ರಾಷ್ಟ್ರೀಯ ಸಹಕಾರಿ ನೀತಿಯನ್ನು ಕೇರಳದಲ್ಲಿ ಜ್ಯಾರಿಗೊಳಿಸಬೇಕು- ಸಹಕಾರ ಭಾರತಿ

ಮುಳ್ಳೇರಿಯ: ಕೇಂದ್ರ ಸಹಕಾರಿ ಸಚಿವಾಲಯ ಘೋಷಿಸಿದ ರಾಷ್ಟ್ರೀಯ ಸಹಕಾರಿ ನೀತಿಯನ್ನು ಕೇರಳದಲ್ಲಿ ಜ್ಯಾರಿಗೊಳಿಸಲು ಕೇರಳ ಸರಕಾರ ಸಿದ್ಧವಾಗಬೇಕೆಂದು ಸಹಕಾರ ಭಾರತಿ ರಾಜ್ಯ ಅಧ್ಯಕ್ಷ ನ್ಯಾ| ಕೆ. ಕರುಣಾಕರನ್ ಆಗ್ರಹಪಟ್ಟಿದ್ದಾರೆ. ಮುಳ್ಳೇರಿಯ ಗಣೇಶ ಕಲಾಮಂದಿರದಲ್ಲಿ ಜರಗಿದ ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಅಭ್ಯಾಸವರ್ಗದಲ್ಲಿ ಮುಖ್ಯ ಭಾಷಣ ಮಾಡಿ ಅವರು ಈ ಬಗ್ಗೆ ತಿಳಿಸಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುವ ಸಹಕಾರಿ ಸಂಘದ ಅಭಿವೃದ್ಧಿಗೆ ರಾಷ್ಟ್ರೀಯ ಸಹಕಾರಿ ನೀತಿ ಸಹಾಯಕವಾಗಲಿದೆ. ಸಹಕಾರಿ ನೀತಿಯಲ್ಲಿ ಘೋಷಿಸಿದ ಸೌಲಭ್ಯ ಗಳನ್ನು …

ನಕಲಿ ಮತದಾರರನ್ನು ಸೇರಿಸಲು ಲೀಗ್ ಯತ್ನಿಸುತ್ತಿದೆ ಎಂದು ಆರೋಪಿಸಿ ನಗರಸಭೆಗೆ ಸಿಪಿಎಂ ಮಾರ್ಚ್

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ನಕಲಿ ಮತದಾರರನ್ನು ಮತದಾರರ ಯಾದಿಗೆ ಸೇರ್ಪಡೆಗೊಳಿಸಲು ಮುಸ್ಲಿಂ ಲೀಗ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಸಿಪಿಎಂ ನಗರಸಭಾ ಸಮಿತಿ ನೇತೃತ್ವದಲ್ಲಿ ನಗರಸಭೆಗೆ ಮಾರ್ಚ್ ನಡೆಸಿತು. ಚುನಾವಣೆಯ ಪೂರ್ವಭಾವಿಯಾಗಿ ಮತ್ತೊಮ್ಮೆ ಮತದಾರರನ್ನು ಸೇರ್ಪಡೆಗೊಳಿಸಲು ನೀಡಿದ ಅವಕಾಶದ ಲಾಭ ಪಡೆದು ಮುಸ್ಲಿಂ ಲೀಗ್ ಈ ಯತ್ನ ನಡೆಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ. ಪ್ರಧಾನ ಅಂಚೆ ಕಚೇರಿ ಪರಿಸರದಿಂದ ಆರಂಭಗೊಂಡ ಮಾರ್ಚ್‌ಗೆ ನಗರಸಭಾ ದ್ವಾರದ ಬಳಿ ಪೊಲೀಸರು ತಡೆಯೊಡ್ಡಿದರು. ಮಾರ್ಚ್ ಹಾಗೂ ಧರಣಿಯನ್ನು ಜಿಲ್ಲಾ ಸಮಿತಿ ಸದಸ್ಯ ಟಿ.ಕೆ. …

ಚುನಾವಣೆ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಪರೀಕ್ಷೆಯಲ್ಲಿ ಬದಲಾವಣೆ ಸಾಧ್ಯತೆ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ  ಹಿನ್ನೆಲೆಯಲ್ಲಿ ರಾಜ್ಯದ ಸಾರ್ವತ್ರಿಕ ಶಿಕ್ಷಣ ಸಂಸ್ಥೆಗಳ ಕ್ರಿಸ್ಮಸ್ ಪರೀಕ್ಷೆಗಳ ದಿನಾಂಕಗಳಲ್ಲಿ ಬದಲಾವಣೆ ಯಾಗಲಿದೆ. ಅಕಾಡೆಮಿಕ್ ಕ್ಯಾಲೆಂಡರ್ ಅನುಸಾರ ದ. 11ರಿಂದ ಅರ್ಧವಾರ್ಷಿಕ ಪರೀಕ್ಷೆ ಆರಂಭವಾಗುವುದಾದರೂ  9, 11ರಂದುಮತದಾನ, 13ರಂದು ಮತ ಎಣಿಕೆ ಘೋಷಿಸಿದ ಹಿನ್ನೆಲೆಯಲ್ಲಿ ದಶಂಬರ ಪ್ರಥಮ ವಾರದಲ್ಲೇ ಪರೀಕ್ಷೆ ನಡೆಸಲು ಸಾಧ್ಯತೆ ಇದೆ. ಚುನಾವಣೆಗೆ  ಮುಂಚಿತ ಹಾಗೂ ಬಳಿಕ ಎಂಬ ರೀತಿಯಲ್ಲಿ ಎರಡು ಹಂತಗಳಲ್ಲಾಗಿ ಪರೀಕ್ಷೆ ನಡೆಸಬಹುದೇ ಎಂಬ ಬಗ್ಗೆಯೂ ಚಿಂತಿಸಲಾಗುತ್ತಿದೆ. ಶಿಕ್ಷಣ ಗುಣಮಟ್ಟ ಅವಲೋಕನ ಸಮಿತಿ ಸಭೆಯಲ್ಲಿ ಅಂತಿಮ …

ಚೆಂಗಳ ಪಂಚಾಯತ್ ಬಂಟ ಸಮಾವೇಶ; ಸಮಸ್ಯೆಗಳ ಬಗ್ಗೆ ಬಂಟರು ಒಂದಾಗಿ ಹೋರಾಟ ಅಗತ್ಯ-ಸುಬ್ಬಯ್ಯ ರೈ

ಮುಳ್ಳೇರಿಯ : ಬಂಟ ಸಮಾಜ ತಮ್ಮ ಅವಶ್ಯಕತೆಗಳ ಬಗ್ಗೆ ಹೋರಾಟಕ್ಕಿ ಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಮಿ, ಮಹಾ ದಾನಿ ಆಗಿರುವ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಮತ್ತು ಕುತ್ತಿಕ್ಕಾರು ಕೆ ಕೆ ಶೆಟ್ಟರು ಬಂಟ ಸಮಾಜದ ಸುಧಾ ರಣೆಗೆ ಬಹಳಷ್ಟು ಪ್ರಯತ್ನಿಸುತ್ತರಾ ದರೂ ಅವರಿಗೆ ಬೆಂಬಲವಾಗಿ ಬಂಟರು ಒಗ್ಗಟ್ಟಾಗಿ ನಿಲ್ಲಬೇಕಾಗಿದೆ ಹಾಗೂ ಹಕ್ಕುಗಳಿಗಾಗಿ ಹೋರಾಟಕ್ಕೆ ಮುಂದಾಗಬೇಕೆAದು ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸುಬ್ಬಯ್ಯ ರೈ ಅಭಿಪ್ರಾಯ ಪಟ್ಟರು. ನಾರಂಪಾಡಿಯ ಕುಟುಂಬಸ್ಥರ ಗುತ್ತಿನ ಮನೆಯಲ್ಲಿ ಚೆಂಗಳ …

ಜಿಲ್ಲಾ ಮಟ್ಟದ ಅಲ್‌ಬೀರ್ ಸಯನ್ಸ್ ಮ್ಯಾತ್ಸ್ ಫೇರ್ 13ರಂದು

ಕುಂಬಳೆ: ಸಮಸ್ತಾದ ಅಧೀನದಲ್ಲಿರುವ ಅಲ್‌ಬೀರ್ ಪ್ರೈಮರಿ ಮಕ್ಕಳ ಜಿಲ್ಲಾ ಮಟ್ಟದ ಸಯನ್ಸ್, ಮ್ಯಾತ್ಸ್ ಫೇರ್ ಮೊಗ್ರಾಲ್ ಪೆರುವಾಡ್ ಇಬ್ರಾಹಿಂ  ಬಾತಿಷ ಅಲ್‌ಬೀರ್‌ನಲ್ಲಿ ಈ ತಿಂಗಳ 13ರಂದು ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಅಲ್ ಬೀರ್ ಅಡ್ಮಿನಿಸ್ಟ್ರೇಟಿವ್ ಡೈರೆಕ್ಟರ್ ಪ್ರೊ. ಕೆ.ಪಿ. ಮುಹಮ್ಮದ್ ಉದ್ಘಾಟಿ ಸುವರು. ಅಧ್ಯಕ್ಷ ಹಾಜಿ ತಂಙಳ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ 18 ಶಾಲೆಗಳಿಂದಾಗಿ 400ರಷ್ಟು ಮಕ್ಕಳು ಭಾಗವಹಿಸು ವರು. ಈ ಬಗ್ಗೆ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿ ಯಲ್ಲಿ  ಪದಾಧಿಕಾರಿಗಳಾದ ಹಾದಿ ತಂಙಳ್, ಹಂದುಲ್ಲ …

ಸಹಕಾರಿ ಸಪ್ತಾಹದಂಗವಾಗಿ ಸೆಮಿನಾರ್ ಯಶಸ್ವಿಗೆ ಪೂರ್ವಭಾವಿ ಸಭೆ

ಮಂಜೇಶ್ವರ: 72 ನೇ ಸಹಕಾರಿ ಸಪ್ತಾಹದಂಗವಾಗಿ ನವೆಂಬರ್ 16ರಂದು ವರ್ಕಾಡಿ ಅಗ್ರಿಕಲ್ಚರ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆಯುವ ಸೆಮಿನಾರ್ ಯಶಸ್ವಿಗೊಳಿಸಲು ನಿನ್ನೆ ಸೊಸೈಟಿಯ ಅಧ್ಯಕ್ಷ ವಿಶ್ವನಾಥ ಕುದುರು ಇವರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು. ಕಾಸರಗೋಡು ಸರ್ಕಲ್ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಆರ್ ಜಯಾನಂದ ಉದ್ಘಾಟಿಸಿ ವಿವರಿಸಿದರು. ಮಂಜೇಶ್ವರ ತಾಲೂಕಿನ ವಿವಿಧ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಸಮಿತಿಗೆ ಅಧ್ಯಕ್ಷರಾಗಿ ವಿಶ್ವನಾಥ ಕುದುರು, (ಅಧ್ಯಕ್ಷ ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ), ಉಪಾಧ್ಯಕ್ಷರಾಗಿ ರಾಮಚಂದ್ರ …

ಕೇರಳ ಕೇಂದ್ರೀಯ ವಿವಿಯ ಘಟಿಕೋತ್ಸವ ಕಾರ್ಯಕ್ರಮ ಆರಂಭ

ಕಾಸರಗೋಡು: ಪೆರಿಯಾದಲ್ಲಿ ರುವ ಕೇರಳ ಕೇಂದ್ರೀಯ ವಿಶ್ವವಿದ್ಯಾ ಲಯದ ೯ನೇ ಘಟಿಕೋತ್ಸವ ಪ್ರಸ್ತುತ ವಿಶ್ವವಿದ್ಯಾಲಯದ ತೇಜಸ್ವಿನಿ ಹಿಲ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ನವದೆಹಲಿಯ ಡಿ.ಎನ್.ಐ.ಆರ್ ಕಾರ್ಯದರ್ಶಿ ಹಾಗೂ ಸಿಎನ್‌ಐಆರ್‌ನ ಆಡಳಿತ ನಿರ್ದೇಶಕ ಡಾ.ಎನ್. ಕಲೈಸೆಲ್ವಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕೇಂದ್ರೀಯ ವಿವಿಯ ಉಪಕುಲಪತಿ ಪ್ರೊ. ಸಿದ್ದು ಪಿ. ಅಲ್‌ಗರ್ ಅಧ್ಯಕ್ಷತೆ ವಹಿಸಿದರು. ಕೇಂದ್ರೀಯ ವಿವಿಯ ರಿಜಿಸ್ಟ್ರಾರ್ (ಉಸ್ತುವಾರಿ) ಹಾಗೂ ಕಂಟ್ರೋ ಲರ್ ಆಫ್ ಎಕ್ಸಾಮಿನೇಷನ್ ಡಾ. ಜಯಪ್ರಕಾಶ್ ಆರ್ ಕಾರ್ಯಕ್ರಮ ನಿರೂಪಿಸಿದರು.   ಪ್ರಸ್ತುತ ವಿವಿಯಲ್ಲಿ …

ಕುಂಡುಕೊಳಕೆ ಬೀಚ್ ಫೆಸ್ಟ್‌ಗೆ ಚಾಲನೆ

ಮಂಜೇಶ್ವರ: ಪ್ರಕೃತಿಯ ರಮಣೀಯತೆಯನ್ನು ಆಸ್ವಾದಿಸಬಹುದಾದ ಕುಂಡುಕೊಳಗೆ ಬೀಚ್‌ನಲ್ಲಿ ಮತ್ತೊಮ್ಮೆ ಬೀಚ್ ಫೆಸ್ಟ್ ಆರಂಭಗೊಂಡಿದೆ. ಈ ವರ್ಷದ ಬೀಚ್ ಫೆಸ್ಟ್‌ಗೆ ಸ್ಥಳೀಯ ಪ್ರತಿನಿಧಿ ಮುಂತಾಸ್ ಸಮೀರ ಚಾಲನೆ ನೀಡಿದರು. ಈ ವೇಳೆ  ಅಶ್ರಫ್ ಬಡಾಜೆ, ಹರಿಶ್ಚಂದ್ರ ಮಂಜೇಶ್ವರ, ಅಶ್ರಫ್ ಕುಂಜತ್ತೂರು, ದಯಾಕರ ಮಾಡ, ಪಂಚಾಯತ್ ಸದಸ್ಯೆ ರೇಖಾ, ಉದ್ಯಮಿ ಅಲಿಕುಟ್ಟಿ, ಅನ್ವರ್, ಆಸಿಫ್, ಹಾರಿಸ್, ಪ್ರಾಯೋಜಕರಾದ ಶಾನವಾಸ್  ಅಹ್ಮದ್, ಶೆರೀಫ್ ನ್ಯಾಷನಲ್, ಇರ್ಫಾನ್ ಉಪಸ್ಥಿತರಿದ್ದರು. ಡಿಸೆಂಬರ್ 7 ರ ತನಕ ನಡೆಯಲಿರುವ ಬೀಚ್ ಫೆಸ್ಟಿವಲ್ ಮಂಜೇಶ್ವರ ಹಾಗೂ ಆಸುಪಾಸಿನ …

ಕುಳೂರು ಶಾಲೆಯಲ್ಲಿ ಶೌಚಾಲಯ ಉದ್ಘಾಟನೆ

ಮಂಜೇಶ್ವರ: ಕುಳೂರಿನ ಸರ ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೀಂಜ ಪಂಚಾಯತ್ ವತಿಯಿಂದ ನಿರ್ಮಿಸಿದ ಶೌಚಾಲಯಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪಂಚಾಯತು ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ವಾರ್ಡ್ ಪ್ರತಿನಿಧಿ ಜನಾದÀðನ ಪೂಜಾರಿ ಕುಳೂರು, ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಸ್ವತಿ ಕೆ ಶುಭ ಹಾರೈಸಿದರು. ಇಂಜಿನಿಯರ್ ಸಾಯಿತ್ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮಾಲತಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ. ವಂದಿಸಿದರು.

ಉಪ್ಪಳದಲ್ಲಿ ಗಲ್ಫ್ ಉದ್ಯೋಗಿ ಮನೆಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಹೊಸ ತಿರುವು: ಗುಂಡು ಹಾರಿಸಿದ್ದು ಮನೆಯೊಡೆಯನ 14ರ ಹರೆಯದ ಪುತ್ರ

ಉಪ್ಪಳ:  ಉಪ್ಪಳದಲ್ಲಿ ಗಲ್ಫ್ ಉದ್ಯೋಗಿಯ ಮನೆಗೆ  ಗುಂಡು ಹಾರಿಸಲಾಯಿತೆಂಬ  ಪ್ರಕರಣಕ್ಕೆ ಹೊಸ ತಿರುವು ಮೂಡಿದೆ.  ಗುಂಡು ಹಾರಿಸಿರುವುದು ಮನೆ ಮಾಲಕನ ೧೪ರ ಹರೆಯದ ಪುತ್ರನಾಗಿದ್ದಾನೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಇದರಿಂದ ನಾಗರಿಕರು ಹಾಗೂ ಪೊಲೀಸರನ್ನು ಕಾಡುತ್ತಿದ್ದ ಆತಂಕ ದೂರವಾಗಿದೆ.  ನಿನ್ನೆ ಸಂಜೆ ಪೊಲೀಸರು ನಡೆಸಿದ ತನಿಖೆ ವೇಳೆ ಬಾಲಕ ಘಟನೆಯ ಸತ್ಯಾವಸ್ಥೆಯನ್ನು ಬಹಿರಂಗಪಡಿಸಿ ದ್ದಾನೆ. ಗುಂಡು ಹಾರಿಸಲು ಬಳಸಿದ ಏರ್‌ಗನ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮೊನ್ನೆ ಸಂಜೆ ಮನೆಗೆ ಗುಂಡು ಹಾರಿಸಿರುವುದಾಗಿ ದೂರು ಕೇಳಿಬಂದಿತ್ತು. ಘಟನೆ …