ಯುವಕನನ್ನು ತಡೆದು ಕಲ್ಲಿನಿಂದ ಹೊಡೆದು ಗಂಭೀರ ಗಾಯ: 3 ಮಂದಿ ವಿರುದ್ಧ ಕೇಸು

ಮಂಜೇಶ್ವರ: ಯುವಕನನ್ನು ತಡೆದು ಕೈಯಿಂದ, ಕಲ್ಲಿನಿಂದ ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿ ಮೂರು ಮಂದಿ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಐಲ ಕಡಪುö್ಪರ ಶಿವಾಜಿನಗರ ಬಳಿಯ ಕುದುಪುಳು ನಿವಾಸಿಯಾದ ಬಿಜೆಪಿ ಹನೀಫ್ ಎಂದೇ ಗುರುತಿಸಿಕೊಂಡಿರುವ ಮೊಹಮ್ಮದ್ ಹನೀಫ್(28) ಎಂಬವರು ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ದೂರಿನಂತೆ ಉಪ್ಪಳ ನಿವಾಸಿಗಳಾದ ಕೌಸರ್, ಅಂಬು ಹಾಗೂ ಅಪರಿಚಿತ ಇನ್ನೋರ್ವ ವ್ಯಕ್ತಿಯ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ …

ಕಾಸರಗೋಡು ಕೇರಳದ ಸೌರಶಕ್ತಿ ಹಬ್ ಆಗಿ ಬದಲಾಗಲಿದೆ, ಪೆರಡಾಲದಲ್ಲಿ 30 ಮೆಘಾವಾಟ್ ಸೌರಸ್ಥಾವರ ನಿರ್ಮಾಣ- ಮುಖ್ಯಮಂತ್ರಿ

ಕಾಸರಗೋಡು: ಕಾಸರಗೋಡು ಜಿಲ್ಲೆ ಕೇರಳದ ಸೌರಶಕ್ತಿಯ ಹಬ್ ಆಗಿ ಬದಲಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪೆರಡಾಲಲ್ಲಿ 30 ಮೆಘಾವಾಟ್ ಮತ್ತು ಚೀಮೇನಿಯಲ್ಲಿ 80 ಮೆಘಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸೌರ ಸ್ಥಾವರಗಳ ನಿರ್ಮಾಣ ಕೆಲಸಗಳ ಉದ್ಘಾಟನೆಯನ್ನು ನಿನ್ನೆ ಚೀಮೇನಿಯಲ್ಲಿ ನಡೆದ ಸಮಾರಂಭದಲ್ಲಿ ನಿರ್ವಹಿಸಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು. ತೋಟಗಾರಿಕಾ ಇಲಾಖೆಗೆ ಸೇರಿದ 300 ಎಕ್ರೆ ಸ್ಥಳಗಳಲ್ಲಾಗಿ   ಈ ಎರಡು ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. ಬೆಂಗಳೂರನ್ನು ಕೇಂದ್ರವನ್ನಾಗಿ ಕಾರ್ಯವೆಸಗುತ್ತಿರುವ ನ್ಯಾಚುರಲ್ ಎನರ್ಜಿ ಪ್ರೈವೆಟ್ ಲಿಮಿಟೆಡ್‌ಗೆ ಈ …

ಶುಚಿತ್ವ-ಮಹತ್ವ: ಕುಂಬಳೆಯಲ್ಲಿ ಮಿನಿ ಎಂಸಿಎಫ್ ಬಳಿಯಲ್ಲೇ ತ್ಯಾಜ್ಯರಾಶಿಯಿಂದ ದುರ್ನಾತ; ಪಾದಚಾರಿಗಳಿಗೆ ನಾಯಿಗಳ ದಾಳಿ ಭೀತಿ

ಕುಂಬಳೆ: ಸರಕಾರದ ಶುಚಿತ್ವ-ಮಹತ್ವ ಎಂಬ ಗುರಿಯೊಂದಿಗೆ  ಕುಂಬಳೆ ಪಂಚಾಯತ್‌ನ ವಿವಿಧೆಡೆಗ ಳಲ್ಲಿ ಸ್ಥಾಪಿಸಿದ ಮಿನಿ ಎಂಸಿಎಫ್‌ಗ ಳಿಂದಾಗಿ ಸಾರ್ವಜನಿಕರಿಗೆ  ದಾರಿಯ ಲ್ಲಿ ನಡೆದು ಹೋಗಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಈ ಭೂಮಿಯಿಂದ ಇಲ್ಲದಾಗಿಸುವ ಗುರಿಯೊಂದಿಗೆ ಪಂಚಾಯತ್‌ಗಳ ಪ್ರಧಾನ ಸ್ಥಳಗಳಲ್ಲಿ ಮಿನಿ ಎಂಸಿಎಫ್‌ಗಳನ್ನು ಸ್ಥಾಪಿಸಲಾಗಿದೆ. ಮನೆಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಉತ್ಪನ್ನಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಈ ಮಿನಿ ಎಂಸಿಎಫ್‌ನೊಳಗೆ ಇರಿಸಲಾಗುತ್ತಿದೆ. ಇದೇ ವೇಳೆ   ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ಮನೆಗಳ ತ್ಯಾಜ್ಯ ವಸ್ತುಗಳನ್ನು ಪ್ಲಾಸ್ಟಿಕ್ …

ಪ್ರೇತಬಾಧೆ ಬಿಡಿಸಲು ತಲುಪಿದ್ದ ಬಾಲಕಿಗೆ ದೌರ್ಜನ್ಯ ಗೈಯ್ಯಲೆತ್ನ: ನಕಲಿ ಮಂತ್ರವಾದಿ ವಿರುದ್ಧ ಪೋಕ್ಸೋ ಕೇಸು

ಕೊಲ್ಲಂ: ದೇಹದಲ್ಲಿ ಸೇರಿದ ಪ್ರೇತಬಾಧೆಯನ್ನು ಬಿಡಿಸಲು ತಾಯಿಯೊಂದಿಗೆ ತಲುಪಿದ 16ರ ಬಾಲಕಿಯನ್ನು ಕಪಟ ಮಂತ್ರವಾದಿ ಕೊಠಡಿಗೆ ಕೊಂಡೊಯ್ದು ದೌರ್ಜನ್ಯಗೈಯ್ಯಲೆತ್ನಿಸಿರುವುದಾಗಿ ದೂರಲಾಗಿದೆ.  ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಕೊಲ್ಲಂ ಪುತ್ತೂರ್‌ನಲ್ಲಿ ನಿನ್ನೆ ಘಟನೆ ನಡೆದಿದೆ. ವೆಂಡಾರ್ ನಿವಾಸಿಯಾದ ಮಂತ್ರವಾದಿ ಮುರಾರಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿದ ಬಗ್ಗೆ ತಿಳಿದು ತಲೆಮರೆಸಿಕೊಂಡ ಮಂತ್ರವಾದಿಯ ಪತ್ತೆಗೆ ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಸ್‌ಎನ್‌ಡಿಪಿ ಯೋಗಂ ಕಾಸರಗೋಡು ಯೂನಿಯನ್ ಕಚೇರಿ ಉದ್ಘಾಟನೆ, ಜನಪ್ರತಿನಿಧಿಗಳಿಗೆ ಗೌರವಾರ್ಪಣೆ

ಕಾಸರಗೋಡು:  ಎಸ್‌ಎನ್‌ಡಿಪಿ ಯೋಗಂ ಕಾಸರಗೋಡು ಯೂನಿ ಯನ್ ಕಚೇರಿಯ ಉದ್ಘಾಟನೆ ಹಾಗೂ ಜನಪ್ರತಿನಿಧಿ ಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಸಲಾಯಿತು.  ಕೊರಕ್ಕೋಡು ಶ್ರೀ ಆರ್ಯಕಾತ್ಯಾಯಿನಿ ಕ್ಷೇತ್ರ ಸಮೀಪ ಯೂನಿಯನ್ ಕಚೇರಿಯನ್ನು ಯೋಗಂ ಇನ್‌ಸ್ಪೆಕ್ಟಿಂಗ್ ಆಫೀಸರ್ ಪಿ.ಟಿ. ಲಾಲು ಉದ್ಘಾಟಿಸಿ ಮಾತನಾಡಿದರು. ತಳಂಗರೆ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಸ್ಥಾನಿಕ ನಾಗೇಶ್ ಕಾರ್ನವರ್, ಪಿಲಿಕುಂಜೆ ಶ್ರೀ ಐವರ್ ಭಗವತೀ ಕ್ಷೇತ್ರದ ಮಂಜು ಕಾರ್ನವರ್ ದೀಪ ಬೆಳಗಿಸಿದರು. ಎಸ್‌ಎನ್‌ಡಿಪಿ ಯೋಗಂ ಯೂನಿಯನ್ ಅಧ್ಯಕ್ಷ ನಾರಾಯಣ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ …

ನಿರ್ಮಾಣ ಕಾರ್ಮಿಕರ ನಿವೃತ್ತಿ ಸವಲತ್ತು, ಪಿಂಚಣಿ ಲಭ್ಯಗೊಳಿಸಲು ಎಐಟಿಯುಸಿ ಒತ್ತಾಯ

ಮಂಜೇಶ್ವರ: ನಿರ್ಮಾಣ ಕಾರ್ಮಿಕರ ಒಕ್ಕೂಟ ಮಂಜೇಶ್ವರ ಮಂಡಲ ಸಮಾವೇಶ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಸಭಾಂಗ ಣದಲ್ಲಿ ನಡೆಯಿತು. ನಿರ್ಮಾಣ ಕಾರ್ಮಿಕರ ಕ್ಷೇಮನಿಧಿ ಬೋರ್ಡ್ ನಿಂದ 2025 ಎಪ್ರಿಲ್‌ನಿಂದ ಕಾರ್ಮಿ ಕರಿಗೆ ಲಭಿಸದ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಕೂಡಲೇ ಪಾವತಿಸಲು ಸರಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಲಾ ಯಿತು. ನಿರ್ಮಾಣ ಕಾರ್ಮಿಕರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಬಿಜು ಉಣ್ಣಿತ್ತಾನ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಚಂದ್ರಶೇಖರ ಸಿಂತಾಜೆ ಅಧ್ಯಕ್ಷತೆ ವಹಿಸಿದರು. ಹಿರಿಯ ನಾಯಕ ಸಂಜೀವ ಶೆಟ್ಟಿಯವರನ್ನು ಒಕ್ಕೂಟದ ಜಿಲ್ಲಾ …

ಕಾಡಿನಲ್ಲಿ ಬೇಟೆ: ಮೂವರ ಸೆರೆ; ಕಾಡುಹಂದಿ, ಬಂದೂಕು, ಗುಂಡು, ವ್ಯಾನ್ ವಶ

ಕಾಸರಗೋಡು: ಸರಕಾರಿ ರಕ್ಷಿತಾ ರಣ್ಯಕ್ಕೆ ನುಗ್ಗಿ ವನ್ಯ ಜೀವಿಗಳನ್ನು ಬೇಟೆಯಾಡುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ ತಂಡ ಬಂಧಿಸಿದೆ. ಇದಕ್ಕೆ ಸಂಬಂಧಿಸಿ ಬಳಾಲ್ ಕೊನ್ನಕ್ಕಾಡ್ ಚೆರುಂಬಕ್ಕೋಡ್ ಚಾಪೆಯಿಲ್ ಹೌಸ್‌ನ ಆರ್. ರಾಮಕೃಷ್ಣನ್ (49), ಮೈಕಯಂ ಕಳತ್ತಿಲ್ ಪರಂಬಿಲ್ ಹೌಸ್‌ನ ಕೆ.ಕೆ. ರತೀಶ್ (42) ಮತ್ತು  ಮಾಲೋತ್ತ್ ಪಳಯಂಕಾಲ್‌ನ  ಆರ್ ರಾಜೇಶ್ ಯಾನೆ ಮಧು (42) ಎಂಬವರನ್ನು   ಬಂಧಿಸಲಾಗಿದೆ. ಬಳಾಲ್ ಪಂಚಾಯ ತ್‌ನ ರಕ್ಷಿತಾರಣ್ಯಕ್ಕೆ ಸೇರಿದ ಪ್ರದೇಶವಾದ ಮಂಜುಚ್ಚಾಲ್  ಎಂಬಲ್ಲಿಂದ ಈ ಮೂವರನ್ನು ಬಂಧಿಸಲಾಗಿದೆ. ಬಂಧಿತರ ಕೈವಶವಿದ್ದ ಬಂದೂಕು, ಗುಂಡುಗಳು  …

ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ನಿಧನ

ಮಂಜೇಶ್ವರ: ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ತಲಪಾಡಿ ಮರಿಯಾಶ್ರಮ ಚರ್ಚ್ ಕಂಪೌಂಡ್ ಬಳಿಯ ನಿವಾಸಿ ಅಶೋಕ ಕ್ರಾಸ್ತ (32) ನಿಧನ ಹೊಂದಿದರು. ಮಂಗಳೂರಿನ ಅಂಗಡಿಯೊಂದರಲ್ಲಿ ನೌಕರನಾಗಿದ್ದ, ಅವಿವಾಹಿತರಾದ ಇವರು ಜನವರಿ 31ರಂದು ರಾತ್ರಿ 8 ಗಂಟೆಗೆ ಮನೆಯಲ್ಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕೂಡಲೇ ದೇರಳಕಟ್ಟೆಯ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿದೆ. ಆದರೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಮೃತರು ತಂದೆ ಜೋನ್ ಕ್ರಾಸ್ತಾ, ತಾಯಿ ಫ್ಲೋರಿನಾ ಕ್ರಾಸ್ತಾ, ಸಹೋದರರಾದ  ಸಂತೋಷ್ ಕ್ರಾಸ್ತಾ, ಗೋಡ್‌ವಿನ್ ಕ್ರಾಸ್ತಾ, …

ಯುವತಿ ನಾಪತ್ತೆ

ಮಂಜೇಶ್ವರ: ಮನೆಯಿಂದ ಹೊರ ಹೋದ ಯುವತಿ ವಾಪಸಾಗಲಿಲ್ಲವೆಂದು ದೂರಿ ತಾಯಿ ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ.  ತಲಪಾಡಿ ಮರಿಯಾಶ್ರಮ ಚರ್ಚ್ ಬಳಿಯ ನಿವಾಸಿ ಅಂತೋಣಿ ಸಿಲ್ವರ್‌ಸ್ಟಾರ್ ಡಿಸೋಜಾರ ಪುತ್ರಿ ಅನಿಶಾ ಡಿಸಿಲ್ವಾ (24) ನಾಪತ್ತೆಯಾಗಿರುವುದಾಗಿ ತಾಯಿ ಜೆಸಿಂತಾ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ತಿಂಗಳ 5ರಂದು ಮಧ್ಯಾಹ್ನ 1 ಗಂಟೆಗೆ ಮನೆಯಿಂದ ಈಕೆ ಹೊರಕ್ಕೆ ಹೋಗಿದ್ದು, ಆದರೆ ವಾಪಸಾಗಲಿಲ್ಲ ವೆಂದು ದೂರಿನಲ್ಲಿ ತಿಳಿಸಲಾಗಿದೆ.

ಅಸೌಖ್ಯ: ಯುವಕ ನಿಧನ

ಬದಿಯಡ್ಕ: ಅಸೌಖ್ಯ ತಗಲಿ ಚಿಕಿತ್ಸೆಗೆ ದಾಖಲಿಸಿದ್ದ  ಚೆನ್ನಾರಕಟ್ಟೆ ನಿವಾಸಿ, ಸಂಘದ ಸಕ್ರಿಯ ಕಾರ್ಯ ಕರ್ತ ರವಿಕುಮಾರ್ ಯಾನೆ ಚಿನ್ನತಂಬಿ (20) ನಿಧನ ಹೊಂದಿದರು. ದಿ| ಗಣೇಶರ ಪುತ್ರನಾಗಿದ್ದಾರೆ. ಅಸೌಖ್ಯ ನಿಮಿತ್ತ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ತಾಯಿ ಮಹೇಶ್ವರಿ, ಸಹೋದರರಾದ ಮಣಿ, ರಂಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.