ಬೇಕೂರು ಸೇವಾ ಭಾರತಿ ಕಲಾವೃಂದ ಹಾಗೂ ಭಜನಾ ಮಂದಿರದ ರಜತ ಮಹೋತ್ಸವ, ನೂತನ ಕಟ್ಟಡ ಉದ್ಘಾಟನೆ

ಉಪ್ಪಳ: ಬೇಕೂರು ಸೇವಾಭಾರತಿ ಕಲಾವೃಂದ ಹಾಗೂ ಭಜನಾ ಮಂದಿರದ ರಜತ ಮಹೋತ್ಸವ ಹಾಗೂ ನೂತನ ಕಟ್ಟಡ ರಜತಾದ್ರಿಯ ಉದ್ಘಾಟನಾ ಸಮಾರಂಭ ನಾಳೆಯಿಂದ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರಗಲಿದೆ. ನಾಳೆ ಪ್ರಾತ:ಕಾಲ ಗಣಹೋಮ, ಬೆಳಿಗ್ಗೆ 9.34ಕ್ಕೆ ರಜತಾದ್ರಿಯ ಪ್ರವೇಶೋತ್ಸವ, 10ಕ್ಕೆ ವಿವಿಧ ತಂಡಗಳಿAದ ಭಜನಾ ಸಂಕೀರ್ತನೆ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದೀಪ ಪ್ರಜ್ವಲನೆಗೊಳಿಸುವರು. ಸಂಜೆ 6.45ಕ್ಕೆ ಭಜನಾ ಮಂಗಳೋತ್ಸವ, 13ರಂದು ಬೆಳಿಗ್ಗೆ 10ರಿಂದ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಅನ್ನಸಂತರ್ಪಣೆ, ಸಂಜೆ 5ಕ್ಕೆ …

ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾ ಸಮಿತಿ ವಾರ್ಷಿಕೋತ್ಸವ

ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ೪೪ನೇ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು. ಗಣಪತಿ ಹೋಮ, ದೀಪ ಪ್ರತಿಷ್ಠೆ, ಶ್ರೀ ಗೋಪಾಲಕೃಷ್ಣ ಪೈ ಬದಿಯಡ್ಕ ಅವರಿಂದ ದೀಪಜ್ವಲನೆ ನಡೆಯಿತು. ಶ್ರೀ ಧರ್ಮಶಾಸ್ತಾ ಭಜನಾ ಸಂಘ, ಮಾತೃಮಂಡಳಿ ಹಾಗೂ ಶ್ರೀ ಕುಮಾರಸ್ವಾಮಿ ಭಜನಾ ಸಂಘ ನೀರ್ಚಾಲು ಇವರಿಂದ ಭಜನಾ ಸೇವೆ, ಶ್ರೀ ಧರ್ಮಶಾಸ್ತಾ ಕುಣಿತ ಭಜನಾ ತಂಡದವರಿAದ ಕುಣಿತ ಭಜನೆ, ವಿಶ್ವನಾಥ ನಾಯ್ಕ ಬಲವಂತಡ್ಕ ಇವರ ಶಿಷ್ಯರ ರಂಗಪ್ರವೇಶ ಜರಗಿತು. ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ …

ಬಸ್‌ನಲ್ಲಿ ಬಾಲಕಿಗೆ ಕಿರುಕುಳ: ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸು

ಆಲಪ್ಪುಳ: ಪ್ರಾಯಪೂರ್ತಿಯಾಗದ ವಿದ್ಯಾರ್ಥಿನಿಗೆ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಬಸ್ ಕಂಡೆಕ್ಟರನ್ನು ಸೆರೆ ಹಿಡಿಯಲಾಗಿದೆ. ಮಣ್ಣಂಚೇರಿ ನಿವಾಸಿ ನಿಯಾಸ್ (೨೮)ನನ್ನು ಬಂಧಿಸಲಾಗಿದೆ. ಹಲವು ದಿನಗಳಿಂದ ಆರೋಪಿ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಬಹಿರಂಗಪಡಿಸಬಾರದೆಂದು ಆರೋಪಿ ಬೆದರಿಸಿರುವುದಾಗಿಯೂ ಹೇಳಲಾಗುತ್ತಿದೆ. ಬಾಲಕಿಯ ಸಂಬಂಧಿಕರು ನೀಡಿದ ದೂರಿನಂತೆ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಈತನಿಗೆ ರಿಮಾಂಡ್ ವಿಧಿಸಲಾಗಿದೆ.

ವಿಧಾನಸಭಾ ಅಧಿವೇಶನ ಜ. ೨೫ರಿಂದ: ಫೆ. ೫ಕ್ಕೆ ರಾಜ್ಯ ಬಜೆಟ್ ಮಂಡನೆ

ತಿರುವನಂತಪುರ:  ರಾಜ್ಯ ವಿಧಾನಸಭೆಯ ಮುಂದಿನ ಬಜೆಟ್ ಅಧಿವೇಶನ ಜನವರಿ ೨೫ರಂದು ಆರಂಭಗೊಳ್ಳಲಿದೆ. ೨೦೨೪-೨೫ನೇ ಸಾಲಿನ ಆರ್ಥಿಕ ವರ್ಷದ ರಾಜ್ಯ ಮುಂಗಡ (ಬಜೆಟ್) ಪತ್ರವನ್ನು ಫೆಬ್ರವರಿ ೫ರಂದು ಬೆಳಿಗ್ಗೆ ೯ ಗಂಟೆಗೆ ಹಣಕಾಸು ಸಚಿವ ಕೆ.ಎನ್. ಬಾಲ ಗೋಪಾಲನ್ ಮಂಡಿಸುವರು. ಕೇಂದ್ರ ಬಜೆಟ್  ಫೆಬ್ರವರಿ ೧ರಂದು ಮಂಡನೆಯಾಗುವ ಸಾಧ್ಯತೆ ಇದೆ. ಅದಕ್ಕೆ ಹೊಂದಿ ಕೊಂಡು ರಾಜ್ಯ ಬಜೆಟ್‌ನಲ್ಲಿ ಅಗತ್ಯದ ಬದಲಾವಣೆ ಉಂಟಾಗುವ ಸಾಧ್ಯತೆಯಿದೆ.ಒಂದು ವೇಳೆ ಫೆಬ್ರವರಿಯಲ್ಲಿ ಲೋಕಸಭಾ ಚುನಾವಣೆ ಘೋಷಿ ಸಿದಲ್ಲಿ, ವಿಧಾನಸಭಾ ಅಧಿವೇಶ ನವನ್ನು ಮುಂದೂಡಬೇಕಾಗಿ ಬರಲಿದೆ. …

ಪ್ರಾಧ್ಯಾಪಕನ ಕೈ ತುಂಡರಿಸಿದ ಪ್ರಕರಣ: ೧೩ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಿ.ಎಫ್ ಕಾರ್ಯಕರ್ತ ಎನ್‌ಐಎ ಬಲೆಗೆ

ಕಣ್ಣೂರು: ಪ್ರಶ್ನೆ ಪತ್ರಿಕೆಯಲ್ಲಿ ಧಾರ್ಮಿಕ ನಿಂದನೆ ನಡೆಸಲಾಗಿದೆಯೆಂದು ಆರೋಪಿಸಿ ಕೋಮು  ದ್ವೇಷದಿಂದ ಕಾಲೇಜು ಪ್ರಾಧ್ಯಾಪಕ ಟಿ.ಜೆ.ಜೋಸೆಫ್‌ರ ಕೈ ತುಂಡರಿಸಿದ ಪ್ರಕರಣದ ಒಂದನೇ ಆರೋಪಿಯಾಗಿದ್ದು, ಕಳೆದ ೧೩ ವರ್ಷಗಳಿಂದ ತಲೆಮರೆಸಿಕೊಂಡು ಜೀವಿಸುತ್ತಿದ್ದ ಪೋಪುಲರ್ ಫ್ರೆಂಟ್ (ಪಿಎಫ್) ಕಾರ್ಯಕರ್ತ ಕೊಚ್ಚಿ ಅಶಮನ್ನೂರ್ ನುಲೇಲಿ ಮುಂಡಶ್ಶೇರಿ ನಿವಾಸಿ ಸವಾದ್ (೩೮)   ಕೊನೆಗೂ ಕಣ್ಣೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಲೆಗೆ ಬಿದ್ದಿದ್ದಾನೆ. ಕಣ್ಣೂರಿನ ಮನೆಯೊಂದರಲ್ಲಿ ತಲೆಮರೆಸಿಕೊಂಡು   ಜೀವಿಸುತ್ತಿದ್ದನೆಂಬ ಬಗ್ಗೆ   ಖಚಿತ ಮಾಹಿತಿ ಲಭಿಸಿದ ಎನ್‌ಐಎ ಇಂದು ಬೆಳಿಗ್ಗೆ ಆ  ಮನೆಗೆ ಸುತ್ತುವರಿದು …

ಆದೂರಿನಿಂದ ಬೈಕ್ ಕಳವುಗೈದ ತಂಡ ಸೆರೆ

ಮುಳ್ಳೇರಿಯ: ಆದೂರು ಸಿಎ ನಗರದಿಂದ ಎರಡು ಬೈಕ್‌ಗಳನ್ನು ಕಳವುಗೈದ ಪ್ರಕರಣದಲ್ಲಿ ಪ್ರಾಯ ಪೂರ್ತಿಯಾಗದ ಮೂರು ಮಕ್ಕಳ ಸಹಿತ ಆರು ಮಂದಿಯನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಪೊವ್ವಲ್‌ನ ಗುಜರಿ ವ್ಯಾಪಾರಿ ಶರೀಫ್ (೩೯), ಪೊವ್ವಲ್ ಮಾಸ್ತಿಕುಂಡ್ ಕಾಲನಿಯ ಅಬ್ದುಲ್ ಲತೀಫ್ (೩೬), ಎಡನೀರು ಕುಂಡೋರ್‌ಮೂಲೆಯ ನಿತಿನ್ (೧೮) ಎಂಬಿವರನ್ನು ಆದೂರು ಎಸ್‌ಐ ಅನುರೂಪ್ ನೇತೃತ್ವದ ತಂಡ ಬಂಧಿಸಿದೆ. ಕಳವುಗೈದ ಬೈಕ್‌ಗಳನ್ನು ಶರೀಫ್‌ನ ಪೊವ್ವಲ್ ನಲ್ಲಿರುವ ಗುಜರಿ ಅಂಗಡಿಯಿಂದ ಪತ್ತೆಹಚ್ಚಲಾಗಿದೆ. ಸೆರೆಯಾದವರಲ್ಲಿ ಮೂರು ಮಂದಿ ೧೬, ೧೭ ವರ್ಷದವರಾಗಿದ್ದಾರೆ. ಆದೂರು …

ಮಲ್ಲ ಕ್ಷೇತ್ರ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ನಿಧನ

ಮಲ್ಲ: ಮಲ್ಲ ಶ್ರೀ ದುರ್ಗಾಪರಮೇ ಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಧಾರ್ಮಿಕ ಮುಂದಾಳು ಆನೆಮಜಲು ವಿಷ್ಣು ಭಟ್ (೬೬) ನಿಧನ ಹೊಂದಿದರು. ನಿನ್ನೆ ರಾತ್ರಿ ೧೦.೩೦ಕ್ಕೆ ಆನೆಮಜಲುನಲ್ಲಿ ರುವ ಸ್ವ-ಗೃಹದಲ್ಲಿ ನಿಧನ ಸಂಭವಿಸಿದೆ. ದಿ| ಅಚ್ಯುತ ಭಟ್- ಸುಮತಿ ಅಮ್ಮ ದಂಪತಿಯ ಪುತ್ರನಾದ ವಿಷ್ಣು ಭಟ್ ಅವರು ಪತ್ನಿ ಸಂಧ್ಯಾ ಭಟ್, ಮಕ್ಕಳಾದ ಡಾ| ದುರ್ಗಾಪ್ರಸಾದ್, ನ್ಯಾಯವಾದಿ ಪ್ರದೀಪ್, ಪ್ರತಿಭ, ಸೊಸೆ ಶ್ರೀಲತ, ಸಹೋದರ- ಸಹೋದರಿಯರಾದ ಸತ್ಯನಾರಾಯಣ ಭಟ್, ಶ್ರೀಧರ ಭಟ್, ರಾಧಾಕೃಷ್ಣ ಭಟ್, ಶಿವರಾಮ ಭಟ್, …

ಉಳಿಯ: ಆಟೋ ಚಾಲಕ ನಿಧನ

ಮಧೂರು: ಉಳಿಯ ತುಳಸಿ ನಿವಾಸದ ಮೋಹನ ಗಟ್ಟಿ (೬೭) ನಿಧನಹೊಂ ದಿದರು. ಆಟೋ ಚಾಲಕರಾಗಿದ್ದರು. ಮೃತರು ಪತ್ನಿ ಪ್ರತಿಭಾ, ಪುತ್ರ ಕಲಾಧರ್, ಸಹೋದರಿ ಲಲಿತಾ, ಸಹೋದರ ರತ್ನಾಕರ ಗಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಂಗಲ್ಪಾಡಿ ಪಂ.ನಲ್ಲಿ ಅವ್ಯವಹಾರ ಆರೋಪ ಬಿಜೆಪಿಯಿಂದ ಪಂ. ಮುಂದೆ ಧರಣಿ ಸತ್ಯಾಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನಲ್ಲಿ ಅವ್ಯವಹಾರ ನಡೆಯುತ್ತಿದೆಯೆಂದು ಆರೋಪಿಸಿ ಬಿಜೆಪಿ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ  ಪಂಚಾಯತ್ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿದರು. ಪಕ್ಷದ  ಪಂ. ಸಮಿತಿ ಉಪಾಧ್ಯಕ್ಷ ಸುರೇಶ್ ಮುಟ್ಟಂ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಕಾರ್ಯದರ್ಶಿ ಮನುಲಾಲ್ ಮೇಲತ್ತ್, ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಅನಿಲ್ ಕುಮಾರ್ ಕೆ.ಪಿ, ಪಂಚಾಯತ್ …

ಮಳೆಯಲ್ಲಿ ಕೊಚ್ಚಿ ಹೋದ ಭತ್ತ ಕೃಷಿಕರ ನಿರೀಕ್ಷೆ: ಗದ್ದೆಯಲ್ಲಿ ನೀರು ತುಂಬಿ ಹಾನಿ

ಮಂಜೇಶ್ವರ: ಮಳೆ ಸುರಿದು ಧರೆ ಸಂತಸದಿಂದ ತಂಪಾಗಿ ಇರುವಾಗಲೂ ಭೂಮಿಯಲ್ಲಿರುವ ಒಂದು ವಿಭಾಗ ಕಣ್ಣೀರು ಸುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನಿರೀಕ್ಷಿತವಾಗಿ ಅಕಾಲದಲ್ಲಿ ಸುರಿದ ಮಳೆಯಲ್ಲಿ ಕೃಷಿಕರ ಕಣ್ಣೀರೂ ಕರಗುತ್ತಿದೆ. ಅದರಲ್ಲೂ ಭತ್ತ ಕೃಷಿಕರ ಪರಿಸ್ಥಿತಿ ಸಂಕಷ್ಟಮಯವಾಗಿದೆ. ಕಷ್ಟಪಟ್ಟು ಮಾಡಿದ ಕೃಷಿ ಕೈಗೆ ಲಭಿಸುವ ವೇಳೆ ಮಳೆಗೆ ಹಾನಿಗೊಂಡಿರುವುದು ಕೃಷಿಕರ ನಿರೀಕ್ಷೆಯನ್ನು ಮಣ್ಣುಪಾಲು ಮಾಡಿದೆ. ಮಂಜೇಶ್ವರ ಸಮೀಪದ ಕನಿಲ ಬಯಲಿನಲ್ಲಿ ನಿನ್ನೆ ಸುರಿದ ಮಳೆಗೆ ಭತ್ತ ಕೃಷಿ ಹಾನಿಗೊಂಡಿದೆ. ಕೊಯ್ಯಲು ಸಿದ್ಧವಾಗಿದ್ದ ಪೈರು ಗಾಳಿ ಮಳೆಗೆ ಬಿದ್ದು ಗದ್ದೆಯಲ್ಲಿ …