗಿದ್ದರು. ಹಲವು ಕಡೆಗಳಲ್ಲಿ ಗೌರವಿಸಲ್ಪಟ್ಟಿದ್ದರು. ಇವರ ಪತ್ನಿ ಪುಷ್ಪಾವತಿ ಎರಡು ವರ್ಷದ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಶೋಭಾ, ರಘುರಾಮ, ಮಲ್ಲಿಕಾ, ಸುಮ, ಶಿವಪ್ರಸಾದ, ಅಳಿಯಂದಿರಾದ ರಮೇಶ್ ಶೆಟ್ಟಿ, ಶಶಿಕುಮಾರ್ ರೆ, ರಾಧಾಕೃಷ್ಣ ರೈ, ಸೊಸೆ ಸುನೀತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವೆಂಕಟ್ ಭಟ್ ಎಡನೀರು ಅವರಿಗೆ ಪಂಚ ಭಾಷಾ ಸಾಹಿತ್ಯ ಪ್ರಶಸ್ತಿ

ಎಡನೀರು: ಕಾರ್ಟೂನ್ ಕಲಾವಿದ, ಚುಟುಕು ಸಾಹಿತಿ ವೆಂಕಟ್ ಭಟ್ ಎಡನೀರು  ಇವರು ಕಣ್ಣೂರಿನ ನವಪುರಂ ಮಾತಾತೀತ ದೇವಾಲಯದಿಂದ ನೀಡುವ ಪಂಚಭಾಷಾ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೇ 27ರಂದು ನವಪುರಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿದ್ಯಾಧರ ಕನ್ನಡ ಪ್ರತಿಷ್ಠಾನ ದಾವಣಗೆರೆ ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಸಂಸ್ಮರಣೆ ಅಂಗವಾಗಿ ನೀಡುವ ಕನ್ನಡ ನುಡಿ ತೇರು ಪ್ರಶಸ್ತಿಗೂ ಇವರು ಆಯ್ಕೆಯಾಗಿದ್ದು, ಈ ತಿಂಗಳ 20ರಂದು ದಾವಣಗೆರೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ನಟಿ ವಿನ್ಸಿಯೊಂದಿಗೆ ಅಸಭ್ಯವಾಗಿ ವ್ಯವಹರಿಸಿದ ನಟ ಶೈನ್ ಟೋಮ್ ಚಾಕೊ; ಹೇಳಿಕೆ ಬಹಿರಂಗ

ಕೊಚ್ಚಿ: ಅಮಲು ಪದಾರ್ಥ ಉಪಯೋಗಿಸಿ ನಟಿ ವಿನ್ಸಿ ಅಲೋಶಿಯಸ್‌ರೊಂದಿಗೆ ಅಸಭ್ಯವಾಗಿ ವ್ಯವಹರಿಸಿದ ನಟ ಶೈನ್ ಟೋಮ್ ಚಾಕೊ ಆಗಿದ್ದಾನೆಂದು  ಬಹಿರಂಗಗೊಂಡಿದೆ. ಫಿಲಿಂ ಚೇಂಬರ್‌ಗೆ ನೀಡಿದ ದೂರಿನಲ್ಲಿ ವಿನ್ಸಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಅಭಿನಯಿಸುವವರ ಸಂಘಟನೆಯಾದ ‘ಅಮ್ಮ’ಗೂ ವಿನ್ಸಿ ದೂರು ನೀಡಿದ್ದರು. ವಿನ್ಸಿಯ ದೂರನ್ನು ಪರಿಗಣಿಸಿ ಸೋಮವಾರ ಫಿಲಿಂ ಚೇಂಬರ್ ಮೋನಿಟರಿ ಸಮಿತಿಯ ತುರ್ತು ಸಭೆ ಜರಗಲಿದೆ ಎಂದು ತಿಳಿಸಲಾಗಿದೆ. ‘ಸೂತ್ರವಾಕ್ಯಂ’ ಸಿನಿಮಾದ ಸೆಟ್‌ನಲ್ಲಿ ನಟ ಅಸಭ್ಯವಾಗಿ ವ್ಯವಹರಿಸಿರುವುದೆಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ಈ ಮಧ್ಯೆ ನಟಿ ವಿನ್ಸಿ …

ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತಲುಪಿದ ಮರುದಿನ ಯುವತಿ ಹೃದಯಾಘಾತದಿಂದ ನಿಧನ

ಹೊಸದುರ್ಗ: ಆಸ್ಪತ್ರೆಯಿಂದ ಬಿಡುಗಡೆ ಗೊಂಡು ಮನೆಗೆ ತಲುಪಿದ ಮರುದಿನ ಯುವತಿ ಹೃದಯಾಘಾತದಿಂದಾಗಿ ಮೃತಪಟ್ಟರು. ವೆಸ್ಟ್ ಎಳೇರಿ ಮುಡಂದನ್‌ಪಾರ ಪಾಟತ್ತಿಲ್ ಹೌಸ್ ನಿವಾಸಿ ಮನೋಜ್‌ರ ಪತ್ನಿ ಸ್ವಪ್ನ (37) ಮೃತಪಟ್ಟವರು. ಕಾಞಂಗಾಡ್ ಸ್ಟ್ಯಾಟಿಸ್ಟಿಕ್ಕಲ್ ಕಚೇರಿಯ ಉದ್ಯೋಗಸ್ಥೆಯಾಗಿದ್ದಾರೆ. ಹೃದಯ ಸಂಬಂಧ ಅಸೌಖ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೊನ್ನೆ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತಲುಪಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆಗೆ ಎದೆನೋವು ಕಂಡು ಬಂದಿದ್ದು, ಕೂಡಲೇ ವೆಳ್ಳರಿಕುಂಡ್ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕೊಂಡೊಯ್ದರೂ ಜೀವ …

ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಸುಹಾಸ್‌ರ ಸ್ಮೃತಿದಿನ ಕಾರ್ಯಕ್ರಮ

ಕಾಸರಗೋಡು: ಬಿ.ಎಂ.ಎಸ್. ಜಿಲ್ಲಾ ಸಮಿತಿ ಆಶ್ರಯದಲ್ಲಿ ಜಿಲ್ಲಾ ಕಚೇರಿ ಪರಿಸರದಲ್ಲಿ ನಡೆದ ಅಡ್ವಕೇಟ್ ಸುಹಾಸ್‌ರ ಸ್ಮೃತಿ ದಿನ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಪಿ. ಮುರಳೀಧರನ್ ಸಂಸ್ಮರಣಾ ಭಾಷಣ ಮಾಡಿದರು. ಆರ್‌ಎಸ್‌ಎಸ್ ಜಿಲ್ಲಾ ಸಹ ಸಂಪರ್ಕ್ ಪ್ರಮುಖ್ ಸುನಿಲ್ ಕುದ್ರೆಪ್ಪಾಡಿ, ಬಿ.ಎಂ.ಎಸ್. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ದಿನೇಶ್ ಬಂಬ್ರಾಣ, ಹರೀಶ್ ಕುದ್ರೆಪ್ಪಾಡಿ, ಅನಿಲ್ ಬಿ. ನಾಯರ್, ಟಿ. ಕೃಷ್ಣನ್, ಎ. ಕೇಶವ, ಬಾಬುಮೋನ್, ಜಯಶೀಲನ್, ಬಾಲಕೃಷ್ಣ ನೆಲ್ಲಿಕುಂಜೆ, ಮನೋಜ್ ಭಾಗವಹಿಸಿದರು.

ಪ್ರಯಾಣಿಕರನ್ನು ದಾರಿ ತಪ್ಪಿಸುತ್ತಿರುವ  ಸೂಚನಾ ಫಲಕ: ಕುಂಬಳೆಗೆ ತಲುಪಿದಾಗ ಗೊಂದಲ

ಕುಂಬಳೆ: ಪ್ರಯಾಣಿಕರಿಗೆ ಸಹಾಯವಾಗಲೆಂದು ಸ್ಥಾಪಿಸಿದ ದಾರಿಸೂಚನಾ ಫಲಕಗಳು ಜನರನ್ನು ದಾರಿ ತಪ್ಪಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಡೆಯುವ ಕುಂಬಳೆ ಪೇಟೆಯಲ್ಲಿ ಸ್ಥಾಪಿಸಿರುವ ದಾರಿ ಸೂಚನಾ ಫಲಕದಿಂದ ಇಂತಹವೊಂದು  ಗೊಂದಲ  ಎದುರಾಗುತ್ತಿದೆ.   ರಸ್ತೆ ನಿರ್ಮಾಣ ಕಂಪೆನಿಯಾದ ಊರಾಲುಂಗಲ್ ಸೊಸೈಟಿ ಅಧಿಕಾರಿಗಳು ಫಲಕ ಸ್ಥಾಪಿಸಿದ್ದಾರೆ. ಕಾಸರಗೋಡು-ಮಂಗಳೂರು ರಸ್ತೆಯ ಕುಂಬಳೆಯಲ್ಲಿ ಸ್ಥಾಪಿಸಿರುವ ಫಲಕದಲ್ಲಿ ಸೀತಾಂಗೋಳಿ ಬಾಗಕ್ಕೆ ತೆರಳುವಂತೆ ಸೂಚಿಸಿದ ಭಾಗದಲ್ಲಿ ರಸ್ತೆಯೇ ಇಲ್ಲ. ಅದೇ ರೀತಿ ಮಂಗ ಳೂರು ಭಾಗಕ್ಕೆ ದಾರಿ ಸೂಚಿಸುತ್ತಿರು ವುದು ಕಾಸರಗೋಡಿನತ್ತಾಗಿದೆ. ಮಂಗಳೂರು ಭಾಗದಿಂದ  ಬರುವ ವಾಹನ …