ಮಲೆಯಾಳಂ ಭಾಷಾ ಮಸೂದೆ ತಕ್ಷಣ ಹಿಂತೆಗೆದುಕೊಳ್ಳಬೇಕು-ಸಿದ್ಧರಾಮಯ್ಯ

ಬೆಂಗಳೂರು: ಕೇರಳ ಸರಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ಮಲೆಯಾಳಂ ಭಾಷಾ ಮಸೂದೆ-೨೦೨೫ ಕಾಸರಗೋಡಿನ ಕನ್ನಡಿಗರಿಗೆ ತೀವ್ರ ಸಮಸ್ಯೆಯಾಗಲಿದ್ದು, ಅದನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳ ಸರಕಾರ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಲ್ಲಿ ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಸುಧೀರ್ಘ ಸಂದೇಶ ಪ್ರಕಟಿಸಿರುವ ಸಿದ್ಧರಾಮಯ್ಯ ಒಂದು ವೇಳೆ ಕಾಸರಗೋಡಿನ ಕನ್ನಡಿಗರ ಹಿತ ನಿರ್ಲಕ್ಷಿಸಿ ಅವರ ಮೇಲೆ  ಮಲೆಯಾಳಂ ಭಾಷೆಯನ್ನು ಹೇರಿದಲ್ಲಿ ನಮ್ಮ ಸರಕಾರ ಅವರ ಜೊತೆಗೆ ನಿಂತು ಸರ್ವ ರೀತಿಯ ಬೆಂಬಲ ನೀಡಲಿದೆ ಎಂದೂ ಸಿದ್ಧರಾಮಯ್ಯ ಹೇಳಿದ್ದಾರೆ.  …

ವಾರಂಟ್ ಆರೋಪಿ ಸೆರೆ

ಉಪ್ಪಳ:  ಮೂರು ವಾರಂಟ್ ಪ್ರಕರಣಗಳಲ್ಲಿ ಆರೋಪಿಯಾದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಸೋಂಕಾಲ್‌ನ ಮೊಹಮ್ಮದ್ ಫಾರೂಕ್ ಯಾನೆ ಚೀಲ ಫಾರೂಕ್ (25) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಈತ ಅಮಲು ಪದಾರ್ಥ ಕೈವಶವಿರಿಸಿಕೊಂಡ, ಕೊಲೆಯತ್ನ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಈತನ ವಿರುದ್ಧ ವಾರಂಟ್ ಜ್ಯಾರಿಯಲ್ಲಿದೆ. ಈತ ನಿನ್ನೆ ಉಪ್ಪಳದಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್, ಎಸ್‌ಐಗಳಾದ ಶಬರಿಕೃಷ್ಣ, ವೈಷ್ಣವ್, ಮಹಿಳಾ ಪೊಲೀಸ್ ವಂದನ ಎಂಬಿವರು ತಕ್ಷಣ ಅಲ್ಲಿಗೆ ತಲುಪಿ ಬಂಧಿಸಿದ್ದಾರೆ.  ಅಮಲು …

ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 11.20 ಲಕ್ಷ ರೂ. ಕಾಳಧನ ಸಹಿತ ಓರ್ವ ಸೆರೆ

ಕಾಸರಗೋಡು: ಅಂಬಲತ್ತರ ಪೊಲೀಸರು ಹಾಗೂ ಬೇಕಲ ಡಿವೈಎಸ್ಪಿ ನೇತೃತ್ವದ ಸ್ಕ್ವಾಡ್ ಸಂಯುಕ್ತವಾಗಿ ನಡೆಸಿದ ತಪಾಸಣೆಯಲ್ಲಿ 11.50 ಲಕ್ಷ ರೂಪಾಯಿ ಕಾಳಧನ ಸಹಿತ ಓರ್ವನನ್ನು ಬಂಧಿಸಲಾಗಿದೆ. ಅಂಬಲತ್ತರ ಕಲ್ಲಂದೋಳಿಯ ಅಬ್ಬಾಸ್ (40) ಎಂಬಾತ ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಪಾರಪ್ಪಳ್ಳಿಯಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಅಬ್ಬಾಸ್  ಕಾಳಧನ ಸಹಿತ ಸೆರೆಗೀಡಾಗಿದ್ದಾನೆ.  ಹಣವನ್ನು  ಕಟ್ಟುಗಳಾಗಿಸಿ ಸೀಟಿನಡಿಯಲ್ಲಿ ಬಚ್ಚಿಡಲಾಗಿತ್ತು.  ಹೆಚ್ಚಿನ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಅಲ್ಪ ಕಾಲದ ಬಳಿಕ  ಕಾಸರಗೋಡು …

ಪೊಸಡಿಗುಂಪೆಯಲ್ಲಿ ಬೆಂಕಿ ಆಕಸ್ಮಿಕ

ಉಪ್ಪಳ: ಪೊಸಡಿಗುಂಪೆ ಪರಿಸರದಲ್ಲಿ ಇಂದು ಬೆಳಿಗ್ಗೆ  ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದು ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ.  ದಿನಂಪ್ರತಿ ನೂರಾರು ಮಂದಿ ಭೇಟಿ ನೀಡುವ ಪ್ರವಾಸಿ ಕೇಂದ್ರವಾದ ಪೊಸಡಿಗುಂಪೆ ಪ್ರದೇಶದಲ್ಲಿ  ಬೆಂಕಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಲ್ಲಿಗೆ ತಲುಪುವವರು ಬೀಡಿ, ಸಿಗರೇಟ್ ಸೇದಿ ಅದನ್ನು ನಂದಿಸದೆ ಎಸೆಯುತ್ತಿ ರುವುದೇ  ಬೆಂಕಿ ಹತ್ತಿಕೊಳ್ಳಲು ಕಾರಣವಾಗಿದೆಯೆಂದು ಹೇ ಲಾಗುತ್ತಿದೆ.

ಮನೆ ಆವರಣದಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಮನೆ ಆವರಣದಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಅಡೂರು ಹೌಸ್ ನಿವಾಸಿ  ಜಿ. ಭಾಸ್ಕರ ಎಂಬವರ ಪುತ್ರ ರಾಜೇಶ್ ಜಿ. (47) ಸಾವನ್ನಪ್ಪಿದ ವ್ಯಕ್ತಿ. ಇವರು ಮೊನ್ನೆ ಸಂಜೆ ಅವರ ಮನೆ ಆವರಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದನ್ನು ಕಂಡ ಸ್ನೇಹಿತ ತಕ್ಷಣ ಮುಳ್ಳೇರಿಯ ಕೋ-ಆಪರೇಟಿವ್ ಆಸ್ಪತ್ರೆಗೆ ಸಾಗಿಸಿ ವೈದ್ಯರು ತಪಾಸಣೆ ನಡೆಸಿದಾಗ ರಾಜೇಶ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಆದೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಳ್ಳೂರು ದೇವಸ್ಥಾನದ ಕಾಣಿಕೆಹುಂಡಿ ಕಳವು

ಮುಳ್ಳೇರಿಯ: ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ಕಾಣಿಕೆ ಹುಂಡಿಯಿಂದ  ಹಣ ಕಳವು ನಡೆದ ಬಗ್ಗೆ ವರದಿಯಾಗಿದೆ.  ಎರಡು  ದಿನಗಳ ಹಿಂದೆ ಈ ಕಳವು ನಡೆದಿದೆ. ಕ್ಷೇತ್ರದ ಪ್ರವೇಶದ್ವಾರದ ಬಳಿಯಿರುವ  ಕಾಣಿಕೆ ಹುಂಡಿಯ ಬೀಗ ಮುರಿದು ಹಣ ಕಳವು ನಡೆಸಲಾಗಿದೆ. ಎರಡು ದಿನಗಳ ಹಿಂದೆ ಹುಂಡಿಯಿಂದ ಹಣ ತೆಗೆಯಲೆಂದು ದೇವಸ್ಥಾನ ಸಮಿತಿಯವರು ಅಲ್ಲಿಗೆ ಹೋದಾಗ  ಹುಂಡಿಯ ಬೀಗ ಮುರಿದಿರುವುದು ಕಂಡುಬಂದಿದೆ. ಅದರಿಂದ ಎಷ್ಟು ಹಣ ಕಳವಿಗೀಡಾಗಿದೆಯೆಂದು ಖಚಿತವಾಗಿ ತಿಳಿದುಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆ ಕ್ಷೇತ್ರ ಸಮಿತಿಯವರು ಆದೂರು ಪೊಲೀಸರಿಗೆ …

ಜಿಲ್ಲಾ ನ್ಯಾಯಾಲಯ ಸಮುಚ್ಛಯದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣ: ದಾಖಲಿಸಿ ತನಿಖೆ ಆರಂಭಿಸಿದ ಸೈಬರ್ ಪೊಲೀಸರು

ಕಾಸರಗೋಡು: ವಿದ್ಯಾನಗರದಲ್ಲಿ ರುವ ಜಿಲ್ಲಾ ನ್ಯಾಯಾಲಯ ಸಮುಚ್ಛಯದಲ್ಲಿ ನಿನ್ನೆ ಉಂಟಾದ ಹುಸಿ ಬಾಂಬ್ ಬೆದರಿಕೆ ಬಗ್ಗೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ನ್ಯಾಯಾಲಯದ ಶಿರಸ್ತೇದಾರ್ ಅನೀಶ್ ಜೋನ್ ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಲೆತ್ನಿಸುವ ಮೂಲಕ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ ಆರೋಪದಂತೆ ಈ ಪ್ರಕರಣ ದಾಖಲಿಸಲಾಗಿದೆ. ತಮಿಳು ಲಿಬರೇಶನ್ ಆರ್ಗನೈಸೇಶನ್ (ಟಿಎಲ್‌ಒ) ಎಂಬ ಹೆಸರಲ್ಲಿ ನಿನ್ನೆ ಮುಂಜಾನೆ 3.30ರ ವೇಳೆಗೆ ಜಿಲ್ಲಾ …

ರಾಜ್ಯದಲ್ಲಿ ಕನಿಷ್ಠ 40 ಸೀಟುಗಳನ್ನು  ಗೆಲ್ಲಲು ಬಿಜೆಪಿ ಗುರಿ: ಅಮಿತ್ ಶಾ ಬೆನ್ನಲ್ಲೇ ಪ್ರಧಾನಮಂತ್ರಿ ತಿರುವನಂತಪುರಕ್ಕೆ 

ತಿರುವನಂತಪುರ: ಕೇರಳದಲ್ಲಿ ವಿಧಾನಸಭಾ ಚುನಾವಣೆ ಶೀಘ್ರದಲ್ಲೇ ನಡೆಯಲಿರುವಂತೆ ಅದಕ್ಕಿರುವ ಸಿದ್ಧತೆಗಳನ್ನು ಬಿಜೆಪಿ ಆರಂಭಿಸಿದೆ. ಇದರ ಪೂರ್ವಭಾವಿಯಾಗಿ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ  ರಾಜ್ಯಕ್ಕೆ ಆಗಮಿಸಲಿದ್ದಾರೆ. ಜನವರಿ ೧೧ರಂದು ಅಮಿತ್ ಶಾ ತಿರುವನಂತಪುರಕ್ಕೆ ಆಗಮಿಸುವರು. ಎಲ್ಲಾ  ಮಂಡಲಗಳ ಮೇಲೂ ಗಮನ ಕೇಂದ್ರೀಕರಿಸುವುದರ ಬದಲು ಗೆಲುವು ಸಾಧ್ಯತೆಯುಳ್ಳ ಮಂಡಲಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲು ಬಿಜೆಪಿ ಈ ಬಾರಿ ನಿರ್ಧರಿಸಿದೆ.  ಈ ಬಾರಿ 40 ಮಂಡಲಗಳ ಮೇಲೆ ಬಿಜೆಪಿ ಮುಖ್ಯವಾಗಿ ಕಣ್ಣಿರಿಸಿರುವು ದಾಗಿ ಹೇಳಲಾಗುತ್ತಿದೆ. ಕಳೆದ …

ಹವ್ಯಾಸಿ ಯಕ್ಷಗಾನ ಕಲಾವಿದ ನಿಧನ

ಮಂಗಲ್ಪಾಡಿ: ಮಂಗಲ್ಪಾಡಿ ಪ್ರತಾಪ ನಗರ ನಿವಾಸಿ ಮಂಗಳೂರಿನ ಊರ್ವಸ್ಟೋರ್‌ನಲ್ಲಿ ವಾಸವಾಗಿರುವ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ವಸಂತ ಕುಮಾರ್ (68) ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಇವರು ಮಂಗಳೂರಿನಲ್ಲಿ ಬಿಎಸ್ ಎನ್‌ಎಲ್ ನಿವೃತ ಸೀನಿಯರ್ ಸೂಪರಿಂಟೆಂಡೆಂಟ್ ಆಗಿದ್ದರು. ಯಕ್ಷಕಲಾ ಭಾರತಿ ಮಂಗಲ್ಪಾಡಿ ಇದರ ಸದಸ್ಯರಾಗಿ ದ್ದುಕೊಂಡು ಯಕ್ಷಗಾನ, ತಾಳಮದ್ದಳೆ ಯಲ್ಲಿ ಸಕ್ರಿಯರಾಗಿದ್ದರು. ನಾಟಕ ರಂಗ ದಲ್ಲಿ, ಕೋಟಿ ಚೆನ್ನಯ್ಯ ಧಾರವಾಹಿ ಯಲ್ಲೂ ಪಾತ್ರ ಮಾಡಿದ್ದರು. ದಿ| ಆನಂದ ಮಾಸ್ತರ್ -ದಿ| ಲಕ್ಷ್ಮೀ ದಂಪತಿ ಪುತ್ರನಾ ಗಿದ್ದಾರೆ. …

ಆಟದ ಸ್ಥಳವನ್ನು ವಶಪಡಿಸುವ ಕ್ರಮದ ವಿರುದ್ಧ ಮನವಿ

ಬದಿಯಡ್ಕ: ಆಟದ ಮೈದಾನವನ್ನು ಅಳೆದು ನೀಡುವುದನ್ನು ನಿಲ್ಲಿಸಬೇಕೆಂದು ಆಗ್ರಹಸಿ ಪಂಚಾಯತ್ ಅಧ್ಯಕ್ಷರಿಗೆ ಮನವಿ ನೀಡಲಾಗಿದೆ. ಬೇಳ ವಿಲ್ಲೇಜ್‌ನ ಏಣಿಯರ್ಪ್‌ನಲ್ಲಿ ಮೂರು ದಶಕಗಳ ಕಾಲ ಉಪಯೋಗಿಸುತ್ತಿದ್ದ ಆಟದ ಮೈದಾನವನ್ನು ಕೆಲವು ದಿನಗಳ ಹಿಂದೆ ಬೇಳ ವಿಲ್ಲೇಜ್ ಆಫೀಸರ್ ಅಳತೆ ಮಾಡಿ ಗುರುತು ಹಾಕಲು ತಲುಪಿದ್ದರು. ಪರಿಸರದ ಯುವಕರು ಸೇರಿ ವಿಶ್ವಭಾರತಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ರೂಪೀಕರಿಸಿ ಸ್ಥಳೀಯ ಮಕ್ಕಳಿಗೆ ಕ್ರೀಡಾ ತರಬೇತಿ ನೀಡುವ ಸ್ಥಳವಾಗಿದೆ ಇದು. ಈ ಸ್ಥಳವನ್ನು ಈಗ ಅಳೆದು ನೀಡುವುದಕ್ಕೆ ಅಧಿಕಾರಿಗಳು ಮುಂದಾಗಿದ್ದು, ಇದನ್ನು …