ಎಟಿಎಂನೊಳಗೆ ಸಿಲುಕಿದ ತಾಯಿ, ಪುತ್ರಿ: ಅಗ್ನಿಶಾಮಕದಳದಿಂದ ರಕ್ಷಣೆ

ಕಾಸರಗೋಡು: ಎಟಿಎಂ ಕೇಂದ್ರಕ್ಕೆ ಹಣ ತೆಗೆಯಲು ಹೋದ ವೇಳೆ ಅದರ ಬಾಗಿಲು ಲಾಕ್‌ಗೊಂಡು  ಹೊರಬ ರಲು ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿ ಕೊಂಡಿದ್ದ ತಾಯಿ ಮತ್ತು  ಆಕೆಯ ಎಂಟು ವರ್ಷದ ಪುತ್ರಿಯನ್ನು ಕಾಸರ ಗೋಡು ಅಗ್ನಿಶಾಮಕದಳ ರಕ್ಷಿಸಿದ ಘಟನೆ ನಗರದಲ್ಲಿ ನಿನ್ನೆ ಸಂಜೆ ನಡೆದಿದೆ. ನಗರದ ಹಳೆ ಬಸ್ ನಿಲ್ದಾಣ ಪರಿಸರದ   ಬ್ಯಾಂಕೊಂದರ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಹಣ ತೆಗೆಯಲು ತಾಯಿ ಮತ್ತು ಪುತ್ರಿ ಎಂಟಿಎಂ ಕೇಂದ್ರದೊಳಗೆ ಪ್ರವೇಶಿಸಿ    ಬಾಗಿಲನ್ನು ಒಳಗಿನಿಂದ ಮುಚ್ಚಿದ್ದರು. ಆದರೆ ಅದನ್ನು  …

ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರು: ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರಥಮ ವರ್ಷ ವಿದ್ಯಾರ್ಥಿನಿ ಹಾಸ್ಟೆಲ್ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆಗೈದ ಘಟನೆ ನಿನ್ನೆ ನಡೆದಿದೆ. ಬೆಳಗಾವಿ ಅಥಣಿ ನಿವಾಸಿ ಪ್ರಕೃತಿ ಶೆಟ್ಟಿ (೨೦) ಆತ್ಮಹತ್ಯೆಗೈದವರು. ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಇವರು ಆರನೇ ಮಹಡಿಯಿಂದ ಕೆಳಗೆ ಹಾರಿದ್ದಾರೆ. ಹೆಚ್ಚು ದಪ್ಪಗಿದ್ದು, ಸಪೂರವಾಗಲು ಪ್ರಯತ್ನಿಸಿಯೂ ಫಲವಿಲ್ಲದ ಕಾರಣ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುತಿ ರುವುದಾಗಿ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

೫.೫೮ ಲೀಟರ್ ಕರ್ನಾಟಕ ಮದ್ಯ ಸಹಿತ ಸ್ಕೂಟರ್ ವಶ

ಕಾಸರಗೋಡು: ನಗರದ ನೆಲ್ಲಿಕುಂಜೆಯಲ್ಲಿ  ಕಾಸರಗೋಡು ಅಬಕಾರಿ ರೇಂಜ್  ಕಚೇರಿಯ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೫.೫೮ ಲೀಟರ್ ಕರ್ನಾಟಕ ನಿರ್ಮಿ ತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂ ಡಿದೆ. ಈ ಮಾಲು ಸಾಗಿಸಲು ಬಳಸಿರುವುದಾಗಿ ಹೇಳಲಾಗುತ್ತಿರುವ ಸ್ಕೂಟರ್‌ನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿ ನಗರದ ನುಳ್ಳಿಪ್ಪಾಡಿ ನಿವಾಸಿ ಚಿಂತನ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳ ಲಾಗಿದೆಯೆಂದೂ  ಕಾರ್ಯಾಚರಣೆ ವೇಳೆ  ಆತ ಪರಾರಿಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ …

ಕಾಸರಗೋಡು ನ್ಯಾಯಾಲಯದಲ್ಲಿ ಹಾಜರುಪಡಿಸಿ ಜೈಲಿಗೆ ಸಾಗಿಸಿದ ಆರೋಪಿ ಕೈಯಲ್ಲಿ ಗಾಂಜಾ ಪತ್ತೆ

ಕಾಸರಗೋಡು: ಪ್ರಕರಣವೊಂ ದಕ್ಕೆ ಸಂಬಂಧಿಸಿ ಕಾಸರಗೋಡಿನ ನ್ಯಾಯಾಲ ಯದಲ್ಲಿ ಹಾಜರುಪಡಿಸಿ ಬಳಿಕ ಕಣ್ಣೂರು ಸೆಂಟ್ರಲ್ ಜೈಲಿಗೆ ಸಾಗಿಸಲ್ಪಟ್ಟ ಆರೋಪಿಯ ಕೈಯಲ್ಲಿ ೧೦ ಗ್ರಾಂ ಗಾಂಜಾ ಪತ್ತೆಯಾದ ಘಟನೆ ನಡೆದಿದೆ. ಕಾಸರಗೋಡು ಚೌಕಿ ನಿವಾಸಿ ಅಭಿ ಲಾಷ್ ಅಲಿಯಾಸ್ ಹಬೀಬ್ ಎಂಬಾ ತನ ಕೈಯಿಂದ  ಗಾಂಜಾ ಪತತೆಹಚ್ಚ ಲಾಗಿದೆ. ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಅಭಿ ಲಾಷ್ ನನ್ನು ಪೊಲೀಸರು ನಿನ್ನೆ ಕಾಸರಗೋ ಡಿನ  ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಬಳಿಕ ಆತನನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಸಾಗಿಸ ಲಾಗಿತ್ತು. ಅಲ್ಲಿ ಜೈಲು …

ಅನಧಿಕೃತ ಸಾಗಿಸಿದ  ೬೪೦.೩೯  ಗ್ರಾಂ ಚಿನ್ನ ವಶ ಯುವತಿ  ಕಸ್ಟಡಿಗೆ

ಕೊಚ್ಚಿ: ನೆಡುಂಬಾಶ್ಶೇರಿ ಅಂತಾ ರಾಷ್ಟ್ರ ವಿಮಾನ ನಿಲ್ದಾಣ ಮೂಲಕ ಅನಧಿಕೃತವಾಗಿ ಸಾಗಿಸಲು ಯತ್ನಿ ಸಿದ ೬೪೦.೩೯ ಗ್ರಾಂ ಚಿನ್ನವನ್ನು ಕಸ್ಟಮ್ಸ್ ಇಂಟೆಲಿಜೆನ್ಸ್ ವಿಭಾಗ ವಶಪಡಿಸಿದೆ. ಕಣ್ಣೂರು ನಿವಾಸಿ ಜೋಸಿ ಎಂಬಾಕೆಯ  ಕೈಯಿಂದ ಚಿನ್ನ ವಶಪಡಿಸಿ ಈಕೆಯನ್ನು  ಕಸ್ಟಡಿಗೆ ತೆಗೆಯಲಾಗಿದೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ಪೂರ್ಣ ಗೊಳಿಸಿ ಹೊರಗೆ ತೆರಳಲು ಯತ್ನಿ ಸುತ್ತಿದ್ದಂತೆ ಯುವತಿಯನ್ನು ಗ್ರೀನ್ ಚಾನೆಲ್‌ನಲ್ಲಿ ತಡೆದು ನಿಲ್ಲಿಸಿ ಬ್ಯಾಗ್ ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ಚಿನ್ನಕ್ಕೆ ೩೪.೬೫ ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾ ಗಿದೆ. ಯುವತಿ …

೨೪ಗ್ರಾಂ ಗಾಂಜಾ ವಶ: ಓರ್ವ ಸೆರೆ

ಕಾಸರಗೋಡು:  ೨೪ ಗ್ರಾಂ ಗಾಂಜಾ ದೊಂದಿಗೆ ವಿದ್ಯಾನಗರ ಚಾಲಾ ರಸ್ತೆ ಕಾನತ್ತುಕರೆಯ ಅಬ್ದುಲ್ ಕರೀಂ (೪೮) ಎಂಬಾತನನ್ನು ಕಾಸರಗೋಡು ಅಬಕಾರಿ ಎಕ್ಸೈಸ್ ಇನ್ಸ್‌ಪೆಕ್ಟರ್ ಪಿ.ಜಿ. ರಾಧಾ ಕೃಷ್ಣನ್‌ರ ನೇತೃತ್ವದ ತಂಡ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದೆ.

ಗೆಳೆಯನ ಬರ ಹೇಳಿ ಇರಿದು ಕೊಲೆ

ಕಣ್ಣೂರು: ಗೆಳೆಯನನ್ನು ಬರಹೇಳಿ ಇರಿದು ಕೊಲೆಗೈದ ಘಟನೆ ಆಲಕ್ಕೋಡ್‌ನಲ್ಲಿ ಸಂಭವಿಸಿದೆ. ಇಲ್ಲಿನ ಅರಂಗವಟ್ಟಿಕ್ಕಯದ ಮ್ಯಾಥ್ಯೂ ಹಾಗೂ ದಿ| ವಲ್ಸಮ್ಮ ದಂಪತಿ ಪುತ್ರ ಜೋಶಿ ಮ್ಯಾಥ್ಯು (೩೫)ನನ್ನು ಗೆಳೆಯ ಜಯೇಶ್ ಕೊಲೆ ಗೈದಿದ್ದಾನೆ. ನಿನ್ನೆ ರಾತ್ರಿ ೧೧ ಗಂಟೆಗೆ ಹತ್ಯೆಗೈಯ್ಯಲಾಗಿದೆ. ಇವರಿಬ್ಬರ ಮಧ್ಯೆ ಉಂಟಾಗಿದ್ದ ವೈಮನಸ್ಸನ್ನು ಮಾತುಕತೆಯಲ್ಲಿ ಬಗೆಹರಿಸುವ ಎಂದು ಹೇಳಿ ಗೆಳೆಯನನ್ನು ದೀಪಾ ಆಸ್ಪತ್ರೆಯ ಸಮೀಪದ ಪಾರ್ಕಿಂಗ್ ಪ್ಲಾಜಾಕ್ಕೆ ಗೆಳೆಯ ಬರಹೇಳಿದ್ದನು. ಮಾತುಕತೆ ವೇಳೆ ಕೋಪಗೊಂಡ ಗೆಳೆಯ ಮೋರಾನಿ ನಿವಾಸಿ ಜಯೇಶ್ (೩೯) ಜೋಷಿಗೆ ಇರಿದಿದ್ದಾನೆ. ಕೂಡಲೇ …

ಮಧುಮೇಹ ದಿನ: ವೈದ್ಯರುಗಳಿಂದ ತಿಳುವಳಿಕಾ ನಡಿಗೆ

ಕಾಸರಗೋಡು: ವಿಶ್ವ ಮಧುಮೇಹ ದಿನದ ಅಂಗವಾಗಿ ಜನರಲ್ಲಿ ಅರಿವು, ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಾಸರಗೋಡಿನಲ್ಲಿ ಇಂದು ಬೆಳಿಗ್ಗೆ ವೈದ್ಯರುಗಳ ನೇತೃತ್ವದಲ್ಲಿ ನಡಿಗೆ ನಡೆಯಿತು. ಐಎಂಎ ಕಾಸರಗೋಡು ಘಟಕ, ಐಎಂಎ ವನಿತಾ ವಿಂಗ್, ರೋಟರಿ ಕ್ಲಬ್ ಕಾಸರಗೋಡು, ಡಿಯಾಲೈಫ್, ಐಎಪಿ ಎಂಬಿವುಗಳ ಸಂಯುಕ್ತಾಶ್ರಯದಲ್ಲಿ ನಡೆದ ನಡಿಗೆ ಬ್ಯಾಂಕ್ ರೋಡ್‌ನಲ್ಲಿರುವ ರೋಟರಿ ಕ್ಲಬ್ ಬಳಿಯಿಂದ ಆರಂಭಗೊಂಡು ನಗರದಲ್ಲಿ ಪ್ರದಕ್ಷಿಣೆ ಬಂದು ಬಳಿಕ ರೋಟರಿ ಕ್ಲಬ್ ಸಮೀಪದಲ್ಲಿ ಸಮಾಪ್ತಿಗೊಂಡಿತು.  ಐಎಂಎ ಅಧ್ಯಕ್ಷ ಡಾ| ಜಿತೇಂದ್ರ ರೈ, ರೋಟರಿ ಕ್ಲಬ್ ಅಧ್ಯಕ್ಷ ಗೌತಂ …

ಕೃಷಿ ಕಾರ್ಮಿಕರ ಸರಕಾರ ಅವಗಣನೆ ಆರೋಪ: ಬಿಎಂಎಸ್ ಧರಣಿ

ಅಡೂರು: ಕೃಷಿ ಕಾರ್ಮಿಕರನ್ನು ಸರಕಾರ ಅವಗಣಿಸುತ್ತಿದೆ ಎಂದು ಆರೋಪಿಸಿ ಬಿಎಂಎಸ್ ದೇಲಂಪಾಡಿ ಪಂಚಾಯತ್ ಸಮಿತಿ ಪಂಚಾಯತ್ ಕಚೇರಿ ಮುಂಭಾಗ ಧರಣಿ ನಡೆಸಿದೆ. ಅಸಂಘಟಿತ ಕಾರ್ಮಿಕರ ಸಂಘ್ ಜಿಲ್ಲಾ ಅಧ್ಯಕ್ಷ ಎಂ.ಕೆ. ರಾಘವನ್ ಉದ್ಘಾಟಿಸಿದರು. ಪಂ. ಸಮಿತಿ ಅಧ್ಯಕ್ಷ ಮೋಹನನ್ ಅಧ್ಯಕ್ಷತೆ ವಹಿಸಿದರು. ವಲಯ ಅಧ್ಯಕ್ಷ ಆನಂದ ಸಿ.ಎಚ್, ವಲಯ ಉಪಾಧ್ಯಕ್ಷ ಕುಸುಮ, ಕರ್ಷಕ ಜಿಲ್ಲಾ ಸಮಿತಿ ಸದಸ್ಯೆ ಭಾರ್ಗವಿ ಪಾಂಡಿ ಮಾತನಾಡಿದರು. ಪಂ. ಸಮಿತಿ ಕಾರ್ಯದರ್ಶಿ ಅನಿತ ಮುನಿಯೂರ್ ಸ್ವಾಗತಿಸಿದರು.

ಯುವಜನಾಂಗ ದಾರಿ ತಪ್ಪದಿರಲು ಧರ್ಮದ ಅರಿವು ಅಗತ್ಯ- ಎಡನೀರು ಶ್ರೀ

ಬದಿಯಡ್ಕ: ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಬದಿಯಡ್ಕ ಗಣೇಶಮಂ ದಿರದಲ್ಲಿ ಭಾನುವಾರ ಸಂಜೆ ಗೋ ಪೂಜೆ ನಡೆಯಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿ, ಆಶೀ ರ್ವಚನ ನೀಡಿದರು. ಅವರು ಅನು ಗ್ರಹ ಭಾಷಣದಲ್ಲಿ ಗೋಪೂಜೆಯ ಮೂಲಕ ಗೋವಿನ ಕುರಿತಾದ ಶ್ರದ್ಧೆಯನ್ನು ಮತ್ತಷ್ಟು ಮೈಗೂಡಿಸಿಕೊಳ್ಳುವುದರೊಂದಿಗೆ ಸನಾತನ ಧರ್ಮಕ್ಕೆ ಪೂರಕವಾದ ಹಬ್ಬ ಹರಿದಿನಗಳ ಆಚರಣೆಯನ್ನು ಮಾಡಬೇಕು. ಧನಧಾನ್ಯಗಳನ್ನು ಪೂಜ್ಯಭಾವದಿಂದ ಕಾಣುವ ನಾವು ಪ್ರಕೃತಿಯನ್ನು ಪೂಜಿಸುತ್ತೇವೆ. ಯುವಜನಾಂಗವು ಆಚರಣೆಗಳಲ್ಲಿ ತೊಡಗಿಕೊಂಡಾಗ ಅವರಿಗೆ ಧರ್ಮದ ಅರಿವು …