ಪ್ರಕೃತಿ ವಿಕೋಪ: ಜಿಲ್ಲೆಯಲ್ಲಿ 250.3 ಲಕ್ಷ ರೂ.ಗಳ ಕೃಷಿ ನಾಶ

ಕಾಸರಗೋಡು: ಜೂನ್ 1ರಿಂದ 17ರವರೆಗೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ 250.32 ಲಕ್ಷ ರೂ.ಗಳ ನಾಶನಷ್ಟ ಉಂಟಾಗಿರುವು ದಾಗಿ ಲೆಕ್ಕ ಹಾಕಲಾಗಿದೆ. ಇದರಲ್ಲಿ ಅರ್ಧದಷ್ಟು ಬಾಳೆ ಕೃಷಿಗೆ ಉಂಟಾದ ಹಾನಿಯಾಗಿದೆ. 5466 ಬಾಳೆ ಕೃಷಿಕರ 8.55 ಹೆಕ್ಟರ್ ಸ್ಥಳದಲ್ಲಿ 21,363 ಬಾಳೆಗಳಿಂದ 128.18 ಲಕ್ಷ ರೂ. ನಷ್ಟ, 136 ಕೃಷಿಕರ 1.40 ಹೆಕ್ಟರ್ ಸ್ಥಳದಲ್ಲಿ ಫಲ ನೀಡದ 3511 ತೆಂಗುಗಳಿAದಾಗಿ 14.04 ಲಕ್ಷ ರೂ. ನಷ್ಟ ಸೇರಿ 142.24 ಲಕ್ಷ ರೂ.ಗಳ ನಷ್ಟ ಉಂಟಾಗಿದೆ. 527 ತೆಂಗಿನಕಾಯಿ …

ಯುವತಿ ನೇಣು ಬಿಗಿದು ಆತ್ಮಹತ್ಯೆ

ಕಲ್ಲಿಕೋಟೆ: ಹೋಟೆಲ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿನಿಯಾದ 19ರ ಹರೆಯದ ಯುವತಿ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾ ಗಿದೆ. ಕಲ್ಲಿಕೋಟೆ ಪಯ್ಯೋಳಿ ಬೀಚ್ ಕುರುಂಬಾ ಭಗವತಿ ಕ್ಷೇತ್ರ ಸಮೀಪದ ಮನೋಜ್‌ರ ಪುತ್ರಿ ಮಂಜಿಮ (19) ಮೃತಪಟ್ಟ ಯುವತಿ. ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಕೆಲಸಕ್ಕೆ ತೆರಳಿದ್ದ ಮನೋಜ್ ಮಧ್ಯಾಹ್ನ 11.30ರ ವೇಳೆ ಮನೆಗೆ ಹಿಂತಿರುಗಿದಾಗ ಮಂಜಿಮಳನ್ನು ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾರೆ. 3 ತಿಂಗಳ ಹೊಟೇಲ್ ಮೆನೇಜ್‌ಮೆಂಟ್ ಕೋರ್ಸ್ ಗೆ ಸೇರಿ ಕಣ್ಣೂರಿನಲ್ಲಿ ಈಕೆ ಕಲಿಯುತ್ತಿ …

ಮಳ್‌ಹರ್ ರಜತ ಜ್ಯುಬಿಲಿ ಸ್ನೇಹ ಸಂದೇಶದೊಂದಿಗ ಮಾನವ ಸಂಗಮ

ಮಂಜೇಶ್ವರ: ಮಂಜೇಶ್ವರ ಮಳ್‌ಹರ್ ನೂರಿಲ್ ಇಸ್ಲಾಮಿತ ಅಲಿಮಿಯದ ರಜತ ವಾರ್ಷಿಕ ಆಚರಣೆ, ಮುಹಮ್ಮದ್ ಉಮರುಲ್ ಫಾರೂಕ್ ಅಲ್ ಬುಖಾರಿಯವರ ಉರೂಸ್‌ನ ಅಂಗವಾಗಿ ಎರಡನೇ ದಿನ ಮಾನವ ಸಂಗಮ ಜರಗಿತು. ಮಳ್‌ಹರ್ ಉಪಾಧ್ಯಕ್ಷ ಅಬ್ದುಲ್ ರಹ್‌ಮಾನ್ ಶಹೀರ್ ಅಲ್ ಬುಖಾರಿ ಅಧ್ಯಕ್ಷತೆ ವಹಿಸಿದ್ದು,  ಫಾದರ್ ಎಡ್ವಿನ್ ಫ್ರಾನ್ಸಿಸ್ ಪಿಂಟೋ ಉದ್ಘಾಟಿಸಿದರು. ಮಳ್‌ಹರ್ ಪ್ರಧಾನ ಕಾರ್ಯದರ್ಶಿ ಅಹಮ್ಮದ್ ಜಲಾಲುದ್ದೀನ್ ಅಲ್ ಬುಖಾರಿ ಪ್ರವಚನ ನೀಡಿದರು. ಮುಸ್ತಫ ನೈಮಿ ಹಾವೇರಿ ಠರಾವು ಮಂಡಿಸಿದರು. ಮಂಜೇಶ್ವರ ಸ್ನೇಹಾಲಯದ ಅಧ್ಯಕ್ಷ ಜೋಸೆಫ್, ಸಿಪಿಎಂನ ಜಯಾನಂದ, …

ನಿಲಂಬೂರು: ನಾಳೆ ಮತಗಟ್ಟೆಗೆ

ನಿಲಂಬೂರು: ನಿಲಂಬೂರು ವಿಧಾನಸಭಾ ಕ್ಷೇತ್ರಕ್ಕೆ ನಾಳೆ ಉಪಚುನಾವಣೆ ನಡೆಯಲಿದೆ.  ಮೂರು ವಾರಗಳ ಅಬ್ಬರದ ಬಹಿ ರಂಗ ಪ್ರಚಾರ ನಿನ್ನೆ ಕೊನೆಗೊಂಡಿದೆ.   ಮುಂದಿನ ಸೋಮವಾರ ಮತ ಎಣಿಕೆ ನಡೆಯಲಿದೆ. ಉಪಚುನಾವಣೆಯ ಫಲಿತಾಂಶ ಆಡಳಿತ ಒಕ್ಕೂಟವಾದ ಎಡರಂಗ, ವಿಪಕ್ಷವಾದ ಯುಡಿ ಎಫ್‌ಗೆ ಅತೀ ನಿರ್ಣಾಯಕವಾಗಿದೆ. ಮಾತ್ರವಲ್ಲ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಪಿ.ವಿ. ಅನ್ವರ್‌ರ ರಾಜಕೀಯ ಭವಿಷ್ಯವನ್ನು ಈ ಫಲಿತಾಂಶ ನಿರ್ಣಯಿಸಲಿದೆ.

ನಾಟ್ಯರತ್ನ ವಿ.ಪಿ. ಕಣ್ಣನ್ ಪಾಟಾಳಿಯವರ ಪುತ್ರಿ ದೇವಿ ಅಮ್ಮ ನಿಧನ

ಕಾಸರಗೋಡು: ಖ್ಯಾತ ಕಥಕ್ಕಳಿ ಕಲಾವಿದರಾಗಿದ್ದ ನಾಟ್ಯರತ್ನಂ ವಿ.ಪಿ. ಕಣ್ಣನ್ ಪಾಟಾಳಿ-ಕಾರ್ತ್ಯಾಯಿನಿ ದಂಪತಿಯ ಪುತ್ರಿ ದೇವಿ ಅಮ್ಮ (70) ನಿಧನಹೊಂದಿದರು. ಕುಂಡಂಗುಳಿಯ ದಿ| ಅಂಬಾಡಿಯವರ ಪತ್ನಿಯಾದ ಮೃತರು ಮಕ್ಕಳಾದ ಸಿಂಧು, ಡಾ| ಮಾಧುರಿ, ಅಳಿಯಂದಿರಾದ ನಾರಾಯಣನ್ ಕುಟ್ಟಿ, ಡಾ| ಸುಭಾಶ್ಚಂದ್ರನ್, ಸಹೋದರ-ಸಹೋದರಿಯರಾದ ಡಾ. ವಿ.ಬಾಲಕೃಷ್ಣನ್ (ಕೇರಳ ರಾಜ್ಯ ಜೈವ ವೈವಿಧ್ಯ ಬೋರ್ಡ್ ಮೆಂಬರ್ ಸೆಕ್ರೆಟರಿ), ರಾಮಚಂದ್ರನ್, ಲಕ್ಷ್ಮಿ, ಸರಸ್ವತಿ, ರಾಮಕೃಷ್ಣನ್, ಕಾರ್ತ್ಯಾಯಿನಿ ಹಾಗೂ  ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಶಮನಗೊಳ್ಳದ ಜಡಿಮಳೆ: ಮುಂದುವರಿದ ಪ್ರಾಕೃತಿಕ ದುರಂತ ಕಾಸರಗೋಡಿನಲ್ಲಿ ಇಬ್ಬರು ಮಕ್ಕಳು, ಓರ್ವೆ ಮಹಿಳೆ ಸೇರಿ ಮೂವರು ಸಾವು

ಕಾಸರಗೋಡು: ರಾಜ್ಯದಾದ್ಯಂ ತವಾಗಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಜಡಿಮಳೆ ಇನ್ನೊಂದೆಡೆ ಭಾರೀ ಪ್ರಾಕೃತಿಕ ದುರಂತಗಳಿಗೂ ಕಾರಣವಾಗಿದೆ. ಪ್ರಾಕೃತಿಕ ದುರಂತದಿಂದ ಕಾಸರಗೋಡು  ಜಿಲ್ಲೆಯಲ್ಲಿ ನಿನ್ನೆ ಮಾತ್ರ ಇಬ್ಬರು ಮಕ್ಕಳು ಮತ್ತು ಓರ್ವೆ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕಿ ಕೆಂಪುಕಲ್ಲಿನ ಹೊಂಡದಲ್ಲಿ  ತುಂಬಿದ್ದ ನೀರಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಬಾಡೂರು ಬಳಿ ಸಂಭವಿಸಿದೆ. ಬಾಡೂರು ಬಳಿ ಓಣಿಬಾಗಿಲು ಎಂಬಲ್ಲಿ ಮುಹಮ್ಮದ್-ಖದೀಜತ್ ಕುಬ್ರಾ ದಂಪತಿಯ ಪುತ್ರಿ ಬಾಡೂರುಪದವು ಎಎಲ್‌ಪಿ ಶಾಲೆಯ ಮೂರನೇ …

ರೆಡ್ ಅಲರ್ಟ್ ಮುಂದುವರಿಕೆ: ಜಿಲ್ಲೆಯಲ್ಲಿ ಪ್ರವಾಹಭೀತಿ; ಬೇವಿಂಜೆ ರಾಷ್ಟ್ರೀಯ ಹೆದ್ದಾರಿ ಬಳಿ ಸಹಿತ ಹಲವೆಡೆ ಭೂಕುಸಿತ, ವ್ಯಾಪಕ ನಾಶನಷ್ಟ: 15 ಕುಟುಂಬ ಸ್ಥಳಾಂತರ

ಕಾಸರಗೋಡು: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಜಿಲ್ಲೆಯ ಹಲವೆಡೆಗಳಲ್ಲಿ ಪ್ರವಾಹದ ಭೀತಿ ಸೃಷ್ಟಿಸಿದೆ. ಮಧೂರು ಪಂಚಾಯತ್‌ನ ಪಟ್ಲ, ಶಿರಿಬಾಗಿಲು ಮತ್ತು ಮಾಯಿಪ್ಪಾಡಿ ಮತ್ತಿತರ ಪ್ರದೇಶಗಳೆಲ್ಲಾ ಮಳೆನೀರಿನಿಂದ ಆವೃತವಾಗಿದೆ. ನೀರು ಮನೆಗಳಿಗೂ ಪ್ರವೇಶಿಸಿ ಪ್ರವಾಹದ ಭೀತಿ ಸೃಷ್ಟಿಸಿದೆ. ಪಟ್ಲದ ೧೫ ಕುಟುಂಬಗಳನ್ನು ಕಾಸರಗೋಡು ಅಗ್ನಿಶಾಮಕದಳ ನಿರಂತರವಾಗಿ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಆ ಪ್ರದೇಶದಿಂದ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿರಿಸಿದ್ದಾರೆ. ಅವರು ಸಂಬಂಧಿಕರ ಮನೆಯಲ್ಲಿ ಈಗ ಕಳೆಯುತ್ತಿದ್ದಾರೆ. ಶಿರಿಬಾಗಿಲಿನ ಬಹುತೇಕ ಪ್ರದೇಶಗಳಲ್ಲಿ ಮಳೆ ನೀರು ಆವರಿಸಿದೆ. ಇದರಿಂದಾಗಿ ಅಲ್ಲಿನ ಅಬ್ದುಲ್ಲ ಎಂಬವರ …

ಮುಗು ಬ್ಯಾಂಕ್ ಆವರಣಗೋಡೆ ಕುಸಿತ; ಕಟ್ಟಡ ಭೀತಿಯಲ್ಲಿ

ನೀರ್ಚಾಲು: ಮುಂಡಿತ್ತಡ್ಕ ಸಮೀಪದಲ್ಲಿ ಕಾರ್ಯಾಚರಿಸು ತ್ತಿರುವ ಮುಗು ಸೇವಾ ಸಹಕಾರ ಬ್ಯಾಂಕ್‌ನ ಕೇಂದ್ರ ಕಚೇರಿಯ ಆವರಣಗೋಡೆ ನಿನ್ನೆ ಸುರಿದ ಧಾರಾಕಾರ ಮಳೆಗೆ ಕುಸಿದಿದೆ. ಇದರಿಂದ ಬ್ಯಾಂಕ್ ಕಟ್ಟಡ ಆತಂಕ ಸೃಷ್ಟಿಯಾಗಿದೆ.   ಆವರಣಗೋಡೆ ಕುಸಿದು ಕಲ್ಲು ಮಣ್ಣು ರಸ್ತೆಗೆ ಬಿದ್ದಿತ್ತು. ಇದರಿಂದ ಅಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಎದುರಾಯಿತು.  ಅವುಗಳನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರ ಯೋಗ್ಯ ಗೊಳಿಸಲಾಗಿದೆ.

ಕೆಎಸ್‌ಟಿಪಿ ರಸ್ತೆ ಬದಿ ಕಾಂಕ್ರೀಟ್ ಕುಸಿತ

ಬದಿಯಡ್ಕ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಬದಿಯಡ್ಕ ಸಮೀಪ  ಪೆರಡಾಲದಲ್ಲಿ ರಸ್ತೆ ಬದಿ ಕಟ್ಟಲಾಗಿದ್ದ ಎಸ್ಟೇಟ್  ಗೋಡೆ ಕುಸಿದು ಬಿದ್ದಿದೆ. ರಸ್ತೆ ಅಭಿವೃದ್ಧಿಗೊಳಿಸುವ ಅಂಗವಾಗಿ ಒಂದು ವರ್ಷ ಹಿಂದೆಯಷ್ಟೇ ಈ ಗೋಡೆ ಕಟ್ಟಲಾಗಿತ್ತು. ರಸ್ತೆಯ ಕೆಳಭಾಗ ಹೊಂಡವಾಗಿದ್ದು, ಇದರಿಂದ ರಸ್ತೆಗೆ ಅಪಾಯವುಂ ಟಾಗುವುದನ್ನು ತಪ್ಪಿಸಲು ಗೋಡೆ ನಿರ್ಮಿಸಲಾಗಿತ್ತು. ಇದೀಗ ಅದು ಕುಸಿದುಬಿದ್ದಿದೆ.

ಸಂಚರಿಸುತ್ತಿದ್ದ ಕಾರಿನ ಮೇಲೆ ಗುಡ್ಡೆ ಕುಸಿತ: ಚಾಲಕ ಅದೃಷ್ಟವಶಾತ್ ಅಪಾಯದಿಂದ ಪಾರು ; ಸಿಪಿಎಂ ಕಚೇರಿಗೂ ಹಾನಿ

ಕುಂಬಳೆ: ಸಂಚರಿಸುತ್ತಿದ್ದ ಕಾರಿನ ಮೇಲೆ ಮಣ್ಣು ಹಾಗೂ ಮರ ಬಿದ್ದು ಚಾಲಕ ಅದೃಷ್ಟವಶಾತ್ ಪಾರಾದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆ ಬಾಡೂರು ಧರ್ಮತ್ತಡ್ಕ ತಲಮೊಗರು ಎಂಬಲ್ಲಿ ಘಟನೆ ನಡೆದಿದೆ.  ತಲಮೊಗರು ನಿವಾಸಿ ಹಾರಿಸ್ ಕಾರಿನಲ್ಲಿ ಮನೆಯಿಂದ ಬರುತ್ತಿದ್ದಾಗ ತಲಮೊಗರುವಿನಲ್ಲಿರುವ ಗುಡ್ಡೆ ಕುಸಿದು ರಸ್ತೆಗೆ ಬಿದ್ದಿದೆ. ಈವೇಳೆ ಮಣ್ಣು, ಮರಗಳು ಕಾರಿನ ಮೇಲೆ ಬಿದ್ದಿದ್ದು, ಕೂಡಲೇ  ಕಾರಿನಿಂದಿಳಿದು ಓಡಿದುದರಿಂದ ಹಾರಿಸ್ ಅಪಾಯದಿಂದ ಪಾರಾಗಿದ್ದಾರೆ.  ಮಣ್ಣು ಅಗೆಯುವ ಯಂತ್ರ ಬಳಸಿ ಮಣ್ಣು ಹಾಗೂ ಮರಗಳನ್ನು  ತೆರವುಗೊಳಿಸಿ …