ಕುಂಬಳೆ ಕ್ಷೇತ್ರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ೨೭ರಂದು

ಕುಂಬಳೆ: ಇತಿಹಾಸ ಪ್ರಸಿದ್ಧ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಫೆಬ್ರವರಿ ೧೬ರಿಂದ ೨೯ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆ ಈ ತಿಂಗಳ ೨೭ರಂದು ಬೆಳಿಗ್ಗೆ ೯ ಗಂಟೆಗೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸುವರು. ಆ ಬಳಿಕ ನಡೆಯುವ ಸಭೆಯಲ್ಲಿ ಮಾಯಿಪ್ಪಾಡಿ ಅರಮನೆಯ ರಾಜೇಂದ್ರ ರಾವ್ ಮಾಯಿಪ್ಪಾಡಿ ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, …

ಎಡರಂಗ ಸರಕಾರದ ಜನದ್ರೋಹ ಆರೋಪಿಸಿ ಐಕ್ಯರಂಗದಿಂದ ವಿಚಾರಣೆ ಸಭೆ ನಾಳೆ ಕುಂಬಳೆಯಲ್ಲಿ

ಕುಂಬಳೆ: ಎಡರಂಗ ಸರಕಾರದ ಕಪಟತನವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಹಾಗೂ ಅಧಃಪತನದಲ್ಲಿರುವ ರಾಜ್ಯದ ಚಿತ್ರವನ್ನು ಜನರ ಮುಂದಿಡಲು ಐಕ್ಯರಂಗದ ನೇತೃತ್ವದಲ್ಲಿ ರಾಜ್ಯದ ೧೪೦ ವಿಧಾನಸಭಾ ಮಂಡಲಗಳಲ್ಲೂ ನಡೆಸುವ ವಿಚಾರಣಾ ಸಭೆಗಳ ಅಂಗವಾಗಿ ಮಂಜೇಶ್ವರ ವಿಧಾನಸಭಾ ಮಂಡಲ ಮಟ್ಟದ ಸಭೆ ನಾಳೆ ಸಂಜೆ ೩ ಗಂಟೆಗೆ ಕುಂಬಳೆಯಲ್ಲಿ ನಡೆಯಲಿದೆ ಎಂದು ಐಕ್ಯರಂಗದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸರಕಾರದ ವಿರುದ್ಧ ಐಕ್ಯರಂಗದ ದೋಷಾರೋಪ ಪಟ್ಟಿ ಮಂಡನೆ, ದುರಾಡಳಿತದ ಸಂಕಷ್ಟ ಅನುಭವಿಸುವ ಜನರಿಗೆ ಮುಖ್ಯಮಂತ್ರಿ ಹಾಗೂ ಸಚಿವರ ಪ್ರತೀಕಾತಕವಾಗಿ ವಿಚಾರೆ ನಡೆಸುವುದು …

ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಯುವತಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಮಹಿಳೆ ಒಳಗೊಂಡ ತಂಡ ಪರಾರಿ

ಕಾಸರಗೋಡು: ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಯುವತಿಯ ಕುvತ್ತಿಗೆಯಿಂದ ಸ್ಕೂಟಿಯಲ್ಲಿ ಬಂದ ಇಬ್ಬರು ಮೂರೂವರೆ ಪವನ್‌ನ ಚಿನ್ನದ ಕರಿಮಣಿ ಸರ ಎಗರಿಸಿ ಪರಾರಿಯಾದ ಘಟನೆ ನಡೆದದೆ. ಮಾಯಿಪ್ಪಾಡಿ ನಿವಾಸಿ ಪದ್ಮನಾಭ ಎಂಬವರ ಪತ್ನಿ, ಕಾಸರಗೋಡು ನಗರದ ಜವುಳಿ ಅಂಗಡಿಯೊಂದರ ಸಿಬ್ಬಂದಿ ದೀಪ್ತಿ (೩೬) ಎಂಬವರು  ಕೆಲಸ ಮುಗಿಸಿ ಸ್ಕೂಟರ್‌ನಲ್ಲಿ ನಿನ್ನೆ ರಾತ್ರಿ ಸುಮಾರು ೭.೧೫ರ ವೇಳೆ ಉಳಿಯತ್ತಡ್ಕ ಐಎಡಿ ಜಂಕ್ಷನ್ ಬಳಿ ತಲುಪಿದಾಗ   ಸ್ಕೂಟಿಯಲ್ಲಿ ಅಲ್ಲಿಗೆ ಬಂದ ಯುವಕ ಮತ್ತು ಯುವತಿಯೋರ್ವೆ ಮಧೂರು ದಾರಿ ಎಲ್ಲಿ ಎಂದು ದೀಪ್ತಿಯವರಲ್ಲಿ ಕೇಳಿದ್ದು …

ವಿವಿಧೆಡೆ ದಾಳಿ: ೩ ಕಿಲೋ ಗಾಂಜಾ, ಬೃಹತ್  ವಾಶ್, ತಂಬಾಕು ಉತ್ಪನ್ನ ವಶ; ಓರ್ವ ಸೆರೆ

ಕಾಸರಗೋಡು: ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ವೇಳೆ ಜಿಲ್ಲೆಗೆ ಹೊರಗಿನಿಂದ ಭಾರೀ ಪ್ರಮಾಣದಲ್ಲಿ ಅಮಲು ಪದಾರ್ಥ, ಮದ್ಯ ಇತ್ಯಾದಿ ಗಳು ಹರಿದುಬರುತ್ತಿದ್ದು, ಅದನ್ನು ತಡೆ ಗಟ್ಟಿ ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಅಬಕಾರಿ ತಂಡ ಇನ್ನಷ್ಟು ತೀವ್ರಗೊಳಿ ಸಿದೆ.  ಇದರಂತೆ ನಿನ್ನೆ ಜಿಲ್ಲೆಯ ವಿವಿಧೆಡೆ ಗಳಲ್ಲಾಗಿ ಅಬಕಾರಿ ತಂಡ  ನಡೆಸಿದ ಕಾರ್ಯಾಚರಣೆಗಳಲ್ಲಾಗಿ ಮೂರು ಕಿಲೋ ದಷ್ಟು ಗಾಂಜಾ,  ಕಳ್ಳಭಟ್ಟಿ ಸಾರಾಯಿಗಾಗಿ ತಯಾರಿಸುವ ೧೬೫ ಲೀಟರ್ ವಾಶ್ (ಹುಳಿರಸ)ವನ್ನು ಮತ್ತು ೪೦ ಕಿಲೋ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ …

ಮಾನವ ಕಳ್ಳ ಸಾಗಾಟ ಶಂಕೆ: ೩೦೦ಕ್ಕೂ ಹೆಚ್ಚು ಭಾರತೀಯರಿದ್ದ ವಿಮಾನ ವಶ

ನವದೆಹಲಿ: ಮಾನವ ಕಳ್ಳ ಸಾಗಾಟ ಶಂಕೆಯಿಂದಾಗಿ ೩೦೦ಕ್ಕೂ ಹೆಚ್ಚು ಭಾರತೀಯ ಪ್ರಯಾಣಿಕರನ್ನು ಹೊತ್ತು ನಿಕರಾಗುವಾಗೆ ತೆರಳುತ್ತಿದ್ದ ವಿಮಾನವನ್ನು ಫ್ಸಾನ್ಸ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ. ಈ ವಿಮಾನ ದುಬೈಯಿಂದ ನಿಕರಾಗುವಕ್ಕೆ ತೆರಳುತ್ತಿತ್ತು. ಅದರಲ್ಲಿ ಒಟ್ಟು ೩೦೩ ಪ್ರಯಾಣಿಕರಿದ್ದರು. ಇವರೆಲ್ಲಾ ಬಹುಪಾಲು ಮಂದಿ ಭಾರತೀಯರೇ ಆಗಿದ್ದಾರೆ. ಇದೇ ವೇಳೆ ವಿಮಾನದಲ್ಲಿ ಮಾನವ ಕಳ್ಳತಪಾಸಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಅದರಂತೆ ಆ ವಿಮಾನಕ್ಕೆ  ಫ್ರೆಂಚ್ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ …

ನಾಪತ್ತೆಯಾಗಿದ್ದ ಬಾಲಕಿ ಜೀಪು ಢಿಕ್ಕಿ ಹೊಡೆದು ಮೃತ್ಯು

ಹೊಸದುರ್ಗ: ಮನೆ ಯಿಂದ ನಾಪತ್ತೆಯಾಗಿದ್ದ ಬಾಲಕಿ ಜೀಪು  ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಕೊಡಕ್ಕಾಡ್ ಬಳಿಯ ವೆಳ್ಳಚ್ಚಾಲ್  ಶಾಂತಿ ನಿಲಯದ ಸುರೇಶ್-ಚಿತ್ರಾ ದಂಪತಿಯ ಪುತ್ರಿ ಆದಿಯ ಸುರೇಶ್ (೧೭) ಮೃತಪಟ್ಟ ಬಾಲಕಿ. ನಿನ್ನೆ  ರಾತ್ರಿ ೮.೩೦ರ ಬಳಿಕ ಬಾಲಕಿ ಮನೆಯಿಂದ ನಾಪತ್ತೆಯಾಗಿ ದ್ದಳು. ಆಕೆಗಾಗಿ ಹುಡುಕಾಟ ನಡೆಸುತ್ತಿರುವಂತೆ ಪಾಲಕುನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ  ಜೀಪು ಢಿಕ್ಕಿ ಹೊಡೆದು ಗಾಯಗೊಂಡಿರುವುದಾಗಿಯೂ ಇದರಿಂದ ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿ ಸಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಬಾಲಕಿ ಗಂಭೀರ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ …

ಜನರು ನೋಡುತ್ತಿರುವಂತೆಯೇ ಬಾವಿಗೆ ಹಾರಿದ ಯುವಕ: ಅಗ್ನಿಶಾಮಕದಳದಿಂದ ರಕ್ಷಣೆ

ಕಾಸರಗೋಡು: ಜನರು ನೋ ಡುತ್ತಿರುವಂತೆಯೇ ಯುವಕನೋ ರ್ವ ಬಾವಿಗೆ ಹಾರಿದ್ದು, ಬಳಿಕ ಅಗ್ನಿಶಾಮಕ ದಳ ಆತನನ್ನು ರಕ್ಷಿಸಿದ ಘಟನೆ ನಗರದ ಕರಂದಕ್ಕಾಡಿನಲ್ಲಿ ನಡೆದಿದೆ. ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿ ಬಳಿಯ ತಿರುವಿನಲ್ಲಿರುವ ಬಾವಿಗೆ ತಮಿಳುನಾಡಿನ ಕೊಯಂ ಬತ್ತೂರು ನಿವಾಸಿ ಮಾರಿಮುತ್ತು ಪಾಂಡ್ಯನ್ (೩೨) ನಿನ್ನೆ ಸಂಜೆ ಬಾವಿಗೆ ಹಾರಿದ್ದಾನೆ. ವಿಷಯ ತಿಳಿದ ಸ್ಟೇಷನ್ ಆಫೀಸರ್ ಇನ್‌ಚಾರ್ಜ್ ಸಂತೋಷ್ ಕುಮಾರ್ ಮತ್ತು ಇತರ ಸಿಬ್ಬಂದಿಗಳಾದ ಕೆ.ವಿ. ಮನೋ ಹರನ್,  ಶಂಶಾದ್, ಸೂರಜ್, ವಿಜಿನ್, ಷಹಾದ್, ಅನೀಶ್, ರಾಜು ಎಂಬವರು  ತಕ್ಷಣ …

ಪ್ಲಸ್‌ಟು ವಿದ್ಯಾರ್ಥಿನಿಗೆ ಗರ್ಭದಾನ : ಯುವಕನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಪ್ಲಸ್‌ಟು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯನ್ನಾಗಿಸಿದ ಆರೋಪದಂತೆ ತಳಂಗರೆ ನಿವಾಸಿ ವಿರುದ್ಧ ಬೇಡಗಂ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. ತಳಂಗರೆಯ ಶಿಹಾಬ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಿಂಗಳುಗಳ ಹಿಂದೆ ಶಿಹಾಬ್  ಪ್ಲಸ್‌ಟು ವಿದ್ಯಾರ್ಥಿಯೋರ್ವೆಯನ್ನು ಚೆರ್ಕಳದಲ್ಲಿ ಪರಿಚಯಗೊಂಡಿದ್ದ ನೆನ್ನಲಾಗಿದೆ. ಅನಂತರ ಸಾಮಾಜಿಕ ತಾಣಗಳಲ್ಲಿ  ಗೆಳತನ ಮುಂದುವರಿಸಿದ್ದರು. ಈ ಮಧ್ಯೆ ಶಿಹಾಬ್ ಬಾಲಕಿಯ ಮನೆಗೆ ಎರಡು ಬಾರಿ ತೆರಳಿ ಲೈಂಗಿಕ ಕಿರುಕುಳ ನೀಡಿದ್ದನೆನ್ನಲಾಗಿದೆ. ಇದರಿಂದ ಆಕೆ ಗರ್ಭಿಣಿಯಾಗಿದ್ದಳು. ಇತ್ತೀಚೆಗೆ ಬಾಲಕಿಗೆ ಹೊಟ್ಟೆ ನೋವು …

ಯುವಕನಿಗೆ ಇರಿದು ಕೊಲೆಗೈಯ್ಯಲೆತ್ನ: ಇಬ್ಬರ ಸೆರೆ

ಉಪ್ಪಳ: ಯುವಕನಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ  ಇಬ್ಬರು  ಆರೋಪಿಗಳನ್ನು ಮಂಜೇ ಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಉಪ್ಪಳ ಮಜಲ್ ನಿವಾಸಿ ಜಾವೇದ್ ಅಹಮ್ಮದ್ (೩೧), ಉಪ್ಪಳ ನಿವಾಸಿ ಮೊಹಮ್ಮದ್ ರಮೀಸ್ ರಾಸಾ (೩೮) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಉಪ್ಪಳ ಕೋಡಿಬೈಲು ನಿವಾಸಿ  ಮೊಹಮ್ಮದ್ ನವಾಸ್ (೩೭) ಎಂಬವರಿಗೆ ಇರಿದು ಕೊಲೆಗೈಯ್ಯಲು ಯತ್ನಿಸಿದ ಆರೋಪದಂತೆ ಈ ಇಬ್ಬರನ್ನು ಬಂಧಿಸಲಾಗಿದೆ. ಈ ತಿಂಗಳ ೧೫ರಂದು ರಾತ್ರಿ ಉಪ್ಪಳದಲ್ಲಿ ಮೂರು ಮಂದಿ ತಂಡ ಮೊಹಮ್ಮದ್ ನವಾಸ್‌ಗೆ ಇರಿದು ಗಾಯಗೊಳಿಸಿತ್ತು. ಈ ಪ್ರಕರಣದಲ್ಲಿ ಉಪ್ಪಳ …

ಮಂಗಳೂರಿನಲ್ಲಿ ಕೋವಿಡ್ ಬಾಧಿಸಿ ಯುವಕ ಸಾವು: ಜಾಗ್ರತಾ ನಿರ್ದೇಶ

ಮಂಗಳೂರು: ಕೇರಳದಲ್ಲಿ ಕೋವಿಡ್  ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಜಾಗ್ರತಾ ನಿರ್ದೇಶ ಹೊರಡಿಸಿದ್ದ ಮಂಗಳೂರಿನಲ್ಲಿ ಯುವಕನೋರ್ವ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾನೆ. ಝಾರ್ಖಂಡ್ ನಿವಾಸಿಯಾದ ೪೦ರ ಹರೆಯದ ಯುವಕ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ನಿರಂತರ ಕೆಮ್ಮು ಹಾಗೂ ಉಸಿರಾಟ ಸಮಸ್ಯೆಯಿಂದಾಗಿ ಎರಡು ದಿನಗಳ ಹಿಂದೆ ಯುವಕನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಗರದಲ್ಲಿ ನಿರ್ಮಾಣ ಕಾರ್ಮಿಕನಾಗಿದ್ದ ಯುವಕನಿಗೆ ಇತ್ತೀಚೆಗೆ ಕೋವಿಡ್ ಬಾಧಿಸಿತ್ತು. ಕೋವಿಡ್ ಬಾಧಿಸಿ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಜಾಗ್ರತೆ ನಿರ್ದೇಶ ನೀಡಿದೆ. ಕೇರಳದಲ್ಲಿ …