ಕಾಟುಕುಕ್ಕೆ-ಖಂಡೇರಿಯಲ್ಲಿ ನೀರಿಲ್ಲ: ಬಿಲ್ ಮಾತ್ರ!

ಪೆರ್ಲ: ಕಾಟುಕುಕ್ಕೆ, ಖಂಡೇರಿ, ಕೊಲ್ಯ ಎಂಬೆಡೆಗಳಲ್ಲಿ ಜಲಜೀವನ್ ಮಿಶನ್ ಯೋಜನೆಯ ಜಲ ವಿತರಣೆ ನಡೆಯುತ್ತಿಲ್ಲವೆಂದು ದೂರಲಾಗಿದೆ. ಇದರಿಂದ ೧೦೦ರಷ್ಟು ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ೨ ವರ್ಷ ಹಿಂದೆ ಸಂಪರ್ಕ ಲಭಿಸಿದ್ದ ಕುಟುಂಬಗಳಿಗೆ ಈಗ ನೀರು ವಿತgಣೆಯಾಗುವುದಿಲ್ಲ. ಆದರೆ  ಉಪಯೋಗಿಸಿದ ನೀರಿಗೆ ೨೦೦೦ ರೂ. ಪಾವತಿಸಲು ಮೊಬೈಲ್‌ಗೆ ಸಂದೇಶ ಲಭಿಸಿದೆ. ಇತರ ಜಲಯೋಜನೆಗಳಿಲ್ಲದ ಎಣ್ಮಕಜೆ ಪಂಚಾಯತ್‌ನ ನಾಲ್ಕನೇ ವಾರ್ಡ್‌ನ ಈ ಪ್ರದೇಶದ ಜನರ ಏಕ ಆಶ್ರಯವಾಗಿದೆ ಈ ಯೋಜನೆ. ಕಾಟುಕುಕ್ಕೆಯ ಹೈಯರ್ ಸೆಕೆಂಡರಿ ಶಾಲೆಯವರೆಗೆ ನೀರು ಲಭಿಸುತ್ತಿದೆ. ಇಲ್ಲಿಂದ ಖಂಡೇರಿಗೆ …

ಸಚಿವ ಸಂಪುಟ ಪುನಾರಚನೆ ತೀರ್ಮಾನ ೨೪ರಂದು: ಗಣೇಶ್ ಕುಮಾರ್, ಕಡನ್ನಪಳ್ಳಿ ಸಚಿವ ಸಂಪುಟಕ್ಕೆ

ತಿರುವನಂತಪುರ: ಎಡರಂಗದ ರಾಜ್ಯ ಸಮಿತಿ ಸಭೆ ಈತಿಂಗಳ ೨೪ರಂದು ಕರೆಯಲು ತೀರ್ಮಾನಿಸಲಾಗಿದ್ದು, ಅದರಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚಿಸುವ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಇದರಂತೆ ಜನಾಧಿಪತ್ಯ ಕೇರಳ ಕಾಂಗ್ರೆಸ್‌ನ ಆಂಟನಿರಾಜು ಮತ್ತು ಐಎನ್‌ಎಲ್‌ನ ಅಹಮ್ಮದ್ ದೇವರ್‌ಕೋವಿಲ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ,   ಅವರ ಪರ‍್ಯಾಯವಾಗಿ ಕೇರಳ ಕಾಂಗ್ರೆಸ್ (ಬಿ) ಶಾಸಕ ಕೆ.ಬಿ. ಗಣೇಶ್ ಕುಮಾರ್ ಮತ್ತು ಕಾಂಗ್ರೆಸ್ (ಎಸ್) ಶಾಸಕ ಕಡನ್ನಪಳ್ಳಿ ರಾಮಚಂದ್ರನ್ ಅವರು ಹೊಸ ಸಚಿವರಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.  ಸಚಿವ ಆಂಟನಿ ರಾಜು …

ಡಾ| ಜನಾರ್ದನ ನಾಯ್ಕ್ ರಿಗೆ ಗೌರವ

ಕಾಸರಗೋಡು: ಇಂಡಿಯನ್ ಅಸೋಸಿಯೇಶನ್ ಆಫ್ ಫಿಸೀಶ್ಯನ್‌ನ ಡಾ| ಎನ್.ಎನ್. ಅಶೋಕನ್ ಸ್ಮಾರಕ ಆಪರೇಶನ್ ಪ್ರಶಸ್ತಿ ಗಳಿಸಿದ ಡಾ|ಜನಾರ್ದನ ನಾಯ್ಕ್ ಸಿ.ಎಚ್ ರನ್ನು ಕಾಸರಗೋಡು ಜನರಲ್ ಆಸತ್ರೆಯ ಕನ್ನಡ ಒಕ್ಕೂಟ ಗೌರವಿಸಿದೆ. ಡೆಪ್ಯುಟಿ ಸುಪರಿನ್ ಟೆಂಡೆಂಟ್ ಡಾ| ಜಮಾಲ್ ಮುಖ್ಯ ಅತಿಥಿಯಾಗಿದ್ದರು. ಡಾ| ನಾರಾಯಣ ಪ್ರದೀಪ್ ಅಧ್ಯಕ್ಷತೆ ವಹಿಸಿದರು. ಕೆಜಿಎಂಒಎ ಮಾಜಿ ಅಧ್ಯಕ್ಷ ಡಾ| ಬಿ. ನಾರಾಯಣ ನಾಯ್ಕ್, ಸ್ಟಾಫ್ ಕೌನ್ಸಿಲ್ ಅಧ್ಯಕ್ಷ ಡಾ| ಸುನಿಲ್ ಚಂದ್ರನ್, ನರ್ಸಿಂಗ್ ಸುಪರಿನ್‌ಟೆಂಡೆಂಟ್ ಮಿನಿ ಮ್ಯಾಥ್ಯೂ, ವಿಜೇಶ್, ಬಾಲಸುಬ್ರಹ್ಮಣ್ಯ, ಡಾ|ವಸಂತಿ, ಡಾ| …

ಮರದ ರೆಂಬೆಯಲ್ಲಿ ಗಂಡಸಿನ  ಜೀರ್ಣಿಸಿದ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮರದ  ರೆಂಬೆಯಲ್ಲಿ  ಗಂಡಸೋರ್ವರ ಜೀರ್ಣಿಸಿದ ಮೃತದೇಹ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ನಿನ್ನೆ  ಸಂಜೆ ಪತ್ತೆಯಾಗಿದೆ. ಪೊಯಿನಾಚಿಗೆ ಸಮೀಪದ ಕರಿಚ್ಚೇರಿ ರಾಮಂಚಿರದ ಹಳೆಯ ಕೆಂಪುಕಲ್ಲು ಕೋರೆ ಬಳಿಯ ಮಾವಿನ ರೆಂಬೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹ ತೀವ್ರ ಜೀರ್ಣಿಸಿದ ಸ್ಥಿತಿಯಲ್ಲಿತ್ತು. ಇದರಿಂದಾಗಿ ವಾರದ ಹಿಂದೆ ಈ ವ್ಯಕ್ತಿ ಸಾವನ್ನಪ್ಪಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಗೆ ಸುಮಾರು ೫೦ ವರ್ಷ ಪ್ರಾಯ ಅಂದಾಜಿಸಲಾಗಿದೆ. ಅವರು  ಧೋತಿ ಮತ್ತು ನೀಲಿ ಅಂಗಿ ಧರಿಸಿದ್ದರು. ನೀಳ ಕೇಶವನ್ನು ಹೊಂದಿದ …

ಎಸ್.ಕೆ.ಎಸ್.ಎಸ್.ಎಫ್ ಬಾಕ್ರಬೈಲ್ ಶಾಖಾ ರಜತ ವಾರ್ಷಿಕ ಸಮಾರೋಪ ನಾಳೆ

ಹೊಸಂಗಡಿ: ಎಸ್‌ಕೆಎಸ್ ಎಸ್‌ಎಫ್ ಬಾಕ್ರಬೈಲ್ ಶಾಖೆಯ ರಜತ ವಾರ್ಷಿಕದ ಸಮಾರೋಪ ನಾಳೆ ಸಂಜೆ ೪.೩೦ಕ್ಕೆ ಬಾಕ್ರಬೈಲ್ ಶಾಲಾ ಮೈದಾನದಲ್ಲಿ ನಡೆಯಲಿದೆ. ಇದಕ್ಕೆ ಸಿದ್ಧತೆ ಪೂರ್ಣಗೊಂಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸಮಾರೋಪ ಸಮಾರಂಭವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ ಉದ್ಘಾಟಿಸುವರು. ಪಾತೂರು ಸಂಯುಕ್ತ ಜಮಾಯತ್ ಖಾದಿ ಅಹಮ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಮುಹಮ್ಮದ್ ಫೈಸಿ ಕಜೆ ಪ್ರಸ್ತಾಪಿಸುವರು. ಸತ್ತಾರ್ ಪಂದಲ್ಲೂರ್, ನೌಷಾದ್ ಬಾಖವಿ ಭಾಗವಹಿಸುವರು. ಇದೇ ಕಾರ್ಯಕ್ರಮದಲ್ಲಿ ಸ್ಥಾಪಕ ಮುಖಂಡರನ್ನು …

ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕಾಸರಗೋಡು: ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಜೋಸೆಫ್ ಜೆ. ಅವರ ನೇತೃತ್ವದಲ್ಲಿ ಚೇನಕ್ಕೋಡಿನಲ್ಲಿ ನಿನ್ನೆ ನಡೆಸಲಾದ ಅಬಕಾರಿ ಕಾರ್ಯಾಚರಣೆಯಲ್ಲಿ ೧೮೦ ಎಂ.ಎಲ್‌ನ ೧೫ ಪ್ಯಾಕೆಟ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ  ಸಂಬಂಧಿಸಿ ಮಧೂರು ಹಿದಾಯತ್ ನಗರ ಮಾಳಿಂಗ ನಿವಾಸಿ ವಿಶ್ವನಾಥ (೩೪) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಇತರ ಅಬಕಾರಿ ಸಿಬ್ಬಂದಿಗಳು ರಾಜೀವನ್, ಮುರಳಿ, ಸುಮೋದ್, ಧನ್ಯ ಮತ್ತು ಫಸೀಲಾ ಎಂಬವರು ಒಳಗೊಂಡಿದ್ದರು.

ಮಾವಿನಕಟ್ಟೆ ಅಲ್‌ಬಿರ್ ಶಾಲೆಯಲ್ಲಿ ಸ್ಪೋರ್ಟ್ಸ್ ಮೀಟ್

ನೆಲ್ಲಿಕಟ್ಟೆ: ಶಂಸು ಉಲಮ ಇಸ್ಲಾಮಿಕ್ ಅಕಾಡೆಮಿಯ ಅಧೀನದಲ್ಲಿ ಎದ್ರ್‌ತ್ತೋಡು ಚೆರ್ಕಳ- ಬೇರ್ಕ, ಬದಿಯಡ್ಕ- ಮಾವಿನಕಟ್ಟೆ ಎಂಬೆಡೆಗಳಲ್ಲಿ ಕಾರ್ಯಾಚರಿಸುವ ಅಲ್‌ಬಿರ್ ಶಾಲೆಯ ಹಾಗೂ ಚೆರ್ಕಳ ಬಾಲಡ್ಕದಲ್ಲಿ ಕಾರ್ಯಾಚರಿಸುವ ಬಿಸ್ಮಿ ಇಸ್ಲಾಮಿಕ್ ಶಾಲೆಯ ಫಾಸ್ಟ್‌ರನ್-೨೩ ಸ್ಪೋರ್ಟ್ಸ್ ಮೀಟ್ ಮಾವಿನಕಟ್ಟೆ ಪುಳಿಂಡಡಿ ವೈಎಂಕೆ ಸ್ಮಾರಕ ಅಲ್‌ಬೀರ್ ಶಾಲೆಯಲ್ಲಿ  ಜರಗಿತು.  ಸ್ಪೋರ್ಟ್ಸ್ ಮೀಟ್ ಮಾವಿನಕಟ್ಟೆ ವೈಎಂಕೆ ಮೈದಾನದಲ್ಲಿ ಜರಗಿತು. ಬೆಳಿಗ್ಗೆ ೧೦ ಗಂಟೆಗೆ ಬದಿಯಡ್ಕ ಎಸ್‌ಐ ಎನ್. ಅನ್ಸಾರ್ ಉದ್ಘಾಟಿಸಿದರು. ಇ. ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಿದರು. ಪಂ. ಸದಸ್ಯ ಲತೀಫ್ ನಾರಂಪಾಡಿ, …

ಪಂಚಾಯತ್ ಸದಸ್ಯತ್ವ: ಲೀಗ್‌ನ ಬೇಡಿಕೆ ಚುನಾವಣಾ ಆಯೋಗ ಅಂಗೀಕಾರ; ಎಸ್‌ಡಿಪಿಐ ಅರ್ಜಿ ತಿರಸ್ಕೃತ

ಕಾಸರಗೋಡು: ಪಂಚಾಯತ್ ಸದಸ್ಯತ್ವವನ್ನು ಮರು ಸ್ಥಾಪಿಸಬೇಕೆಂದು ಆಗ್ರಹಪಟ್ಟು ಮುಸ್ಲಿಂ ಲೀಗ್ ನೀಡಿದ ಅರ್ಜಿಯನ್ನು ರಾಜ್ಯ ಚುನಾವಣಾ ಆಯೋಗ ಅಂಗೀಕರಿಸಿದೆ. ಅದೇ ರೀತಿ ಎಸ್‌ಡಿಪಿಐ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ. ಪೈವಳಿಕೆ ಪಂಚಾಯತ್‌ನ ಎರಡನೇ ವಾರ್ಡ್ ಸದಸ್ಯೆ ಮುಸ್ಲಿಂ ಲೀಗ್‌ನ ಸಿಯಾಸುನ್ನೀಸರ ರಾಜೀನಾಮೆಯನ್ನು ಅಸಿಂಧುಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಹಿಂದಿನಂತೆ ಸದಸ್ಯೆಯಾಗಿ ಮುಂದುವರಿಯಲು ಆಯೋಗ ಅನುಮತಿ ನೀಡಿದೆ. ಸೆಪ್ಟಂಬರ್ ೧೮ರಂದು ಸಿಯಾಸುನ್ನೀಸ ಗಜೆಟೆಡ್ ಆಫೀಸರ್ ದೃಢೀಕರಿಸಿದ ರಾಜೀನಾಮೆ ಪತ್ರವನ್ನು ಅಂಚೆ ಮೂಲಕ ಕಾರ್ಯದರ್ಶಿಗೆ ಕಳುಹಿಸಿದ್ದರು. ಬಳಿಕ ೨೦ರಂದು …

ಟ್ರಾವಲ್ಸ್ ನೌಕರ ಪುಟ್ಬಾಲ್ ಆಟದ ಮಧ್ಯೆ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ಟರ್ಫ್‌ನಲ್ಲಿ ಫುಟ್ಭಾಲ್ ಆಟವಾಡುತ್ತಿದ್ದಾಗ ಟ್ರಾವೆಲ್ ಏಜೆನ್ಸಿಯ ನೌಕರ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಅಣಂಗೂರು ಬೆದಿರದ ಎನ್.ಎ. ಮುಹಮ್ಮದ್ ಹಾಜಿ-ದಿ|  ಸುಹರಾಬಿ ದಂಪತಿಯ ಪುತ್ರನಾದ ಎನ್.ಎಂ.  ಹಾರಿಸ್ (೪೬) ಮೃತ ಪಟ್ಟ ವ್ಯಕ್ತಿ. ನಿನ್ನೆರಾತ್ರಿ ಉಳಿಯತ್ತ ಡ್ಕದಲ್ಲಿ ಘಟನೆ ನಡೆದಿದೆ. ಆಟದ ಮಧ್ಯೆ ವಿಶ್ರಾಂತಿ ಸಮಯದಲ್ಲಿ ಇವರು ಕುಸಿದು   ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈ ಹಿಂದೆ ಮೌಲವಿ ಟ್ರಾವೆಲ್ಸ್‌ನಲ್ಲಿ ನೌಕರನಾಗಿದ್ದರು. ಬಳಿಕ ಗಲ್ಫ್‌ಗೆ ತೆರಳಿದ್ದರು. ಊರಿಗೆ ಮರಳಿ ಬಂದ ಬಳಿಕ ಅಕ್ಬರ್ …

೩೫೦೦ ರೂ. ಮೌಲ್ಯದ ಮೋಟಾರ್ ಪಂಪ್ ಪಂ.ಗೆ ತಿಳಿಯದೆ ಸದಸ್ಯನಿಂದ ದುರಸ್ತಿ: ೧೮೦೦೦ ರೂ. ಬಿಲ್; ಬದಿಯಡ್ಕದಲ್ಲಿ ಮತ್ತೆ ವಿವಾದ

ಬದಿಯಡ್ಕ: ಹಳೆಯ ಮೋಟಾರು ಪಂಪ್ ದುರಸ್ತಿಗೊಳಿಸಲು ಹೊಸ ಪಂಪ್‌ನ ಬೆಲೆಯ ಇಮ್ಮಡಿಗೂ ಅಧಿಕವಾಗಿರುವುದು ಬದಿಯಡ್ಕದಲ್ಲಿ ವಿವಾದಕ್ಕೆ ಹೇತುವಾಗಿದೆ. ಪಂಚಾಯತ್‌ಗೆ ತಿಳಿಯದೆ ಅನುಮತಿ ರಹಿತವಾಗಿ ಪಂಪ್ ದುರಸ್ತಿ ನಡೆಸಿದ ಎಸ್ಟಿಮೇಟ್ ಬಿಲ್ ಸಹಿತ ಪಂಚಾಯತ್‌ಗೆ ಸಮೀಪಿಸಿದ ಸದಸ್ಯನಿಗೆ ಅಧಿಕಾರಿಗಳು ಮನವರಿಕೆ ಮಾಡಲು ಯತ್ನಿಸಿದರು. ಸರಕಾರದ ಹಣವನ್ನು ವೆಚ್ಚ ಮಾಡಲು ಕೆಲವು ವ್ಯವಸ್ಥೆ, ಕ್ರಮಗಳಿವೆ ಎಂದೂ ಹಲವು ಬಾರಿ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿರುವ ಓರ್ವ ವ್ಯಕ್ತಿ ಅದನ್ನೆಲ್ಲಾ ಅವಗಣಿಸುವುದು ಸರಿಯಲ್ಲವೆಂದೂ ಅಧಿಕೃತರು ಸದಸ್ಯನಿಗೆ ನೆನಪಿಸಿದರು. ಈ ವೇಳೆ ತನ್ನಲ್ಲಿ ಆಟ …