ಕಿಚ್ಚಿರಿಸಿ ತಾಯಿ, ಮಕ್ಕಳು ಮೃತಪಟ್ಟ ಘಟನೆ: ಸಾವಿಗೆ ಕಾರಣ ಕುಟುಂಬ ಕಲಹ

ಕೊಲ್ಲಂ: ಕರುನಾಗಪಳ್ಳಿಯಲ್ಲಿ ಕಿಚ್ಚಿರಿಸಿ ಆತ್ಮಹತ್ಯೆಗೆತ್ನಿಸಿದ ತಾಯಿ ಹಾಗೂ ಮಕ್ಕಳು ಮೃತಪಟ್ಟರು. ಕರುನಾಗಪಳ್ಳಿ ನಿವಾಸಿ ತಾರಾ ಜಿ. ಕೃಷ್ಣ (36), ಮಕ್ಕಳಾದ ಅನಾಮಿಕ (7), ಆತ್ಮಿಕ (ಒಂದೂವರೆ) ಎಂಬಿವರು ಮೃತಪಟ್ಟವರು. ಪತಿಗೃಹದಲ್ಲಿ ಉಂಟಾಗಿರುವ ಕುಟುಂಬ ಸಮಸ್ಯೆ ಆತ್ಮಹತ್ಯಾಯತ್ನಕ್ಕೆ ಕಾರಣವೆಂದು ಪ್ರಾಥಮಿಕವಾಗಿ ತಿಳಿಯಲಾಗಿದೆ. ಅನಿವಾಸಿಯಾಗಿರುವ ಪತಿ ವಿದೇಶದಿಂದ ಹಿಂತಿರುಗಲಿರುವ ಮಧ್ಯೆ ತಾರಾ ಮಕ್ಕಳ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ.  ಮಕ್ಕಳಿಗೆ ಕಿಚ್ಚಿರಿಸಿದ ಬಳಿಕ ತಾನೂ ಕೂಡಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಂಭೀರ ಗಾಯಗೊಂಡ ತಾರಾ …

ವಿ.ಡಿ. ಸತೀಶನ್‌ರ ಕರಾವಳಿ ಯಾತ್ರೆ 21ರಂದು : ಯಶಸ್ವಿಗೆ ನಾಳೆಯಿಂದ ವಿವಿಧ ಕಾರ್ಯಕ್ರಮ

ಕಾಸರಗೋಡು: ಮೀನು ಕಾರ್ಮಿ ಕರ ಹಾಗೂ ದೇಶದ ಭದ್ರತೆಗೆ ದೋಷಕರವಾಗಿರುವ ಸಮುದ್ರ ಹೊಯ್ಗೆ ಗಣಿಗಾರಿಕೆ ವಿರುದ್ಧ ವಿಪಕ್ಷ ಮುಖಂಡ ವಿ.ಡಿ. ಸತೀಶನ್ ಮುನ್ನಡೆಸುವ ಕರಾವಳಿ ಮುಷ್ಕರ ಯಾತ್ರೆಯನ್ನು ಯಶಸ್ವಿಗೊಳಿಸಲು ಐಕ್ಯರಂಗ ಕಾಸರಗೋಡು ವಿಧಾನಸಭಾ ಮಂಡಲ ಲೈಸನ್ ಸಮಿತಿ ಸಭೆ ತೀರ್ಮಾನಿಸಿದೆ. ಎಪ್ರಿಲ್ ೨೧ರಂದು ನೆಲ್ಲಿಕುಂಜೆ ಕಡಪ್ಪುರದಿಂದ ಯಾತ್ರೆ ಆರಂಭಗೊಳ್ಳ ಲಿದೆ. ಇದರಂಗವಾಗಿ  ನಾಳೆ, 18ರಂದು ನಗರಸಭೆ, ಪಂಚಾಯತ್ ಮಟ್ಟದಲ್ಲಿ ಸಭೆಗಳು, ೧೮ರಂದು ಶಾಸಕ ಎನ್.ಎ. ನೆಲ್ಲಿಕುನ್ನುರ ನೇತೃತ್ವದಲ್ಲಿ, 19ರಂದು ವಾರ್ಡ್ ಘಟಕ ಮಟ್ಟದಲ್ಲಿ ಮುಖಂಡರ ನೇತೃತ್ವದಲ್ಲಿ ಪರ್ಯಟನೆ …

ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿ, ಸಂಸ್ಕೃತಿ ಉತ್ಸವ: ಪೂರ್ವಭಾವಿ ಸಭೆ

ಕುಂಬಳೆ: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನಾಲ್ಕನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಸಂಸ್ಕೃತಿ ಉತ್ಸವ ಮೇ 3ರಂದು ಬೆಳಿಗ್ಗೆ 9ರಿಂದ ಸೀತಾಂಗೋಳಿ ಅಲ ಯನ್ಸ್ ಸಭಾ ಭವನದಲ್ಲಿ ಜರಗಲಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಪ್ರವಾಸೋಧ್ಯಮ ಇಲಾಖೆ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಜಂಟಿ ಸಹಕಾರ ದಲ್ಲಿ ಕಾರ್ಯಕ್ರಮ ಆಯೋಜಿಸ ಲಾಗಿದೆ. ಈ ಬಗ್ಗೆ ರಚಿಸಲಾದ ಸ್ವಾಗತ ಸಮಿತಿ ಸಹಿತ ವಿವಿಧ ಸಮಿತಿಗಳ ಸಭೆ ಸೀತಾಂಗೋಳಿ ಸಂತೋಷ್ ಕ್ಲಬ್ ಕಾರ್ಯಾಲಯದಲ್ಲಿ …

ಬೆಳ್ಳೂರಿನಲ್ಲಿ ಕುಡಿಯುವ ನೀರು ಯೋಜನೆ ಉದ್ಘಾಟನೆ

ಬೆಳ್ಳೂರು: ಬೆಳ್ಳೂರು ಪಂ. 8ನೇ ವಾರ್ಡ್  ತೋಟದಮೂಲೆ ಎಸ್‌ಸಿ ನಗರದ ೨೫ ಮನೆಗಳಿಗೆ ಮಂಜೂರಾದ  ಕುಡಿಯುವ ನೀರು ಯೋಜನೆ ಉದ್ಘಾಟಿಸಲಾಯಿತು. ಕಾರಡ್ಕ ಬ್ಲಾಕ್ ಪಂ. ಅಧ್ಯಕ್ಷ ಶಿಜಿ ಮ್ಯಾಥ್ಯೂ ಉದ್ಘಾಟಿಸಿದರು.  ವಾರ್ಡ್ ಪ್ರತಿನಿಧಿ ಶ್ರೀಪತಿ ಅಧ್ಯಕ್ಷತೆ ವಹಿಸಿದ್ದರು. ಉಷಾ ಸ್ವಾಗತಿಸಿದರು. ಸಿಪಿಎಂ ಲೋಕಲ್ ಸಮಿತಿ ಕಾರ್ಯದರ್ಶಿ ಕೆ.ಎಚ್. ಸೂಫಿ ಕಿನ್ನಿಂಗಾರು, ಕುಡಿಯುವ ನೀರು ಫಲಾನುಭವಿ ಸಮಿತಿ ಅಧ್ಯಕ್ಷ ಕೃಷ್ಣ ಕೆ.ಕೆ, ಕಾರ್ಯದರ್ಶಿ ಪದ್ಮನಾಭ ಟಿ ಮತ್ತಿತರರು ಭಾಗವಹಿಸಿದ್ದರ. ರಾಜ್ಯಸಭೆಯ  ಮಾಜಿ ಸದಸ್ಯ ಎಳಮರಂ ಕರೀಂ ಅವರ ಪ್ರದೇಶಾಭಿವೃದ್ಧಿ …

ಬದಿಯಡ್ಕದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಬದಿಯಡ್ಕ : ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ಇದರ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ . ಆರ್. ಅಂಬೇಡ್ಕರ್‌ರ 134ನೇ ಜನ್ಮದಿನವನ್ನು ಬಾರಡ್ಕ ಅಂಬೇಡ್ಕರ್ ನಗರದಲ್ಲಿ ಆಚರಿಸಲಾಯಿತು .ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಅಧ್ಯಕ್ಷತೆ ವಹಿಸಿದ್ದÀÄ, ಬದಿಯಡ್ಕ ಪಂಚಾಯತ್ ಅಧ್ಯಕ್ಷೆ ಶಾಂತ ಬಾರಡ್ಕ ಅಂಬೇಡ್ಕರ್‌ರ ಭಾವಚಿತ್ರಕ್ಕೆ ಹಾರಾರ್ಪಣೆಗೈಯ್ಯವುದರ ಮೂಲಕ ಉಧ್ಘಾಟಿಸಿದರು. ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಸಂದೀಪ್ ಬದಿಯಡ್ಕ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಗಡಿನಾಡ ಗಾಯಕ ವಸಂತ ಬಾರಡ್ಕ, ದಂತ …

ಕುಳದಪಾರೆಯಲ್ಲಿ ಒತ್ತೆಕೋಲ 21, 22ರಂದು

ಮುಳ್ಳೇರಿಯ: ಕುಳದಪಾರೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಈತಿಂಗಳ 21,22ರಂದು ನಡೆಯಲಿದೆ. 21ರಂದು ರಾತ್ರಿ 7ಕ್ಕೆ ಕುಳದ ದೈವಸ್ಥಾನದಿಂದ ಕುಳದಪಾರೆಗೆ ಭಂಡಾರ ಹೊರಡುವುದು, 8ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, 11ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ, 22ರಂದು ಮುಂಜಾನೆ 5ಕ್ಕೆ ವಿಷ್ಣು ಮೂರ್ತಿ ದೈವದ ಅಗ್ನಿಸೇವೆ, 7ರಿಂದ ಪ್ರಸಾದ ಸ್ವೀಕಾರ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂ ಗವಾಗಿ 21ರಂದು ರಾತ್ರಿ 8.30ಕ್ಕೆ ಕುಳದಪಾರೆ ಅಂಗನವಾಡಿ ಮಕ್ಕ ಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಸ್ತಿ ಫ್ರೆಂಡ್ಸ್ ಅವರಿಂದ ಕೈಕೊಟ್ಟಿಕ್ಕಳಿ, ಆದೂರು ಪಂ ಚಲಿಂಗೇಶ್ವರ …

ಐಲ ಕ್ಷೇತ್ರದಲ್ಲಿ ಸಾರ್ವಜನಿಕ ಬೆಡಿ ಉತ್ಸವ, ವಿರಾಟ್ ನೃತ್ಯ ಭಜನಾ ಸಂಭ್ರಮ ಇಂದು

ಉಪ್ಪಳ: ಐಲ ಶ್ರೀ ದುರ್ಗಾಪರ ಮೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ವಿಷು ಜಾತ್ರೆ ಪ್ರಯುಕ್ತ ಇಂದು ರಾತ್ರಿ 10ರಿಂದ ಐಲ ಮೈದಾನದಲ್ಲಿ ಸಾರ್ವಜನಿಕ ಬೇಡಿ ಉತ್ಸವ ಹಾಗೂ ವಿವಿಧ ಕುಣಿತ ಭಜನಾ ತಂಡಗಳಿAದ ‘ವಿರಾಟ್ ನೃತ್ಯ ಭಜನಾ ಸಂಭ್ರಮ’ ವಿಶೇಷ ಕಾರ್ಯಕ್ರಮ ನಡೆಯಲಿದೆ. 10.30ರಿಂದ ಶಿವಾಜಿ ಫ್ರೆಂಡ್ಸ್ ಶಿವಾಜಿನಗರ ಐಲ ಕಡಪ್ಪರ ಇದರ 22ನೇ ವಾರ್ಷಿಕ ಸಂಭ್ರಮದAಗವಾಗಿ ವಿಜಯ ಕುಮಾರ್ ಕೋಡಿಯಾಲ್‌ಬೈಲ್ ನಿರ್ಧೇಶನದಲ್ಲಿ ‘ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನ, ನಾಳೆ ಸಂಜೆ 4ರಿಂದ ಆರಾಟೋತ್ಸವ, ರಾಜಾಂಗಣ ಪ್ರಸಾದ, ಕುಬಣೂರು …

ಉಪ್ಪಳ ಲಯನ್ಸ್ ಕ್ಲಬ್‌ನಲ್ಲಿ ಕಣ್ಣಿನ ಪೊರೆ ಉಚಿತ ತಪಾಸಣೆ ಶಿಬಿರ 22ರಂದು

ಉಪ್ಪಳ: ಲಯನ್ಸ್ ಕ್ಲಬ್ ಮಂಜೇಶ್ವರ, ಉಪ್ಪಳ ಶ್ರೀ ಧರ್ಮಚಕ್ರ ಟ್ರಸ್ಟ್ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇದರ ಜಂಟಿ ಆಶ್ರಯದಲ್ಲಿ ಕಣ್ಣಿನ ಪೊರೆ ಉಚಿತ ತಪಾಸಣೆ ಶಿಬಿರ ಮತ್ತು ರಿಯಲ್ ಲ್ಯಾಬ್ ಹೊಸಂಗಡಿ, ಮಂಜೇಶ್ವರ ಇವರಿಂದ ಮಧುಮೇಹ ಉಚಿತ ತಪಾಸಣೆ ಶಿಬಿರ ಎಪ್ರಿಲ್ 22ರಂದು ಬೆಳಿಗ್ಗೆ 10ರಿಂದ ನಯಬಜಾರ್‌ನಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಕ್ಲಬ್‌ನ ಅಧ್ಯಕ್ಷ ಲ| ಕಮಲಾಕ್ಷ ಪಂಜ ಅಧ್ಯಕ್ಷತೆ ವಹಿಸುವರು. ಲ| ಲಕ್ಷ÷್ಮಣ್ ಕುಂಬಳೆ …

ಅಂಗಡಿ ತೆರವುಗೊಳಿಸುವಂತೆ ದೂರು ನೀಡಿದ ದ್ವೇಷ : ಟಿನ್ನರ್ ಆಯಿಲ್ ಸುರಿದು ಕಿಚ್ಚಿರಿಸಿ ಗಂಭೀರ ಸುಟ್ಟು ಗಾಯಗೊಂಡ ಯುವತಿ ಮೃತ್ಯು; ಆರೋಪಿ ಸೆರೆ

ಕಾಸರಗೋಡು: ಅಂಗಡಿ ತೆರವುಗೊಳಿಸುವಂತೆ ದೂರು ನೀಡಿದ ದ್ವೇಷದಿಂದ ವ್ಯಕ್ತಿಯೋರ್ವ ಜೀನಸು ಅಂಗಡಿ ಮಾಲಕಿಯಾದ ಯುವತಿ ಯ ಮೇಲೆ ಟಿನ್ನರ್ ಆಯಿಲ್ ಎರಚಿ ಕಿಚ್ಚಿರಿಸಿದ ಪರಿಣಾಮ ಗಂಭೀರ ಸುಟ್ಟು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೇಡಡ್ಕಕ್ಕೆ ಸಮೀಪದ ಮಣ್ಣಡ್ಕ ದಲ್ಲಿ ಜೀನಸು ಅಂಗಡಿ ನಡೆಸುತ್ತಿರುವ ಮುನ್ನಾಡ್ ಪೆರ್ಯಾ ನಿವಾಸಿ ರಮಿತ (27) ಸಾವನ್ನಪ್ಪಿದ ಯುವತಿ. ಇದಕ್ಕೆ ಸಂಬಂಧಿಸಿ ರಮಿತಳ ಜೀನಸು ಅಂಗಡಿ ಸಮೀಪ ಪೀಠೋ ಪಕರಣ ಅಂಗಡಿ ನಡೆಸುತ್ತಿರುವ ತಮಿಳುನಾಡು ಚಿನ್ನಪಟ್ಟಣಂ ನಿವಾಸಿ ರಾಮಾಮೃತಂ(57)ಎಂಬಾತನನ್ನು …

ಆಟೋ ಚಾಲಕನನ್ನು ಕೊಲೆಗೈದು ಮೃತದೇಹ ಬಾವಿಗೆಸೆದ ಪ್ರಕರಣ: ಬಂಧಿತ ಆರೋಪಿಗೆ ರಿಮಾಂಡ್

ಮಂಜೇಶ್ವರ: ಕುಂಜತ್ತೂರು ಬಳಿಯ ಅಡ್ಕಪ್ಪಳ್ಳ ಮಾನಿಗುಡ್ಡೆ ಎಂಬಲ್ಲಿ   ಆಟೋ ಚಾಲಕನನ್ನು ಕೊಲೆಗೈದು ಮೃತದೇಹವನ್ನು ಬಾವಿಗೆ ಎಸೆದ   ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾದ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಮಂಗಳೂರು ಸುರತ್ಕಲ್ ಬಳಿಯ ಕಲ್ಲಾಪು ಎಂಬಲ್ಲಿನ ಅಭಿಷೇಕ್ ಶೆಟ್ಟಿ (25)  ರಿಮಾಂಡ್ ಗೊಳಗಾದ ಆರೋಪಿಯಾಗಿದ್ದಾನೆ.  ಈತನನ್ನು ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ. ಮಂಗಳೂರು ಮುಲ್ಕಿ ಬಳಿಯ ಕೊಲ್ನಾಡು ನಿವಾಸಿಯೂ ಮಂಗಳೂ ರಿನಲ್ಲಿ ಆಟೋ ಚಾಲಕನಾಗಿರುವ ಮೊಹಮ್ಮದ್ ಶರೀಫ್ (52) ಎಂಬ ವರ ಸಾವಿಗೆ …