ಚೆಂಗಳ ಪಂಚಾಯತ್ 9ನೇ ವಾರ್ಡ್‌ನಲ್ಲಿ ರಸ್ತೆ ಅತಿಕ್ರಮಣ: ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ನಾಗರಿಕರ ರೋಷ

ಕಾಸರಗೋಡು: ಚೆಂಗಳ ಪಂಚಾ ಯತ್ 9ನೇ ವಾರ್ಡ್ ಕೋಲಾಚಿ ಯಡ್ಕ ಎಂಬಲ್ಲಿ  ಪಂಚಾಯತ್ ರಸ್ತೆಯನ್ನು ವ್ಯಕ್ತಿಯೋರ್ವ ಅತಿಕ್ರಮಿಸಿ ಸ್ವಂತವಾಗಿಸಿಕೊಂಡಿರುವುದಾಗಿ ದೂರಲಾಗಿದೆ. ಇದರಿಂದಾಗಿ 35 ಕುಟುಂಬಗಳು ಸಮಸ್ಯೆಗೀಡಾಗಿ ರುವುದಾಗಿ ಹೇಳಲಾಗುತ್ತಿದೆ.  ರಸ್ತೆಯನ್ನು ಅತಿಕ್ರಮಿಸಿ ಎರಡು ವಾರಕಳೆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸುತ್ತಿದ್ದಾರೆಂದು ನಾಗರಿಕರು ದೂರುತ್ತಿದ್ದಾರೆ. ಚೆಂಗಳ ಪಂಚಾಯತ್‌ನ ಆಸ್ತಿ ರಿಜಿಸ್ಟರ್‌ನಲ್ಲಿ ಒಳಗೊಂಡ ಕೋಲಾಚಿಯಡ್ಕ ಅಂಗನವಾಡಿ ರಸ್ತೆಯ 50 ಮೀಟರ್ ನಷ್ಟು ಸ್ಥಳವನ್ನು ಅತಿಕ್ರಮಿಸಿಕೊಂ ಡಿರುವುದಾಗಿಯೂ ಇದರಿಂದ  ಆ ರಸ್ತೆಯಲ್ಲಿ ಜನ ಸಂಚಾರಕ್ಕೆ ಅಡಚಣೆ ಉಂಟಾಗಿರುವುದಾಗಿ ಹೇಳಲಾಗು …

ವರ್ಕಾಡಿ, ಕಜೆ ಪ್ರದೇಶಗಳಲ್ಲಿ ಭೂ ಕುಸಿತ ಹಲವು ಕುಟುಂಬಗಳ ಸ್ಥಳಾಂತರ

ವರ್ಕಾಡಿ: ಪಂಚಾಯತ್ ವ್ಯಾಪ್ತಿಯ ಕಜೆ ಎಂಬಲ್ಲಿ ಭೂಮಿ ಕುಸಿದು ಅಪಾಯದ ಸ್ಥಿತಿ ಉಂಟಾ ಗಿದ್ದು, ಸುತ್ತಮುತ್ತಲಿನ ನಿವಾಸಿಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಗುರುವಾರ ರಾತ್ರಿ ಘಟನೆ ಸಂಭವಿಸಿದೆ. ಭೂಕು ಸಿತದ ಪರಿಣಾಮವಾಗಿ ಸುಮಾರು ೧೦ ಮೀಟರ್ ಆಳದ ಎರಡು ದೊಡ್ಡ ಗುಂಡಿಗಳು ಸೃಷ್ಟಿಯಾಗಿದೆ.ಈ ಪ್ರದೇಶದ ವಿವಿಧ ಕಡೆಗಳಲ್ಲಿ ಭೂಮಿ ಕುಸಿದಿದ್ದು, ನೆಲ ಬಿರುಕು ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಾದ ಅವ್ವಮ್ಮ, ಆಸ್ಯಮ್ಮ, ಅಹ್ಮದ್ ಕುಂಞÂ ಇವರನ್ನು ಸ್ಥಳಾಂತರಿಸಲಾಗಿದೆ. ಊರವರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತಾಲೂಕು, …

ತೃಕನ್ನಾಡು ರಸ್ತೆ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಿಲ್ಲ: ಸ್ಥಳೀಯರಿಂದ ಪ್ರತಿಭಟನೆಗೆ ಸಿದ್ಧತೆ

ಬೇಕಲ: ತೀವ್ರ ಮಳೆ ಹಾಗೂ ಕಡಲ್ಕೊರೆತದಿಂದಾಗಿ ಕಾಸರಗೋಡು- ಕಾಞಂಗಾಡ್ ರಾಜ್ಯ ಹೆದ್ದಾರಿಯ ಬದಿ ಕುಸಿದ ತೃಕನ್ನಾಡ್ ರಸ್ತೆ, ಕುಡುಂಗಲ್ಲೂರು ಮಂಟಪ ಸಂರಕ್ಷಣೆಗಿರುವ ನಿರ್ಮಾಣ ಚಟುವಟಿಕೆಗಳು ಇನ್ನೂ ಆರಂಭಗೊಂಡಿಲ್ಲ. ಮಳೆ ಹಾಗೂ ಕಡಲ್ಕೊರೆತ ಮುಂದುವರಿದರೆ ತೃಕನ್ನಾಡ್ ರಾಜ್ಯ ಹೆದ್ದಾರಿ ಸಂಪೂರ್ಣ ಕುಸಿದು ಸಾರಿಗೆ  ಮೊಟಕುಗೊಳ್ಳಲಿದೆ ಎಂಬ ಆತಂಕ ಮುಂದುವರಿಯುತ್ತಿದೆ. ತೃಕನ್ನಾಡ್ ಕ್ಷೇತ್ರಕ್ಕೆ ದಿನವೂ ವಿವಿಧ ಕಾರ್ಯಕ್ರಮಗಳಿಗಾಗಿ ತಲುಪುವವರು ಸಹಿತ ಇದರಿಂದ ಸಮಸ್ಯೆಗೊಳಗಾಗುವರು. ಕರ್ಕಾಟಕ ಅಮವಾಸ್ಯೆ ದಿನದಂದು ಸಾವಿರಾರು ಮಂದಿ ಇಲ್ಲಿ ಪಿತೃತರ್ಪಣೆಗೆ ತಲುಪುತ್ತಿದ್ದಾರೆ. ಕಡಲ್ಕೊರೆತದಿಂದ ಹಾನಿಗೊಂಡ ಕೊಡುಂಗಲ್ಲೂರು ಮಂಟಪ …

ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ

ಕಾಸರಗೋಡು: ಆಗೊಸ್ಟ್ ೧೫ರಂದು ಸ್ವಾತಂತ್ರ್ಯ ದಿನಾಚರಣೆ ಜಿಲ್ಲೆಯಲ್ಲಿ ವಿಪುಲವಾಗಿ ಆಚರಿಸುವುದಕ್ಕಾಗಿ ಕಲೆಕ್ಟ್ರೇಟ್‌ನಲ್ಲಿ ಜರಗಿದ ಸಭೆಯಲ್ಲಿ ತೀರ್ಮಾನಿಸಲಾಯಿತು. ವಿದ್ಯಾನಗರದ ನಗರಸಭಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಪರೇಡ್ ನಡೆಯಲಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಯಶಸ್ವಿಗೊಳಿಸಲು ಎಲ್ಲಾ ಸರಕಾರಿ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಎಡಿಎಂ ಪಿ. ಅಖಿಲ್ ನುಡಿದರು. ಎಆರ್ ಕ್ಯಾಂಪ್ ನಡೆಸುವ ಸ್ವಾತಂತ್ರ್ಯ ದಿನಾಚರಣೆಯ ಅಭ್ಯಾಸ ಪರೇಡ್ ಆಗಸ್ಟ್ 11, 12ರಂದು ನಡೆಯಲಿದೆ. ಭಾಗವಹಿಸುವವರು 11, 12ರಂದು ಅಪರಾಹ್ನ 1.30ಕ್ಕೂ, 13ರಂದು …

ಪೈವಳಿಕೆಯಲ್ಲಿ ಉಮ್ಮನ್ ಚಾಂಡಿ ಸಂಸ್ಮರಣೆ

ಪೈವಳಿಕೆ: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಸಂಸ್ಮರಣೆ ಕಾಲಘಟ್ಟದ ಅನಿವಾರ್ಯತೆಯಾಗಿದೆ ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಹೇಳಿದರು. ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆದ ಉಮ್ಮನ್ ಚಾಂಡಿ ಯವರ ಎರಡನೇ ವಾರ್ಷಿಕ ಸಂಸ್ಮರಣಾ ಕಾರ್ಯ್ರಮದಲ್ಲಿ ಅವರು ಮಾತನಾಡಿ ದರು. ಉಮ್ಮನ್ ಚಾಂಡಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ಮೋಹನ ರೈ, ನಾರಾಯಣ ಏದಾರ್, ಕಾರ್ಯದರ್ಶಿಗಳಾದ ರಾಘವೇಂದ್ರ ಭಟ್, ಸಚ್ಚಿದಾನಂದ ರೈ, ಅಬ್ದುಲ್ಲ ಹಾಜಿ, …

ರಾಷ್ಟ್ರೀಯ ಹೆದ್ದಾರಿ ಉಪ್ಪಳ ಗೇಟ್‌ನಲ್ಲಿ ನಿರಂತರ ಅಪಘಾತ: ಶಾಶ್ವತ ಪರಿಹಾರಕ್ಕೆ ಶಾಸಕ ಪತ್ರ ರವಾನೆ

ಉಪ್ಪಳ:  ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಪೂರ್ತಿಗೊಂಡಾಗ ಉಪ್ಪಳ ಗೇಟ್‌ನಲ್ಲಿ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಲ್ಲಿ ಅಪಘಾತ ಸಾಧ್ಯತೆಯನ್ನು ಇಲ್ಲದಂತೆ ಮಾಡಲು ತುರ್ತಾಗಿ ಶಾಶ್ವತ ಪರಿಹಾರ ಉಂಟಾಗಬೇಕೆಂದು ಆಗ್ರಹಿಸಿ ಶಾಸಕ ಎಕೆಎಂ ಅಶ್ರಫ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರೀಜ್ಯನಲ್ ಆಫೀಸರ್‌ಗೆ ಪತ್ರ ರವಾನಿಸಿದ್ದಾರೆ. ಉಪ್ಪಳ ಗೇಟ್‌ನಲ್ಲಿ ಸರಣಿ ಅಪಘಾತಗಳ ಬಗ್ಗೆ  ಪ್ರಥಮ ಹಂತದಲ್ಲೇ ಜಿಲ್ಲಾ ಅಭಿವೃದ್ಧಿ ಸಮಿತಿಯಲ್ಲಿ ವರದಿ ಮಂಡಿಸಿದ್ದು, ಆ ಬಳಿಕ ಇಲ್ಲಿ ೭ ಎಂ.ಎಂ. ದಪ್ಪದ ಹಳದಿ ಥರ್ಮೋ ಪ್ಲಾಸ್ಟಿಕ್ ಸ್ಟ್ರಿಪ್ ಸ್ಥಾಪಿಸಿದ್ದು, ಎಲ್‌ಎಚ್‌ಎಸ್, …

7 ತಿಂಗಳಿಂದ ವೇತನವಿಲ್ಲ: ಮೇಘ ಕಂಪೆನಿ ಕಚೇರಿ ಮುಂಭಾಗ ಕಾರ್ಮಿಕರಿಂದ ಪ್ರತಿಭಟನೆ

ಕಾಸರಗೋಡು: ಕಳೆದ ೭ ತಿಂಗ ಳಿಂದ ಸರಿಯಾಗಿ ವೇತನ ಲಭಿಸದಿ ರುವುದನ್ನು ಪ್ರತಿಭಟಿಸಿ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಕಂಪೆನಿಯಾದ ಮೇಘ ಕನ್‌ಸ್ಟ್ರಕ್ಷನ್‌ನ ಬಟ್ಟತ್ತೂರಿನಲ್ಲಿರುವ ಕಚೇರಿ ಮುಂಭಾಗ ಕಾರ್ಮಿಕರು, ಚಾಲಕರು ಕೆಲಸ ಸ್ಥಗಿತ ಮುಷ್ಕರ ನಡೆಸಿದರು. ಸಿಐಟಿಯು ಮುಖಂಡರು, ಕಾರ್ಮಿಕ ಪ್ರತಿನಿಧಿಗಳು, ಮೇಘ ಕಂಪೆನಿ ಲೈಸನ್ ಆಫೀಸರ್ ಅಬ್ದುಲ್ ನಿಸಾರ್‌ನೊಂದಿಗೆ ನಡೆಸಿದ ಚರ್ಚೆಯಲ್ಲಿ ೨೫ರ ಮುಂಚಿತ ಎಲ್ಲರಿಗೂ ಕೂಲಿ ನೀಡುವುದಾಗಿ ಕಂಪೆನಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾರ್ಮಿಕರು ಮುಷ್ಕರದಿಂದ ಹಿಂದೆ ಸರಿದರು. ರಾಷ್ಟ್ರೀಯ ಹೆದ್ದಾರಿ ಎರಡನೇ ರೀಚ್‌ನಲ್ಲಿ …

ಶಾಲೆಯಲ್ಲಿ ವಿದ್ಯುತ್ ತಂತಿಯಿಂದ ಶಾಕ್ ತಗಲಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ: ಮಕ್ಕಳ ಹಕ್ಕು ಆಯೋಗ, ಶಿಶು ಕ್ಷೇಮ  ಸಮಿತಿಯಿಂದ ತನಿಖೆ ಆರಂಭ

ಕೊಲ್ಲಂ: ಕೊಲ್ಲಂ ತೇವಲಕ್ಕರ ಬೋಯ್ಸ್ ಹೈಸ್ಕೂಲ್‌ನ ಎಂಟನೇ ತರಗತಿ ವಿದ್ಯಾರ್ಥಿ, ಪಡಿಞಾರೇ ಕಲ್ಲಾಡ ವಲಿಯ ಪಾಡಂ ಮನು ಭವನದ ಮನು-ಸುಜಿ ದಂಪತಿ ಪುತ್ರ ಮಿಥುನ್ ಮನು (13) ವಿದ್ಯುತ್ ತಂತಿಯಿಂದ ಶಾಕ್ ತಗಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬಗ್ಗೆ ರಾಜ್ಯ ಮಕ್ಕಳ ಹಕ್ಕು ಆಯುಕ್ತರು ಇಂದು ಬೆಳಿಗ್ಗೆ ಪ್ರಸ್ತುತ ಶಾಲೆಗೆ ಆಗಮಿಸಿ ನೇರ ತನಿಖೆ ನಡೆಸಿದರು. ವಿದ್ಯುನ್ಮಂಡಳಿಯ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆಯೆಂದು ಆಯುಕ್ತರು ಹೇಳಿದ್ದಾರೆ. ಇನ್ನೊಂದೆಡೆ ವಿದ್ಯುತ್ ಶಾಕ್ ತಗಲಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ …

ತೃಕನ್ನಾಡ್‌ನಲ್ಲಿ ಕಡಲ್ಕೊರೆತ ತೀವ್ರ: ರಾಜ್ಯ ಹೆದ್ದಾರಿ ನೀರುಪಾಲಾಗುವ ಭೀತಿ

ಬೇಕಲ: ತೃಕನ್ನಾಡ್‌ನಲ್ಲಿ 30 ಮೀಟರ್‌ನಷ್ಟು ಭೂಮಿಯನ್ನು ಸಮುದ್ರ ಸ್ವಾಹ ಮಾಡಿದೆ. ಇದರಿಂದಾಗಿ ರಾಜ್ಯ ಹೆದ್ದಾರಿ ಅಪಾಯಕರ ಸ್ಥಿತಿಗೆ ತಲುಪಿದೆ. ರಸ್ತೆಯ ಒಂದು ಬದಿಯಲ್ಲಿ ಪ್ರಸಿದ್ಧವಾದ ತೃಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಸ್ಥಾನವಿದೆ. ಹೆದ್ದಾರಿಯಲ್ಲಿ ಹಾಕಿದ ಡಾಮರುವರೆಗೆ ಎರಡು ಮೀಟರ್‌ನಷ್ಟು ಕುಸಿದು ಮಣ್ಣು ಸಮುದ್ರಕ್ಕೆ ಸೇರಿದೆ. ರಾಜ್ಯ ಹೆದ್ದಾರಿ, ಕ್ಷೇತ್ರ ಹಾಗೂ ಸಮುದ್ರ ನಡುವಿನ ಅಂತರ ಕೇವಲ 35 ಮೀಟರ್ ಆಗಿ ಈಗ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಕಡಲ್ಕೊರೆತದಲ್ಲಿ ಸಮೀಪದಲ್ಲಿದ್ದ ಕೊಡುಂಙಲ್ಲೂರಮ್ಮ ಮಂದಿರ ಅರ್ಧದಷ್ಟು ನೀರುಪಾಲಾಗಿದೆ. ಇದೇ ಸ್ಥಿತಿಯಲ್ಲಿ …

ಮಂಗಲ್ಪಾಡಿ ನಿವಾಸಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಪ್ರಕರಣ: ವಿಚಾರಣೆಗೆ ಹಾಜರಾಗದ ಕಯ್ಯಾರು ನಿವಾಸಿ ಸೆರೆ

ಕಾಸರಗೋಡು: ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗದ  ಯುವಕನನ್ನು ಬಂಧಿಸಲಾಗಿದೆ. ಕಯ್ಯಾರಿನ ಅಬ್ದುಲ್ ರಹ್ಮಾನ್ ಎಂಬಾತನನ್ನು ಹೊಸದುರ್ಗ ಡಿವೈಎಸ್ಪಿ ಬಾಬು  ಪೆರಿಂಙೋತ್ತ್‌ರ ನೇತೃತ್ವದಲ್ಲಿ ಉಪ್ಪಳದಿಂದ ಸೆರೆಹಿಡಿಯಲಾಗಿದೆ. ೨೦೨೨ ಮಾರ್ಚ್ ತಿಂಗಳಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಪಿಲಿಕ್ಕೋಡ್ ತೊಟ್ಟಂ ಗೇಟ್ ಸಮೀಪ ಬಸ್ಸನ್ನು ಓವರ್ ಟೇಕ್ ಮಾಡುವ ಯತ್ನದ ಮಧ್ಯೆ ಅಬ್ದುಲ್ ರಹ್ಮಾನ್ ಚಲಾಯಿಸುತ್ತಿದ್ದ ಬೈಕ್ ಎದುರಿನಿಂದ ಬರುತ್ತಿದ್ದ ಲಾರಿಯನ್ನು ಕಂಡು  ದಿಢೀರ್ ನಿಲ್ಲಿಸಿದಾಗ ಹಿಂಬದಿ ಸೀಟಿನಲ್ಲಿದ್ದ ಮಂಗಲ್ಪಾಡಿ  ಪಚ್ಚಂಬಳ ನಿವಾಸಿ ಕಾಮಿಲ್ …