ಪಾಯಿಖಾನೆಗಾಗಿ ತೋಡಲಾಗಿದ್ದ ಹೊಂಡಕ್ಕೆ ಬಿದ್ದು ವಲಸೆ ಕಾರ್ಮಿಕ ಮೃತ್ಯು

ಕಾಸರಗೋಡು: ಪಾಯಿಖಾನೆ ನಿರ್ಮಿಸಲು ತೋಡಲಾಗಿದ್ದ ಹೊಂಡಕ್ಕೆ ಬಿದ್ದು ಗಂಭೀರ ಗಾಯಗೊಂಡು ವಲಸೆ ಕಾರ್ಮಿಕ ಸಾವನ್ನಪ್ಪಿದ ಘಟನೆ ಉಳಿಯತ್ತಡ್ಕ ಬಳಿ ನಿನ್ನೆ ನಡೆದಿದೆ. ಮೂಲತಃ ತಮಿಳುನಾಡು ಸೇಲಂ ಕಳ್ಳಕುರುಚ್ಚಿಯ ಮೈನಾಮೂಡ್ ನಿವಾಸಿ ರಾಮಸ್ವಾಮಿ-ಪೆರುಮ ದಂಪತಿ ಪುತ್ರ, ಈಗ ಕಾಸರಗೋಡು ಕೋಟೆ ರಸ್ತೆಯ ಬಾಡಿಗೆ  ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ಅಯ್ಯನಾರ್(೬೩) ಸಾವನ್ನಪ್ಪಿದ ವ್ಯಕ್ತಿ. ಉಳಿಯತ್ತಡ್ಕ ಬಿಲಾಲ್‌ನ ಗರದಲ್ಲಿ ಹಸೈನಾರ್ ಎಂಬವರಿಗಾಗಿ ಹೊಸದಾಗಿ ನಿರ್ಮಿಸಲಾಗುವ ಮನೆಗಾಗಿ ಪಾಯಿಖಾನೆ ಹೊಂಡ ತೋಡಲಾಗಿತ್ತು. ಆ ಮನೆ ನಿರ್ಮಾಣ ಕೆಲಸಕ್ಕಾಗಿ ಅಲ್ಲಿಗೆ ಬಂದಿದ್ದ ಅಯ್ಯನಾರ್ ನಿನ್ನೆ ಸಂಜೆ …

ನಿರ್ಮಾಣ ಹಂತದಲ್ಲಿರುವ ಮನೆ ಮೇಲಿನಿಂದ ಬಿದ್ದು ಗಾಯಗೊಂಡ ವ್ಯಕ್ತಿ ಮೃತ್ಯು

ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಮನೆ ಮೇಲಿನಿಂದ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಮಂಗಳೂ ರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಮೊಗ್ರಾಲ್ ಪುತ್ತೂರು ಕಂಬಾರು ಬಳ್ಳಿಗೆಯ ಮೊಹಮ್ಮದ್ (೬೦) ಎಂಬವರು ಸಾವನ್ನಪ್ಪಿದ ವ್ಯಕ್ತಿ. ಇವರು ಡಿಸೆಂಬರ್ ೧೯ರಂದು ಮನೆ ಮೇಲಿನಿಂದ ಕೆಳ್ಕಕೆ ಬಿದ್ದು ಗಾಯಗೊಂಡಿದ್ದರು. ಮೃತರು ಪತ್ನಿ ಖದೀಜ, ಮಕ್ಕಳಾದ ಫೈಸಲ್, ನೌಫಲ್, ನವಾಜ್, ನಬೀರಾ, ಶಬ್ನಂ, ಅಳಿಯ ಮತ್ತು ಸೊಸೆಯಂ ದಿರಾದ ಇಬ್ರಾಹಿಂ ಬಂದ್ಯೋಡು, ಅಶ್ರಫ್ ಕಟ್ಟತ್ತಡ್ಕ, …

ಮಂಜೇಶ್ವರ ಪೊಲೀಸ್ ಠಾಣೆಗೆ ಕಾಂಗ್ರೆಸ್ ಮುತ್ತಿಗೆ

ಮಂಜೇಶ್ವರ : ನವಕೇರಳ ಸಭೆಯ ನೆಪದಲ್ಲಿ ಮುಖ್ಯಮಂತ್ರಿಯ ಅಂಗರಕ್ಷಕರು, ಪೊಲೀಸರು ಮತ್ತು ಸಿಪಿಎಂ ಕಾರ್ಯಕರ್ತರಿಂದ ಕೆಎಸ್ ಯು, ಯೂತ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೆಪಿಸಿಸಿ ಆಹ್ವಾನದಂತೆ ರಾಜ್ಯದ ಕಾಂಗ್ರೆಸ್ ಮಂಡಲ ಸಮಿತಿಗಳ ಜಂಟಿ ನೇತೃತ್ವದಲ್ಲಿ ಎಲ್ಲಾ ಪೊಲೀಸ್ ಗಳಿಗೆ ನಡೆದ ಮಾರ್ಚ್ನಲ್ಲಿ ಮಂಜೇಶ್ವರ, ವರ್ಕಾಡಿ, ಮೀಂಜ ಹಾಗೂ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಂಜೇಶ್ವರ ಪೋಲೀಸ್ ಠಾಣಾ ಮಾರ್ಚ್ ಜರುಗಿತು. ಮಂಜೇಶ್ವರ ಮಂಡಲ ಕಾಂಗ್ರೆಸ್ ಅಧ್ಯಕ್ಷ ಅಹ್ಮದ್ ಮನ್ಸೂರ್ …

ಪ್ರಧಾನಮಂತ್ರಿ ಜ.೩ರಂದು ಕೇರಳಕ್ಕೆ ಬೃಹತ್ ಮಹಿಳಾ ಸಮಾವೇಶದಲ್ಲಿ ಭಾಗಿ

ತೃಶೂರು:ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ ೩ರಂದು ಕೇರಳ ಸಂದರ್ಶಿಸುವರೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಇದರಂತೆ ಅಂದು ತೃಶರು ವಡಕ್ಕುಂನಾಥ ಕ್ಷೇತ್ರ ಮೈದಾನದಲ್ಲಿ ಎರಡು ಲಕ್ಷದಷ್ಟು ಮಹಿಳೆಯರು ಭಾಗವಹಿಸುವ ‘ಸ್ತ್ರೀ ಶಕ್ತಿ’ ಮೋದಿ ಜತೆ ಎಂಬ ಹೆಸರಲ್ಲಿ ನಡೆಸಲಾಗುವ ಮಹಿಳಾ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಭಾಗವಹಿಸಿ ಮಾತನಾಡುವರು. ವಿವಿಧ ವಿಭಾಗಗಳ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವಂತೆ ಮಾಡಿದ ಪ್ರಧಾನಮಂತ್ರಿಯವರನ್ನು ಇದೇ ಸಂದರ್ಭದಲ್ಲಿ ಬಿಜೆಪಿ ಗಣ್ಯರು ಅಭಿನಂದಿಸುವರು. ತೃಶೂರು ಸಂದರ್ಶನವನ್ನು …

ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ

ಮಂಜೇಶ್ವರ: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಮುಂದಿನ 5 ವರ್ಷದ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ಬ್ಯಾಂಕ್‌ನ ಮಹಾಸಭೆ ಅವಿರೋಧವಾಗಿ ಆಯ್ಕೆ ಮಾಡಿತು. ಬ್ಯಾಂಕ್‌ನ ಅಧ್ಯಕ್ಷರಾಗಿ ಎಸ್. ರಾಮಚಂದ್ರ ಬಡಾಜೆ ಹಾಗೂ ಉಪಾಧ್ಯಕ್ಷರಾಗಿ ವಿಜಯ ಕನಿಲ ಮತ್ತು ನಿರ್ದೇಶಕರಾಗಿ ಗಣೇಶ್ ಸಿ.ಎಚ್, ಯತೀಶ್ ಕಾಜೂರ್, ಡಾ| ಕೆ.ಎ ಖಾದರ್, ಗಂಗಾಧರ. ಕೆ, ಎಚ್. ಗಂಗಾಧರ, ಕೆ.ಕೆ ರಾಮಚಂದ್ರ ಕಣ್ವತೀರ್ಥ, ಸೇಸಮ್ಮ ಉದ್ಯಾವರ, ನಾರಾಯಣಿ ರಾಜನ್, ರೇಖಾ ಕೀರ್ತೇಶ್ವರ ಆಯ್ಕೆಯಾದರು. ನೂತನ ಆಡಳಿತ ಮಂಡಳಿಗೆ ಬ್ಯಾಂಕ್ ಸದಸ್ಯರು ಮತ್ತು …

ಕುಂಬಳೆಯಲ್ಲಿ ಶೌಚಾಲಯ ಉದ್ಘಾಟನೆ ೨೫ರಂದು

ಕುಂಬಳೆ: ಪೇಟೆಯಲ್ಲಿ ಶೌಚಾಲಯವಿಲ್ಲದ ಕಾರಣ ಪೇಟೆಗೆ ತಲುಪುವ ಮಂದಿ ಅನುಭವಿಸುವ ಸಂಕಷ್ಟವನ್ನು ಮನಗಂಡು ವಿವಿಧ ಸಂಘ ಸಂಸ್ಥೆಗಳ, ಸಹೃದಯ ವ್ಯಕ್ತಿಗಳಿಂದ ಧನ ಸಹಾಯ ಪಡೆದು ನಿರ್ಮಿಸಿದ ಶೌಚಾಲಯದ ಉದ್ಘಾಟನೆ ಈ ತಿಂಗಳ ೨೫ರಂದು ಬೆಳಿಗ್ಗೆ ೯.೩೦ಕ್ಕೆ ನಡೆಯಲಿದೆ. ಎಂದು ಸೇವಾ ಭಾರತಿ ಕುಂಬಳೆ ಘಟಕ, ಭೂತಸ್ಥಾನ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಶೌಚಾಲಯವನ್ನು ಹಿರಿಯ ವೈದ್ಯ ಸರ್ವೇಶ್ವರ್ ಭಟ್ ಉದ್ಘಾಟಿಸುವರು. ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಸಹ ಕಾರ್ಯವಾಹ ಲೋಕೇಶ್ ಜೋಡುಕಲ್ಲು ಮಾತನಾಡುವರು. ಕಲಾರತ್ನ ಶಂನಾಡಿಗ, ಸೇವಾ ಭಾರತಿ …

ಉಬ್ರಂಗಳ ಬಡಗು ಶಬರಿಮಲೆಯಲ್ಲಿ ಶ್ರೀದೇವರ ದರ್ಶನಬಲಿ

ಬದಿಯಡ್ಕ: ಉಬ್ರಂಗಳ ಬಡಗುಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ವಾರ್ಷಿಕ ಪಾಟು ಉತ್ಸವ, ಶ್ರೀಭೂತ ಬಲಿ ಉತ್ಸವ ಹಾಗೂ ಧೂಮಾವತಿ ದೈವದ ಕೋಲ ನಿನ್ನೆ ಮುಕಾÀ್ತ ಯ ಗೊಂಡಿತು. ಶನಿವಾರ ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿತ್ತು. ಪಾಟು ಉತ್ಸವದ ನಂತರ ಮಂಗಳವಾರ ರಾತ್ರಿ ಶ್ರೀದೇವರ ಬಲಿ ಉತ್ಸವ, ಬೆಡಿಸೇವೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಟ್ಯಗುರು ಮಂಜೇಶ್ವರ ಬಾಲಕೃಷ್ಣ ಮಾಸ್ತರ್ ಇವರ ಶಿಷ್ಯರಿಂದ ನೃತ್ಯ ವೈವಿಧ್ಯ ನಡೆಯಿತು. ನಿನ್ನೆ ಬೆಳಗ್ಗೆ ದರ್ಶನಬಲಿ, ಬಟ್ಟಲು …

ಪೈವಳಿಕೆಯಲ್ಲಿ ನೂತನವಾಗಿ ನಿರ್ಮಿಸಿದ ಜನಪರ ಹೊಟೇಲ್ ಉದ್ಘಾಟನೆ

ಪೈವಳಿಕೆ : ಪೈವಳಿಕೆ ಪಂಚಾಯತ್ ಆಡಳಿತ ಸಮಿತಿ ಆರಂಭಿಸಿದ ಪೂರ್ತಿಯಾದ ಜನಪರ ಹೊಟೇಲ್ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ.ಕೆ ಅಧ್ಯಕ್ಷತೆ ವಹಿಸಿದ್ದರು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ.ಎಸ್, ಕಾಸರಗೋಡು ಆರ್‌ಡಿಒ ಅತುಲ್ ಸ್ವಾಮಿನಾಥನ್, ಪಂಚಾಯತ್ ಉಪಾಧ್ಯಕ್ಷೆ ಪುಷ್ಪಲಕ್ಷ್ಮಿ.ಎನ್, ಆರೋಗ್ಯ – ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಝೆಡ್.ಎ ಕಯ್ಯಾರ್, ಜತೆ ಕಾರ್ಯದರ್ಶಿ ಲಾರೆನ್ಸ್ ಎಂಬಿವರು ಮಾತನಾಡಿದರು. ಅಭಿವೃದ್ಧಿ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಚಿಪ್ಪಾರು ಸ್ವಾಗತಿಸಿದರು.

ಉಪ್ಪಳ ಗ್ರಾಂಡ್ ಎಕ್ಸ್‌ಫೋ ನಾಳೆಯಿಂದ

ಕುಂಬಳೆ: ಯೂನಿವೆಂಟ್ ಈವಂಟ್ ಮೆನೇಜ್‌ಮೆಂಟ್ ಉಪ್ಪಳದಲ್ಲಿ ಆಯೋಜಿಸುವ ಉಪ್ಪಳ ಗ್ರಾಂಡ್ ಎಕ್ಸ್‌ಪೋವನ್ನು ನಾಳೆ ಸಂಜೆ ಕೈಕಂಬದಲ್ಲಿ ಶಾಸಕ ಎಕೆಎಂ ಅಶ್ರಫ್ ಉದ್ಘಾ ಟಿಸುವರು. ಮಂಗಲ್ಪಾಡಿ ಪಂ. ಅಧ್ಯಕ್ಷೆ ರುಬೀನಾ ನೌಫಲ್ ಅಧ್ಯಕ್ಷತೆ ವಹಿಸುವರು. ಜ. ೮ರ ವರೆಗೆ ಎಕ್ಸ್‌ಪೋ ನಡೆಯಲಿದೆ. ಫ್ಲವರ್ ಶೋ, ಪೆಟ್‌ಶೋ, ಸ್ಟೇಜ್ ಕಾರ್ಯಕ್ರಮಗಳು, ನರ್ಸರಿಗಳು, ವಿವಿಧ ರೀತಿಯ ಸ್ಟಾಲ್‌ಗಳು ಎಕ್ಸ್‌ಪೋದಲ್ಲಿರಲಿದೆ. ಆಕರ್ಷಕ  ರೈಡ್, ಖ್ಯಾತ ಕಲಾವಿದರ ಕಾರ್ಯಕ್ರಮಗಳು ಇರಲಿದೆ. ೧೨ ವರ್ಷದವರೆಗಿನ ಮಕ್ಕಳಿಗೆ ಉಚಿತ ಪ್ರವೇಶವಾಗಿದ್ದು,  ಮಕ್ಕಳಿಗೆ ರೈಡ್‌ನಲ್ಲಿ  ೪೦ ಶೇ. ರಿಯಾಯಿತಿ …

ಕಾಸರಗೋಡಿನ ಕಬಡ್ಡಿ ಹೆಮ್ಮೆ: ಕೊಡಕ್ಕಾಡ್ ಇ. ಭಾಸ್ಕರನ್‌ರಿಗೆ ದ್ರೋಣಾಚಾರ್ಯ ಪ್ರಶಸ್ತಿ

ಹೊಸದುರ್ಗ: ಕಾಸರಗೋಡು ಕಬಡ್ಡಿಗೆ ಹೆಮ್ಮೆ ತಂದ ಕೊಡಕ್ಕಾಡ್ ಭಾಸ್ಕರನ್‌ರಿಗೆ ದ್ರೋಣಾಚಾರ್ಯ ಪ್ರಶಸ್ತಿ ಗೌರವ. ಕೊಡಕ್ಕಾಡಿನ ಮಣ್ಣಿನಿಂದ ಕಬಡ್ಡಿಯ ಪಾಠವನ್ನು ಕಲಿತು ಭಾರತವನ್ನು ವಿಶ್ವದ ಅಗ್ರಸ್ಥಾನಕ್ಕೆ ಕೊಂಡೊಯ್ದ ಕಬಡ್ಡಿ ತರಬೇತುದಾರ ಇ ಭಾಸ್ಕರನ್‌ರಿಗೆ ಸಿಕ್ಕಿರುವ ಈ ಅಂತಾರಾಷ್ಟ್ರೀಯ ಪ್ರಶಸ್ತಿ ಅರ್ಹವಾದ ಮನ್ನಣೆಯಾಗಿದೆ. ಚೈನಾದಲ್ಲಿ ನಡೆದ ಹ್ಯಾಂಗ್ ಚೌ ಏಷ್ಯನ್ ಕ್ರೀಡಾಕೂಟದ ಕಬಡ್ಡಿಯಲ್ಲಿ ಇರಾನ್ ತಂಡವನ್ನು ಸೋಲಿಸಿ ಚಿನ್ನದ ಪದಕ ಗೆದ್ದ ಭಾರತ ತಂಡದ ಕೋಚ್ ಆಗಿದ್ದಾರೆ ಇ ಭಾಸ್ಕರನ್. ಕೊಡಕ್ಕಾಡ್ ವೆಳ್ಳಾಚಲದ ರೆಡ್ ಸ್ಟಾರ್ ತಂಡದಲ್ಲಿ ಆಡುವ ಮೂಲಕ …