ಕುಂಬಳೆಯಲ್ಲಿ ತ್ಯಾಜ್ಯಕ್ಕೆ ಸಾಕ್ಷಿಯಾಗಿ ಏಳು ಸರಕಾರಿ ಕಚೇರಿಗಳು

ಕುಂಬಳೆ: ಕುಂಬಳೆಯಲ್ಲಿ ತ್ಯಾಜ್ಯವನ್ನು ಹಾಕಲು ಏಳು ಸರಕಾರಿ ಕಚೇರಿಗಳು, ಒಂದು ಮಸೀದಿ, ನೂರಾರು ಮನೆಗಳಿಗೂ ಪೊಲೀಸ್ ಠಾಣೆಗೂ ಸಮೀಪದ ಸ್ಥಳವನ್ನು ಆಯ್ದುಕೊಳ್ಳಲಾಗಿದೆ. ಗೋಣಿಚೀಲಗಳಲ್ಲಿ ತುಂಬಿಸಿ, ಅಲ್ಲದೆಯೂ ರಾಶಿ ಬಿದ್ದಿರುವ ಆಹಾರ ಅವಶಿಷ್ಟಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಕಸಾಯಿಖಾನೆ ತ್ಯಾಜ್ಯಗಳು ಅಸಹನೀಯ ದುರ್ವಾಸನೆ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದು, ಆದರೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ಬಳಿಯ ಶೇಡಿಕಾವು ರಸ್ತೆ ಬದಿಯ ಪೊದೆ ಗಳ ಮಧ್ಯೆ ತ್ಯಾಜ್ಯ ರಾಶಿ ಹಾಕಲಾಗಿದೆ. ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿರುವುದರಿಂದಾಗಿ ಅದುವರೆಗೆ …

ಆಯರ್‌ಕಾಡ್ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ ನಾಳೆಯಿಂದ

ಮುಳ್ಳೇರಿಯ: ಕಾರಡ್ಕ ಸಮೀಪದ ಆಯರ್‌ಕಾಡ್ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ ನಾಳೆಯಿಂದ ಈ ತಿಂಗಳ ೫ರವರೆಗೆ ವಿವಿಧ ಕಾರ್ಯಕ್ರಮಗಳೊಂ ದಿಗೆ ನಡೆಯಲಿದೆ. ನಾಳೆ ಮುಂಜಾನೆ ೪ಕ್ಕೆ ದೀಪ ಪ್ರಜ್ವಲನೆ, ಮಹಾಗಣಪತಿ ಹೋಮ, ಬಳಿಕ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ. ೧೦ ಗಂಟೆಗೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು  ಹಾಗೂ ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಇವರಿಗೆ ಪೂರ್ಣಕುಂಭ ಸ್ವಾಗತ, ೧೧ ಗಂಟೆಗೆ ಭಜನೆ, ಮಹಾಪೂಜೆ, …

ಕೆ.ಟಿ. ಜಯಕೃಷ್ಣನ್ ಮಾಸ್ತರ್ ಸಂಸ್ಮರಣೆ

ಕಾಸರಗೋಡು: ಯುವ ಮೋರ್ಛಾ ರಾಜ್ಯ ಉಪಾಧ್ಯಕ್ಷರಾ ಗಿದ್ದಾಗ ಕೊಲೆಗೀಡಾದ ಕೆ.ಟಿ. ಜಯಕೃಷ್ಣನ್ ಮಾಸ್ತರ್‌ರ ಸಂಸ್ಮರಣೆ ನಿನ್ನೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜರಗಿತು. ಬಿಜೆಪಿ ಜಿಲ್ಲಾ ಕೇಂದ್ರವಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ನಡೆಯಿತು. ಬಳಿಕ ಜನರಲ್ ಆಸ್ಪತ್ರೆಯಲ್ಲಿ ಯುವ ರ್ಛಾದಿಂದ ಆಹಾರ ವಿತರಣೆ ನಡೆಯಿತು.

ವಿಶ್ವಏಡ್ಸ್ ವಿರುದ್ಧ ದಿನಾಚರಣೆ ಜಾಥಾ

ಮಂಜೇಶ್ವರ: ವಿಶ್ವ ಏಡ್ಸ್ ವಿರುದ್ಧ ದಿನಾಚರಣೆ ಅಂಗವಾಗಿ ಎಚ್‌ಐವಿ ಅಣುಬಾಧೆ ತಡೆಯಲು, ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಂಜೇಶ್ವರ ಬ್ಲೋಕ್ ಕುಟುಂಬ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ತಿಳುವಳಿಕೆ ಜಾಥಾ ಹಾಗೂ ಜಾಗೃತಿ ತರಗತಿ ಹಮ್ಮಿ ಕೊಳ್ಳಲಾಯಿತು. ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಪ್ರಿಯ ಶೆಣೈ ಉದ್ಘಾಟಿಸಿದರು. ವೈದ್ಯಾಧಿಕಾರಿ ಪ್ರಭಾಕರ ರೈ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯಿನಿ ಸುರೇಖಾ ಮಲ್ಯ ಮಾತನಾಡಿದರು. ಅಖಿಲ್ ಕೆ. ಸ್ವಾಗತಿಸಿ, ಶೈಲಜಾ ಎ. ವಂದಿಸಿದರು. ಜನಪ್ರತಿನಿಧಿ ಗಳು, ವಿದ್ಯಾರ್ಥಿಗಳು, ಆಶಾಕಾರ್ಯ ಕರ್ತೆಯರು …

ಪೋಟೋಗ್ರಫಿ ವಲಯದ ಉದ್ಯೋಗ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಮಂಡನೆ- ಶಾಸಕ ಎಕೆಎಂ ಅಶ್ರಫ್

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಶನ್‌ನ  ೩೯ನೇ ಜಿಲ್ಲಾ ಸಮ್ಮೇಳನ ಉದಯಗಿರಿ ಶ್ರೀಹರಿ ಸಭಾಂಗಣದಲ್ಲಿ ನಡೆಯಿತು. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಅವರು ಮಾತನಾಡಿ ಫೋಟೋಗ್ರಫಿ ವಲಯದಲ್ಲಿನ ಉದ್ಯೋಗ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಮಂಡಿಸುವುದಾಗಿ ನುಡಿದ ಅವರು ಎಕೆಪಿಎಯ ಚಟುವಟಿಕೆ ಮಾದರಿಯಾ ಗಿದೆ ಎಂದು ಶ್ಲಾಘಿಸಿದರು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಕೆ.ಸಿ. ಅಬ್ರಹಂ ಅಧ್ಯಕ್ಷತೆ ವಹಿಸಿದರು. ಮಧೂರು ಪಂ. ಅಧ್ಯಕ್ಷ ಗೋಪಾ ಲಕೃಷ್ಣ ಶಿಕ್ಷಣ ಪ್ರಶಸ್ತಿ ವಿತರಿಸಿದರು. ಸಂಘಟನೆಯ ರಾಜ್ಯ ಅಧ್ಯಕ್ಷ ಸಂ ತೋಷ್ ಪ್ರಧಾನ …

ವಾಹನ ಸಂಚಾರ ನಿಷೇಧ

ಬೋವಿಕ್ಕಾನ: ಬೇತೂರ್‌ಪಾರ ಪರಪ್ಪ ಲಿಂಕ್ ರೋಡಿನ ದುರಸ್ತಿ ನಡೆಯುತ್ತಿ ರುವುದರಿಂದ ಮುಂದಿನ ಸೂಚನೆ ಬರುವವರೆಗೂ ಈ ದಾರಿಯಾಗಿ ವಾಹನ ಸಂಚಾರವನ್ನು  ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಪಲ್ಲಂಜಿ ಕಡೆಯಿಂದ ಬೇತೂರ್ ಪಾರ ಕಡೆಗೆ ಹೋಗುವ ವಾಹನಗಳು ಪರಪ್ಪ ವನಂಗಾಡ್ ಚೊಟ್ಟಂತ್ತೋಲ್ ಮೂಲಕ ಮತ್ತು ಕುತ್ತಿಕೋಲ್ ಕಡೆಗೆ ಹೋಗುವ ವಾಹನಗಳು ಕಾವುಂಗಲ್ ಚಾಯಿತ್ತಡ್ಕ ಮೂಲಕ ಸಂಚರಿಸಬೇ ಕೆಂದು ಕೆ.ಆರ್.ಎಫ್.ಬಿ- ಪಿ.ಎಂ.ಯು ವಿಭಾಗ ಕಾಸರಗೋಡು ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಬಂದು ಚಿನ್ನ ಎಗರಿಸುವ ಕಳ್ಳರ ಕಾಟ ಮತ್ತೆ ತೀವ್ರ

ಬದಿಯಡ್ಕ: ದ್ವಿಚಕ್ರ ವಾಹನದಲ್ಲಿ ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ  ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸುವ ಕಳ್ಳರ ಕಾಟ ಮತ್ತೆ ತಲೆಯೆತ್ತಿದೆ. ಬದಿಯಡ್ಕಕ್ಕೆ ಸಮೀಪದ ಬಾರಡ್ಕ ನಿವಾಸಿ ಬೀಡಿ ಕಾರ್ಮಿಕೆ ರೋಹಿಣಿ (೫೨) ಎಂಬವರು ನಿನ್ನೆ ಬೀಡಿ ಕಂಪೆನಿಗೆ ಹೋಗಿ ಅಲ್ಲಿಂದ ಬಸ್ಸಿನಲ್ಲಿ ಹಿಂತಿರುಗಿ ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದಾರಿ ಮಧ್ಯೆ  ಸ್ಕೂಟಿಯಲ್ಲಿ  ಹೆಲ್ಮೆಟ್ ಧರಿಸಿ ಬಂದ ಕಳ್ಳನೋರ್ವ ಅವರ ಕುತ್ತಿಗೆಯಲ್ಲಿದ್ದ ಮೂರುವರೆ ಪವನ್‌ನ ಚಿನ್ನದ ಸರ ಎಗರಿಸಿ ಪರಾರಿಯಾಗಿ ದ್ದಾನೆ. ಆಗ ಆ ಮಹಿಳೆ …

ಒಂದನೇ ತರಗತಿ ವಿದ್ಯಾರ್ಥಿನಿ ಅಸೌಖ್ಯ ಬಾಧಿಸಿ ಮೃತ್ಯು

ಉಪ್ಪಳ: ಒಂದನೇ ತರಗತಿ ವಿದ್ಯಾ ರ್ಥಿನಿಯೋರ್ವೆ ಅಸೌಖ್ಯ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ಮೃತಪಟ್ಟಳು. ಬೇಕೂರು ಒಬರ್ಲೆ ನಿವಾಸಿಯೂ, ಗಲ್ಫ್ ಉದ್ಯೋಗಿಯಾದ ಹನೀಫ ಎಂಬವರ ಪುತ್ರಿ ಅಸ್ಯಸಫಾ (೬) ಮೃತಪಟ್ಟ ಬಾಲಕಿ. ಈಕೆ ಬೇಕೂರು ಸರಕಾರಿ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಈ ಬಾಲಕಿಗೆ ಜನ್ಮತಾ ಅಸೌಖ್ಯ ಬಾಧಿಸಿತ್ತೆನ್ನಲಾಗಿದೆ. ಇದರಿಂದ ಒಮ್ಮೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಎರಡು ವಾರಗಳ ಹಿಂದೆ ಜ್ವರ ಬಾಧಿಸಿತ್ತು. ಎರಡು ದಿನಗಳ ಹಿಂದೆ ಮತ್ತೆ ಅಸೌಖ್ಯ ಕಾಣಿಸಿ ಕೊಂಡುದರಿಂದ ಕಂಕನಾಡಿಯ ಆಸ್ಪತ್ರೆಯಲ್ಲಿ ದಾಖಲಿಸ …

ಪಂಚಾಯತ್ ಸದಸ್ಯನಿಗೆ ಸಂದೇಶ ಕಳುಹಿಸಿದ ಬಳಿಕ ಪೋಕ್ಸೋ ಪ್ರಕರಣದ ಆರೋಪಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ:  ಪೋಕ್ಸೋ ಪ್ರಕರ ಣದಲ್ಲಿ ವಿಚಾರಣೆ  ಆರಂಭಗೊಳ್ಳಬೇ ಕಾದ ದಿನದಂದು ಆರೋಪಿ ಕಾಡಿ ನೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಅಡೂರು ಚಾಮೆಕೊಚ್ಚಿ ಮಲ್ಲಂಪಾರೆಯ ದಿನೇಶನ್ ಯಾನೆ ಗಣೇಶನ್ (೪೦)  ಚಾಮೆಕೊಚ್ಚಿ ಅರಣ್ಯದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ.  ಆದೂರು ಪೊಲೀಸರು ೨೦೨೨ರಲ್ಲಿ ದಾಖಲಿಸಿಕೊಂಡ ಪೋಕ್ಸೋ ಪ್ರಕರಣದಲ್ಲಿ ಗಣೇಶನ್ ಆರೋಪಿಯಾ ಗಿದ್ದರ. ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿದ್ದ ಇವರು ಇತ್ತೀಚೆಗೆ ಜಾಮೀನಿನಲ್ಲಿ ಬಿಡುಗಡೆ ಗೊಂಡಿದ್ದರು. ಈ ಪ್ರಕರಣದ ವಿಚಾರಣೆ ಕಾಸರಗೋಡು ಪೋಕ್ಸೋ ನ್ಯಾಯಾಲಯದಲ್ಲಿ ನಿನ್ನೆ ಆರಂಭಗೊಳ್ಳಬೇಕಿತ್ತು. ನ್ಯಾಯಾಲ …

ಹುಡುಗಿಗೆ ಕಿರುಕುಳ: ಆರೋಪಿಗೆ ಐದು ವರ್ಷ ಸಜೆ, ದಂಡ

ಕಾಸರಗೋಡು: ಪ್ರಾಯಪೂರ್ತಿ ಯಾಗದ ಹುಡುಗಿಗೆ ಲೈಂಗಿಕ ರೀತಿಯ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಫಾಸ್ಟ್ ಟ್ರಾಕ್  ಸ್ಪೆಷಲ್ ಕೋರ್ಟ್ ಐದು ವರ್ಷ ಸಜೆ ಹಾಗೂ ೨೫,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಪೆರಿಯಾ ಮಂಡತ್ತಿಕಂಡದ ಸುಂದರನ್ (೬೩) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.  ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಐದು ತಿಂಗಳ ಹೆಚ್ಚುವರಿ ಸಜೆ ಅನುಭಸಬೇ ಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೧೮ ಅಕ್ಟೋಬರ್‌ನಲ್ಲಿ ೧೭ ವರ್ಷದ ಹುಡುಗಿ ಆರೋಪಿಯ ಮನೆಗೆ ಹೋಗಿದ್ದ ವೇಳೆ ಅಲ್ಲಿ ಆಕೆಗೆ …