ಕುಂಬಳೆ ಬೆಡಿ ಮಹೋತ್ಸವಕ್ಕಾಗಿ ಸಿದ್ಧಪಡಿಸಿದ್ದ ಸುಡುಮದ್ದು, ಪಟಾಕಿಗಳು ಪಾಲಕ್ಕಾಡ್‌ನಲ್ಲಿ ವಶ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜಾತ್ರೆಯ ಸಮಾರೋಪದ ಅಂಗವಾಗಿ ನಾಳೆ ನಡೆಯಬೇಕಿದ್ದ ಸುಡುಮದ್ದು ಮಹೋತ್ಸವಕ್ಕಾಗಿ ಸಿದ್ಧಪಡಿಸಿದ್ದ ಸುಡುಮದ್ದು ಹಾಗೂ ಪಟಾಕಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಗುತ್ತಿಗೆದಾರ ಚಾಲಕ್ಕುಡಿಯ ವಿ.ಸಿ. ವರ್ಗೀಸ್ ಈ ವಿಷಯವನ್ನು ಉತ್ಸವ ಸಮಿತಿ ಪದಾಧಿಕಾರಿಗಳಲ್ಲಿ ತಿಳಿಸಿದ್ದಾರೆ. 1070 ಕಿಲೋ ಸುಡುಮದ್ದು ಹಾಗೂ  ಪಟಾಕಿಗಳನ್ನು ವಡಕಾಂಚೇರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. 800 ಕಿಲೋ ಪೊಟಾಶಿಯಂ ನೈಟ್ರೇಟ್, 200 ಕಿಲೋ ಅಲುಮಿನಿಯಂ ಪೌಡರ್, 18 ಕಿಲೋ ಸಲ್ಫರ್, 20,000 ಓಲೆ ಪಟಾಕಿ, 20 ಕಿಲೋ ಸುಡುಮದ್ದು, ಸುಡುಮದ್ದು …

ಸಂತೆಯಲ್ಲಿ ಪರ್ಧಾ ಧರಿಸಿ ತಿರುಗಾಡುತ್ತಿದ್ದ ಯುವಕ ಸೆರೆ

ಕುಂಬಳೆ:  ಜಾತ್ರೆಯ  ಸಂತೆ ಹಾಗೂ ಪರಿಸರ ಪ್ರದೇಶಗಳಲ್ಲಿ ಪರ್ಧಾ ಧರಿಸಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಯುವಕನನ್ನು ಸೆರೆಹಿಡಿಯಲಾಗಿದೆ. ಮಾಯಿಪ್ಪಾಡಿ ನಿವಾಸಿ ಶಶಿಕಾಂತ್ (೪೨) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಬಳಿಕ ಜಾಮೀನಿನಲ್ಲಿ ಬಿಡುಗಡೆಗೊ ಳಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ  ೯.೩೦ರ ಕುಂಬಳೆಯಲ್ಲಿ ಘಟನೆ ನಡೆದಿದೆ.   ಪರ್ದಾ ಧರಿಸಿದ ವ್ಯಕ್ತಿ  ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದುದನ್ನು  ಕೆಲವು ಯುವಕರು ಗಮನಿಸಿದ್ದಾರೆ. ಬಳಿಕ ವ್ಯಕ್ತಿಯ ಚಲನವಲನದಲ್ಲಿ ಮತ್ತಷ್ಟು ಸಂಶಯ ಹುಟ್ಟಿಕೊಂಡ ಹಿನ್ನೆಲೆಯಲ್ಲಿ  ಆ ವ್ಯಕ್ತಿಯನ್ನು ಹಿಂಬಾಲಿಸಿದ್ದಾರೆ.  ಕೊನೆಗೆ ಕ್ಷೇತ್ರ …

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ

ಉಪ್ಪಳ: ನಾಪತ್ತೆಯಾದ ವ್ಯಕ್ತಿಯೊಬ್ಬರು ತೋಟದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲತಃ ವರ್ಕಾಡಿ ಕೂಟತ್ತಜೆ ನಿವಾಸಿಯೂ ಪ್ರಸ್ತುತ ಮಂಗಳೂರು ಕಂಕನಾಡಿಯ ವೆಲೆನ್ಸಿಯದಲ್ಲಿ ವಾಸಿಸುತ್ತಿದ್ದ ಆನಂದ ಜೋಗಿ (೬೯) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಮೀನುಗಾರಿಕಾ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದರು. ಮೊನ್ನೆ ಇವರು ಮನೆಯಿಂದ ಹೊರಗೆ ತೆರಳಿದ್ದರು. ಆದರೆ ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ಕೂಟತ್ತಜೆಯಲ್ಲಿರುವ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಇದರಂತೆ ಸಂಬಂಧಿಕರು ಹುಡುಕಾಡುತ್ತಿದ್ದಂತೆ ನಿನ್ನೆ ಸಂಜೆ ಕೂಟತ್ತಜೆಯಲ್ಲಿ ವ್ಯಕ್ತಿಯೊಬ್ಬರ ತೋಟದ ಕೆರೆಯಲ್ಲಿ ಆನಂದ ಜೋಗಿಯ ಮೃತದೇಹ ಪತ್ತೆಯಾಗಿದೆ. …

ಯುವತಿ ಮುಂದೆ ನಗ್ನತೆ ಪ್ರದರ್ಶನ: ಯುವಕ ಸೆರೆ

ಮುಳ್ಳೇರಿಯ: ಹತ್ತೊಂಬತ್ತರ ಹರೆಯದ ಯುವತಿಯ ಮುಂದೆ ನಗ್ನತೆ ಪ್ರದರ್ಶಿಸಿದ ಯುವಕನನ್ನು ಸೆರೆ ಹಿಡಿಯಲಾಗಿದೆ. ಪಾಂಡಿ ಬಳವಂತಡ್ಕದಲ್ಲಿ ಟ್ಯಾಪಿಂಗ್ ಕಾರ್ಮಿಕನಾದ  ತಿರುವನಂತಪುರ ನಿವಾಸಿ ರತೀಶ್ (೨೨) ಬಂಧಿತ ವ್ಯಕ್ತಿಯಾಗಿದ್ದಾನೆ. ಇತ್ತೀಚೆಗೆ ಈತ ಯುವತಿ ಮುಂದೆ ನಗ್ನತೆ ಪ್ರದರ್ಶಿಸಿದ ಬಗ್ಗೆ ದೂರಲಾಗಿದೆ. ಬಂಧಿತ ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

ಯುವತಿ ನಾಪತ್ತೆ: ಎರ್ನಾಕುಳಂ ನಿವಾಸಿಯೊಂದಿಗೆ ಪರಾರಿ ಶಂಕೆ

ಬದಿಯಡ್ಕ: ತಾಯಿಯ ಫೋನ್ ಅಪರಿಮಿತವಾಗಿ ಬಳಸುತ್ತಿರುವುದನ್ನು ಪ್ರಶ್ನಿಸಿದ ಬೆನ್ನಲ್ಲೇ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಬಾರಡ್ಕ ನಿವಾಸಿ ನಾಪತ್ತೆಯಾಗಿದ್ದಾಳೆನ್ನಲಾಗಿದೆ. ಘಟನೆ ಬಗ್ಗೆ ಮನೆಯವರು ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸ್ವಂತವಾಗಿ ಮೊಬೈಲ್ ಫೋನ್ ಇಲ್ಲದ ಯುವತಿ ತಾಯಿಯ ಮೊಬೈಲ್ ಫೋನ್ ಬಳಸುತ್ತಿದ್ದಳು. ಫೋನ್ ಅಪರಿಮಿತವಾಗಿ ಬಳಸುತ್ತಿರುವುದನ್ನು ಪ್ರಶ್ನಿಸಿ ತಾಕೀತು ನೀಡಲಾಗಿತ್ತೆನ್ನಲಾಗಿದೆ. ಅಲ್ಲದೆ ಯುವತಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯಗೊಂಡ ನಂಬ್ರವನ್ನು ಬ್ಲೋಕ್ ಮಾಡಲಾಗಿತ್ತೆನ್ನಲಾಗಿದೆ. ಅದರ ಬೆನ್ನಲ್ಲೇ ಯುವತಿ ನಾಪತ್ತೆಯಾಗಿದ್ದಾಳೆ. ಯುವತಿಯ ನಾಪತ್ತೆಗೆ ಸಂಬಂಧಿಸಿ …

ಓಮ್ನಿ ವ್ಯಾನ್‌ನಲ್ಲಿ ಹೊಯ್ಗೆ ಸಾಗಾಟ: ಪೊಲೀಸರನ್ನು ಕಂಡು ವಾಹನ ಉಪೇಕ್ಷಿಸಿ ಚಾಲಕ ಪರಾರಿ

ಉಪ್ಪಳ: ಓಮ್ನಿ ವ್ಯಾನ್‌ನಲ್ಲಿ ಹೊಯ್ಗೆ ಸಾಗಿಸುತ್ತಿದ್ದ ವೇಳೆ ಪೊಲೀಸರನ್ನು ಕಂಡು ಚಾಲಕ ವಾಹನ ಉಪೇಕ್ಷಿಸಿ ಪರಾರಿಯಾಗಿದ್ದಾನೆ. ನಿನ್ನೆ ಮುಂಜಾನೆ ೧ ಗಂಟೆ ವೇಳೆ ಉಪ್ಪಳ ಕಸಾಯಿಗಲ್ಲಿ ಎಂಬಲ್ಲಿಂದ ಹೊಯ್ಗೆ ಸಾಗಾಟದ ಓಮ್ನಿ ವ್ಯಾನ್ ವಶಪಡಿಸಲಾಗಿದೆ. ಉಪ್ಪಳ ಕಸಾಯಿಗಲ್ಲಿಯಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಆ ರಸ್ತೆ ಮೂಲಕ ಹೊಯ್ಗೆ ಹೇರಿದ ವಾಹನ ತಲುಪಿದೆ. ಪೊಲೀಸರನ್ನು ಕಂಡೊಡನೆ ಓಮ್ನಿ ವ್ಯಾನ್‌ನ ಚಾಲಕ ವಾಹನವನ್ನು ಉಪೇಕ್ಷಿಸಿ ಓಡಿ ಪರಾರಿಯಾಗಿದ್ದಾನೆ.  ವಾಹನದಲ್ಲಿ ೧೫ ಕ್ವಿಂಟಾಲ್ ನಷ್ಟು ಹೊಯ್ಗೆಯನ್ನು ಗೋಣಿಚೀಲಗಳಲ್ಲಿ ತುಂಬಿಸಿಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. …

ಲೋಕಸಭಾ ಚುನಾವಣೆ: ಸಿಪಿಐ ಉಮೇದ್ವಾರರ ಯಾದಿ ಪ್ರಕಟ

ತಿರುವನಂತಪುರ: ಲೋಕಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕೇರಳದಲ್ಲಿ ಸ್ಪರ್ಧಿಸುವ ತನ್ನ ಪಕ್ಷದ ನಾಲ್ಕು ಉಮೇದ್ವಾರರ ಯಾದಿ ಯನ್ನು ಸಿಪಿಐ ವಿದ್ಯುಕ್ತವಾಗಿ ಪ್ರಕಟಿಸಿದೆ. ಇದರಂತೆ ತಿರವನಂತಪುರ ಲೋಕಸಭಾ ಕ್ಷೇತ್ರದಲ್ಲಿ  ಸಿಪಿಐಯ ಹಿರಿಯ ನೇತಾರ ಪನ್ಯನ್ ರವೀಂದ್ರನ್ ರನ್ನು ಕಣಕ್ಕಿಳಿಸಲಾಗಿದೆ. ಉಳಿದಂತೆ ಮಾವೇಲಿಕ್ಕರದಲ್ಲಿ ಸಿ.ಎ ಅರುಣ್ ಕುಮಾರ್, ತೃಶೂರಿನಲ್ಲಿ ಸಚಿವ ಎಸ್. ಸುನಿಲ್ ಕುಮಾರ್ ಮತ್ತು ವಯನಾಡಿನಲ್ಲಿ  ಆನಿರಾಜರನ್ನು ಸಿಪಿಐ ಕಣಕ್ಕಿಳಿಸಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋ ವಿಶ್ವಂ ತಿಳಿಸಿದ್ದಾರೆ. ವಯನಾಡಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸುವ ವಿಷಯದಲ್ಲಿ …

ರೈಲ್ವೇ ನಿಲ್ದಾಣದಲ್ಲಿ ಹಲ್ಲೆ  ಪ್ರಕರಣ: ಆರೋಪಿಗೆ ರಿಮಾಂಡ್

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ಮೇಲ್ಪರಂಬ ನಿವಾಸಿಗೆ ಹಲ್ಲೆಗೈದು ಗಾಯಗೊಳಿಸಿದ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಉಪ್ಪಳ ಕೋಡಿಬೈಲು ನಿಯಾಸ್ ಮಂಜಿಲ್‌ನ ನಿಯಾಸ್ ಎ. (೩೩) ಎಂಬಾತನಿಗೆ ರಿಮಾಂಡ್ ವಿಧಿಸಲಾಗಿದೆ. ರೈಲ್ವೇ ಸೀಸನ್ ಟಿಕೆಟ್ ಪಡೆಯಲೆಂದು ಮೊನ್ನೆ ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ತಲುಪಿ ಕಳನಾಡು ಮೇಲ್ಪರಂಬ ಬಳಿಯ ಕೈನೋತ್ ನಿವಾಸಿ ಉಬೈದ್ (೫೨) ಎಂಬವರಿಗೆ ನಿಯಾಸ್ ಹೊಡೆದು ಗಾಯಗೊಳಿಸಿದ್ದನು. ಈ ಸಂಬಂಧ ನಿಯಾಸ್ ವಿರುದ್ಧ ಮಂಜೇಶ್ವರ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದರು.

ಆಟೋ ರಿಕ್ಷಾದ ಮೇಲೆ ಕಾಡಾನೆ ದಾಳಿ: ಚಾಲಕ ಸಾವು; ಐವರಿಗೆ ಗಾಯ, ಇಬ್ಬರಿಗೆ ಗಂಭೀರ

ಮೂನಾರ್: ರಾಜ್ಯದಲ್ಲಿ  ಜನವಾಸ ಕೇಂದ್ರಗಳಿಗೆ ಕಾಡಾನೆಗಳು ನುಗ್ಗಿ ನಡೆಸುವ ದಾಳಿ ಇತ್ತೀಚೆಗಿನಿಂದ ಹೆಚ್ಚಾಗಿ ಅದರಲ್ಲಿ ವಯನಾಡು ಜಿಲ್ಲೆಯಲ್ಲಿ ಮಾತ್ರವಾಗಿ  ಕಳೆದ ಎರಡು ವಾರದಲ್ಲಿ ಮಾತ್ರವಾಗಿ  ಮೂವರು ಪ್ರಾಣ ಕಳೆದುಕೊಂಡ ಬೆನ್ನಲ್ಲೇ ಅಂತಹ ದಾಳಿಯೊಂದು ಇಡುಕ್ಕಿ ಜಿಲ್ಲೆಯ ಮೂನಾರ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ.   ಕಾಡಾನೆ ದಾಳಿಯಲ್ಲಿ  ಆಟೋ ರಿಕ್ಷಾ ಚಾಲಕ ಮೂನ್ನಾರು ಕನ್ನಿಮಲ ಟೋಪ್ ಡಿವಿಷನ್ ನಿವಾಸಿ    ಸುರೇಶ್ ಕುಮಾರ್ (ಮಣಿ ೪೫) ಎಂಬವರು ಸಾವನ್ನಪ್ಪಿದ್ದಾರೆ. ಆಟೋ ರಿಕ್ಷಾದಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು. ಇದರಲ್ಲಿ  ಕನ್ನಿಮೂಲೆ ಟೋಪ್ …

ಕರ್ನಾಟಕ ಮದ್ಯ ಸಹಿತ ಸ್ಕೂಟರ್ ವಶ

ಕಾಸರಗೋಡು: ನಗರದ ಬೀರಂತಬೈಲು ಲಕ್ಷ್ಮೀವೆಂಕಟೇಶ ರಸ್ತೆ ಬಳಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ ಜಿಜು ಇ.ಟಿ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚ ರಣೆಯಲ್ಲಿ  ೬.೧೨ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಅಡ್ಕತ್ತಬೈಲು ಅರ್ಜಾಲ್ ಹೌಸ್‌ನ ಅನಿಲ್ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಆತ ಪರಾರಿಯಾಗಿ ರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಾಲು ಸಾಗಿಸಲು ಬಳಸ ಲಾಗುತ್ತಿ ರುವುದಾಗಿ ಹೇಳಲಾಗುತ್ತಿರುವ ಸ್ಕೂಟರನ್ನು …