ಕರಾವಳಿ ಹರತಾಳ ಆರಂಭ: ಸ್ತಬ್ದಗೊಂಡ ಮೀನುಗಾರಿಕಾ ವಲಯ

ಕಾಸರಗೋಡು: ಸಮುದ್ರ ಮರಳು ಗಣಿಗಾರಿಕೆಗೆ ಅನುಮತಿ ನೀಡಿದ ಕೇಂದ್ರ ಸರಕಾರದ ನಿಲುವನ್ನು ಪ್ರತಿಭಟಿಸಿ ಫಿಶರೀಸ್  ಕೋರ್ಡಿನೇಶನ್ ಸಮಿತಿ ಘೋಷಿಸಿದ 24 ತಾಸುಗಳ ಕರಾವಳಿ ಹರತಾಳ ರಾಜ್ಯದಲ್ಲಿ ನಿನ್ನೆ ರಾತ್ರಿ 12 ಗಂಟೆಗೆ ಆರಂಭಗೊಂಡಿದೆ. ಹರತಾಳ ರಾಜ್ಯದ ಮೀನುಗಾರಿಕಾ  ವಲಯವನ್ನು ಪೂರ್ಣವಾಗಿ ಸ್ತಬ್ದಗೊಳಿಸಿದೆ. ಹರತಾಳದಲ್ಲಿ ಬೆಸ್ತರು ಮತ್ತು ಮೀನು ಮಾರಾಟ ಕಾರ್ಮಿಕರು ಸಹ ಕರಿಸುತ್ತಿದ್ದು, ಅದಕ್ಕೆ ಬೆಂಬಲ ಸೂಚಿಸಿ ಮೀನುಗಾರರು ಇಂದು ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿಯಲಿಲ್ಲ. ಮಾತ್ರವಲ್ಲ  ಮೀನು ಮಾರಾಟಗಾರರೂ ಇಂದು  ಮೀನು ಮಾರಾ ಟದಿಂದ ದೂರ ಸರಿದು …

ಫೇಸ್‌ಬುಕ್‌ನಲ್ಲಿ ಪರಿಚಯ: ಪ್ರಿಯತಮನೊಂದಿಗೆ ಲಾಡ್ಜ್‌ಗೆ ತಲುಪಿದ ಗೃಹಿಣಿ ಆತ್ಮಹತ್ಯೆಗೆ ಯತ್ನ

ಕಣ್ಣೂರು: ಪ್ರಿಯತಮನೊಂದಿಗೆ ಲಾಡ್ಜ್‌ನಲ್ಲಿ ಕೊಠಡಿ ಪಡೆದ ಗೃಹಿಣಿ ಬಳಿಕ ಅಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕೊಲ್ಲಂ ನಿವಾಸಿಯಾದ ೪೦ರ ಹರೆಯದ ಗೃಹಿಣಿ ಪರಶ್ಶಿನಿಕಡವಿನ ಲಾಡ್ಜ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಫೇಸ್‌ಬುಕ್ ಮೂಲಕ  ಪರಿಚಯಗೊಂಡ ಪಾಪಿನಿಶ್ಶೇರಿ ನಿವಾಸಿಯಾದ ಯುವಕನೊಂದಿಗೆ ಗೃಹಿಣಿ ಲಾಡ್ಜ್‌ಗೆ ತಲುಪಿದ್ದಳು. ಬಳಿಕ ಅಲ್ಲಿ ಹಗ್ಗದಲ್ಲಿ ನೇಣು ಹಾಕಿದ್ದಾಳೆ. ಅದನ್ನು ಕಂಡ ಯುವಕ ಲಾಡ್ಜ್‌ನ ನೌಕರರ ಸಹಾಯದೊಂದಿಗೆ ಯುವತಿಯನ್ನು ಆಸ್ಪತ್ರೆಗೆ ತಲುಪಿಸಿ ಅಪಾಯದಿಂದ ಪಾರುಮಾಡಿದ್ದಾನೆ. ಗಂಭೀರ ಸ್ಥಿತಿಯಲ್ಲಿರುವ ಗೃಹಿಣಿಯನ್ನು ಪರಿಯಾರಂನ ಕಣ್ಣೂರು ಸರಕಾರಿ ಮೆಡಿಕಲ್ …

ಸಾಮೂಹಿಕ ಹತ್ಯೆ: ಅಫಾನ್‌ನ ತಾಯಿಯ ಆರೋಗ್ಯದಲ್ಲಿ ಚೇತರಿಕೆ; ಇಂದು ಹೇಳಿಕೆ ದಾಖಲು

ತಿರುವನಂತಪುರ: ವೆಂಞಾರ ಮೂಡ್ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಆರೋಪಿ ಅಫಾನ್‌ನ ತಾಯಿ ಶಮೀನಾರ ಹೇಳಿಕೆಯನ್ನು ಇಂದು ದಾಖಲಿಸಲಾಗುವುದು. ಆರೋಪಿಯ ಆಕ್ರಮಣದಿಂದ ಗಂಭೀರ ಗಾಯಗೊಂಡ ಶಮೀನ ತಿರು ವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಆರೋಗ್ಯ ಸ್ಥಿತಿ ಉತ್ತಮಗೊಂಡ ಹಿನ್ನೆಲೆಯಲ್ಲಿ ಇಂದು ಅವರಿಂದ ಹೇಳಿಕೆ ದಾಖಲಿ ಸಲು ಡಾಕ್ಟರ್‌ಗಳು ಪೊಲೀಸರಿಗೆ ಒಪ್ಪಿಗೆ ನೀಡಿದ್ದಾರೆ. ಕುಟುಂಬದ ಆರ್ಥಿಕ ಸಂದಿಗ್ಧತೆಯಿಂದ ಪಾರಾ ಗಲು ದಾರಿ ಕಾಣದ ಹಿನ್ನೆಲೆಯಲ್ಲಿ ಸಾಮೂಹಿಕ ಕೊಲೆ ನಡೆಸಬೇಕಾಗಿ ಬಂತೆಂದು ಅಫಾನ್ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ಇದೇ ವೇಳೆ ಕೊಲೆಗೆ …

ಎರಡೆಡೆಗಳಲ್ಲಿ ಪೊಲೀಸ್ ದಾಳಿ : ಗಾಂಜಾ ಸಹಿತ ಇಬ್ಬರ ಸೆರೆ

ಬದಿಯಡ್ಕ: ಬದಿಯಡ್ಕ ಪೊಲೀ ಸರು ನಿನ್ನೆ ಎರಡೆಡೆಗಳಲ್ಲಿ ದಾಳಿ ನಡೆಸಿ ಗಾಂಜಾ ಸಹಿತ ಇಬ್ಬರನ್ನು ಬಂಧಿಸಿ ಕೇಸು ದಾಖಲಿಸಿಕೊಂ ಡಿದ್ದಾರೆ. ಇದರಂತೆ ಬದಿಯಡ್ಕ ಪೊಲೀಸ್ ಠಾಣೆಯ ಎಸ್‌ಐ ನಿಖಿಲ್ ಕೆ.ಕೆ ನೇತೃತ್ವದ ಪೊಲೀಸರು ಬೇಳ ಗ್ರಾಮದ ದರ್ಬೆತ್ತಡ್ಕ ಬಸ್ ತಂಗುದಾಣದ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ 7.30 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಬೇಳದ ಅಬ್ದುಲ್ ರಹಿಮಾನ್ ಕೆ.ಎ (23) ಎಂಬಾತನನ್ನು  ಬಂಧಿಸಿ ಕೇಸು ದಾಖಲಿಸಲಾಗಿದೆ. ಇದೇ ರೀತಿ ಬೇಳ ಬಸ್ ತಂಗುದಾಣ ಬಳಿ …

ತೆಂಗಿನಮರದಿಂದ ಬಿದ್ದು ಕಾರ್ಮಿಕ ಮೃತ್ಯು

ಕಾಸರಗೋಡು: ತೆಂಗಿನ ಮರವೇ ರುವ ಕಾರ್ಮಿಕ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕುತ್ತಿಕ್ಕೋಲ್ ಪಂಚಾಯತ್ 11ನೇ ವಾರ್ಡ್‌ಗೊಳಪಟ್ಟ ಕರಿವೇಡಗಂ ಪಳ್ಳಕ್ಕಾಡ್‌ನಲ್ಲಿ ವಾಸಿಸುವ ಟಿ. ಗೋಪಾಲನ್ (58) ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ ಚುಳುಪ್ಪಿಲ್ ಕಂಡೋತ್ ಎಂಬಲ್ಲಿ  ಲಿಬಿ ಎಂಬವರ ತೋಟದಲ್ಲಿ ತೆಂಗಿನ ಕಾಯಿ ಕೊಯ್ಯಲೆಂದು ತಲುಪಿದ್ದರು. ತೆಂಗಿನ ಮರದಿಂದ ಬಿದ್ದು ಗಾಯ ಗೊಂಡ ಗೋಪಾಲನ್‌ರನ್ನು ಕೂಡಲೇ ಬೇಡಗಂನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಲಾ ಯಿತು.  …

ಉತ್ತರ ಭಾರತದಲ್ಲಿ ಮತ್ತೆ ಭಾರೀ ಭೂಕಂಪ: ಮುಂಜಾನೆ ಅಸ್ಸಾಂನಿಂದ ದೆಹಲಿ ವರೆಗೆ ನಡುಗಿದ ಭೂಮಿ

ನವದೆಹಲಿ: ಅಸ್ಸಾಂನ ಮೋರಿಗಾಂ ವ್‌ನಲ್ಲಿ  ಇಂದು ಮುಂಜಾನೆ ೨.೨೫ಕ್ಕೆ ೫.೦ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ ಬಿಂದು ಮೋರಿ ಗಾಂವ್ ಆಗಿದೆಯೆಂದು ಗುರುತಿಸಲಾ ಗಿದೆ ಯೆಂದು  ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.  ಅಸ್ಸಾಂನ ಹೊರತಾಗಿ ಮೇಘಾಲಯ, ಬಿಹಾರ ಮತ್ತು ದೆಹಲಿ ಎನ್‌ಸಿಆರ್ ವರೆಗೆ ಕಂಪನದ ಅನುಭವವಾಗಿದೆ. ಮಧ್ಯರಾತ್ರಿ ನಂತರ ಸಂಭವಿಸಿದ  ಈ ಭೂಕಂಪಗಳೊಂದಿಗೆ   ನಿದ್ರೆಯ ಲ್ಲಿದ್ದ ಜನರು ದಿಢೀರ್ ಆಗಿ ಎಚ್ಚೆತ್ತು ಹೆದರಿ ಮನೆಯಿಂದ ಹೊರಗೆ ಓಡಿದ್ದಾರೆ. ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಭೂಕಂಪದ …

ಮಾಜಿ ಶಾಸಕ ಪಿ. ರಾಜು ನಿಧನ

ಕೊಚ್ಚಿ: ಸಿಪಿಐ ನೇ ತಾರ, ಮಾ ಜಿ ಶಾಸಕ ಪಿ. ರಾಜು (73) ನಿಧನ ಹೊಂದಿದರು. ಇವರು 1991 ಹಾಗೂ 1996ರಲ್ಲಿ ಪರವೂರು ವಿಧಾನಸಭಾ ಕ್ಷೇತ್ರದಿಂದ ಶಾಸಕ ರಾಗಿ ಆಯ್ಕೆಗೊಂಡಿದ್ದರು. ಎರಡು ಬಾರಿ ಸಿಪಿಐಯ ಎರ್ನಾಕುಳಂ ಜಿಲ್ಲಾ ಕಾರ್ಯದರ್ಶಿ, ರಾಜ್ಯ ಕೌನ್ಸಿಲ್ ಸದಸ್ಯ, ಆ ಪಕ್ಷದ ಮುಖವಾಣಿ ಯಾದ ಜನ ಯುಗಂ ಪತ್ರಿಕೆಯ ಕೊಚ್ಚಿ ಘಟಕದ ಮೆನೇಜರ್ ಆಗಿಯೂ ಸೇವೆ ಸಲ್ಲಿಸಿದ್ದರು.ಅಸೌಖ್ಯ ನಿಮಿತ್ತ ರಾಜುರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿ ತ್ತಾದರೂ ಚಿಕಿತ್ಸೆ ಫಲಕಾರಿಯಾ …

ಮಾರಾಟಕ್ಕಾಗಿ ತಂದಿದ್ದ ಗಾಂಜಾ ವಶ: ಯುವಕ ಸೆರೆ

ಕಾಸರಗೋಡು: ಮಾರಾಟಕ್ಕಾಗಿ ತರಲಾಗಿದ್ದ ಗಾಂಜಾ ಸಹಿತ ಯುವಕನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ತಳಂಗರೆ ಪಟೇಲ್ ರೋಡ್ ಗಜಾಲಿ ನಗರದ ಅಮೀನ್ ಸಿಜಾಹ್ (26) ಬಂಧಿತ ಆರೋಪಿ. ಈತ ನಿನ್ನೆ ತಳಂಗರೆ ಸಿವ್ಯೂ ಪಾರ್ಕ್‌ಗೆ ಬಂದಿದ್ದನೆಂದೂ ಆ ವೇಳೆ ಶಂಕೆಗೊಂಡ ಆತನನ್ನು ತಪಾಸಣೆಗೊಳಪಡಿಸಿದಾಗ ಆತನ ಕೈಯಲ್ಲಿ 7.67 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಅದಕ್ಕೆ ಸಂಬಂಧಿಸಿ  ಆತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಂಚ ಪಡೆಯುವ ನೌಕರರ ಪತ್ತೆಗೆ ವಿಜಿಲೆನ್ಸ್ ತೀವ್ರ ಕಾರ್ಯಾಚರಣೆ: ಒಂದೂವರೆ ತಿಂಗಳಲ್ಲಿ 16 ಮಂದಿ ಸೆರೆ

ಕಾಸರಗೋಡು: ಸರಕಾರಿ ಇಲಾಖೆಗಳಲ್ಲಿ ಲಂಚ ಪಡೆಯುವ ನೌಕರರ ಪತ್ತೆಗೆ ವಿಜಿಲೆನ್ಸ್ ಕಾರ್ಯಾಚರಣೆ ತೀವ್ರಗೊಳಿಸಿದೆ. ರಾಜ್ಯದ ವಿವಿಧ ಕಚೇರಿಗಳಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಲಂಚಕ್ಕೆ ಸಂಬಂಧಿಸಿ 16 ಮಂದಿಯನ್ನು ಸೆರೆಹಿಡಿಯಲಾಗಿದೆ.  ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ತಿಂಗಳಲ್ಲಿ ಒಂಭತ್ತು ಮಂದಿ ಸೆರೆಗೀ ಡಾಗಿದ್ದಾರೆ. ಹೀಗೆ ಸೆರೆಗೀಡಾದವರಲ್ಲಿ ಹೆಚ್ಚಿನವರು ಕಂದಾಯ ಇಲಾಖೆ ನೌಕರರೇ ಆಗಿದ್ದಾರೆಂದೂ ವಿಜಿಲೆನ್ಸ್ ತಿಳಿಸಿದೆ. ಜನವರಿಯಲ್ಲಿ ಲಂಚವಾಗಿ ಪಡೆದ 48,೦೦೦ ರೂಪಾಯಿಗಳನ್ನು ವಿಜಿಲೆನ್ಸ್ ವಶಪಡಿಸಿದೆ. ಕಳೆದ ವರ್ಷ ಲಂಚ ಪಡೆದ ಆರೋಪದಂತೆ 39 ಮಂದಿ ನೌಕರರನ್ನು …

ಬಿಜೆಪಿಗೆ ಸೇರಲು ಇಚ್ಛಿಸುವುದಿಲ್ಲ-ಶಶಿ ತರೂರ್

ತಿರುವನಂತಪುರ: ತಾನು ಬಿಜೆಪಿಗೆ ಸೇರೆನೆಂದು ಕಾಂಗ್ರೆಸ್‌ನಿಂದ ಈಗ ದೂರ ಸರಿದು ನಿಂತಿರುವ  ಹಿರಿಯ ನೇತಾರ ತಿರುವನಂತಪುರ ಸಂಸದ ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಪಕ್ಷಗಳು ಅದರದ್ದೇ ಆದ ಇತಿಹಾಸ, ತತ್ವ ಸಿದ್ಧ್ದಾಂತಗಳು ಹಾಗೂ ನಂಬುಗೆಗಳನ್ನು ಹೊಂದಿವೆ.  ಆದ್ದರಿಂದ ನಾವು ನಂಬಿರುವ ಪಕ್ಷದ ತತ್ವ ಸಿದ್ದಾಂತದ ಮೇಲೆ ನಂಬುಗೆ ಇರುವ ವೇಳೆಯಲ್ಲೇ ಇನ್ನೊಂದು ಪಕ್ಷಕ್ಕೆ ಸೇರುವುದು ಸರಿಯಲ್ಲ. ಆದರೆ ಪಕ್ಷದಿಂದ ದೂರು ಸರಿದು ಪಕ್ಷೇತರ ನಿಲುವು ತಳೆಯುವ ಸ್ವಾತಂತ್ರ ಎಲ್ಲರಿಗೂ ಇದೆ ಎಂದು ಶಶಿ ತರೂರ್ ಹೇಳಿದ್ದಾರೆ. ಆನ್‌ಲೈನ್ …