ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದ ಟ್ಯಾಂಕರ್ ಲಾರಿ ಕಸ್ಟಡಿಗೆ: ಮದ್ಯದಮಲಿನಲ್ಲಿದ್ದ ಚಾಲಕನ ಬಂಧನ

ಕುಂಬಳೆ: ಚಾಲಕನಿಗೆ ಮದ್ಯದ ಅಮಲು ನೆತ್ತಿಗೇರಿದುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಸಂಚರಿಸುತ್ತಿದ್ದ ಟ್ಯಾಂಕರ್ ಲಾರಿಯನ್ನು ಹೈವೇ ಪಟ್ರೋಲಿಂಗ್ ಅಧಿಕಾರಿಗಳು ವಶಕ್ಕೆ ತೆಗೆದು ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ. ವಿಷಯ ತಿಳಿದು ತಲುಪಿದ ಕುಂಬಳೆ ಪೊಲೀಸರು ಲಾರಿ ಚಾಲಕನಾದ ತಮಿಳುನಾಡು ತಂಜಾವೂರು ನಿವಾಸಿ  ಬಾಲಸುಬ್ರಹ್ಮಣ್ಯನ್ (48) ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ವೇಳೆ ಈ ಘಟನೆ ನಡೆದಿದೆ. ಮಂಗಳೂರು ಭಾಗದಿಂದ ಕಣ್ಣೂರಿನತ್ತ ಸಂಚರಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸಿದೆ.  ಲಾರಿ  ಅಪಾಯಕರ ರೀತಿಯಲ್ಲಿ ಸಂಚರಿಸುತ್ತಿರುವ ದೃಷ್ಯ …

ಕೊಚ್ಚಿಯಲ್ಲಿ ಮಾದಕದ್ರವ್ಯ ಸಹಿತ ಕಾಸರಗೋಡಿನ ಮೂವರ ಸೆರೆ

ಕಾಸರಗೋಡು: ಕೊಚ್ಚಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾ ಚರ ಣೆಯಲ್ಲಿ ಮಾದಕದ್ರವ್ಯದ ಸಹಿತ ಕಾಸರಗೋಡಿನ ಮೂವರನ್ನು   ಬಂಧಿಸಿದ್ದಾರೆ. ಕಾಸರಗೋಡು ಚೆಂಗಳ ರಹ್ಮತ್‌ನಗರ ಪಚ್ಚಕ್ಕಾಡ್ ವೀಟಿಲ್ ಮೊಹಮ್ಮದ್ ಅನಸ್ (21), ಪೊಯಿನಾಚಿ ಚೆರುಗರೆ ವೀಟಿಲ್ ಖಲೀಲ್ ಬದರುದ್ದೀನ್ (27) ಮತ್ತು ನುಳ್ಳಿಪ್ಪಾಡಿ ಪಿ.ಎಂ.ಎಸ್ ರಸ್ತೆ ಬಳಿಯ ರಿಫಾಯಿ ಮಂಜಿಲ್‌ನ ಎನ್.ಎಚ್. ರಾಬಿಯತ್ (39) ಬಂಧಿತರಾದ ಆರೋಪಿಗಳು ಕೊಚ್ಚಿಯ ನೋರ್ತ್ ಚಿಟ್ಟೂರು ರಸ್ತೆಯ ಅಯ್ಯಪ್ಪನ್‌ಕಾವು ಪರಿಸರದಿಂದ ಕೊಚ್ಚಿ ಸಿಟಿ ಡಾನ್ಸೆಫ್ ಪೊಲೀಸರ ತಂಡ ಇವರನ್ನು ಬಂಧಿಸಿದೆ. ಮಾತ್ರವಲ್ಲದೆ 15.91 ಗ್ರಾಂ ಅಮಲು …

ಅನಧಿಕೃತ ಮರಳುಗಾರಿಕೆ: ಮೂರು ದೋಣಿ ವಶ

ಬೋವಿಕ್ಕಾನ: ಅನಧಿಕೃತ ಮರಳುಗಾರಿಕೆ ವಿರುದ್ಧ ನಡೆಸಲಾ ಗುತ್ತಿರುವ ಕಾರ್ಯಾಚರಣೆಯನ್ನು ಪೊಲೀಸರು  ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇದರಂತೆ ಆದೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎ.ಅನಿಲ್ ಕುಮಾರ್ ನೇತೃತ್ವದ ಪೊಲೀಸರು ಪಯಸ್ವಿನಿ ಹೊಳೆಯ ಮುಳಿಯಾರು  ಆಲೂರುಕಡವಿನಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಹೊಳೆಯಿಂದ ಹೊಯ್ಗೆ ತೆಗೆಯಲು ಉಪಯೋಗಿ ಸುತ್ತಿದ್ದ ಮೂರು ದೋಣಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆ ಈ ದೋಣಿಗಳನ್ನು ಅಲ್ಲಿ ಹಗ್ಗದಿಂದ ಕಟ್ಟಿ  ನಿಲ್ಲಿಸಲಾಗಿತ್ತು. ಈ ಕಡವಿನಿಂದ ರಾತ್ರಿ ವೇಳ ಟಿಪ್ಪರ್ ಲಾರಿಗಳಲ್ಲಿ ಬಾರೀ ಪ್ರಮಾಣದಲ್ಲಿ ಹೊಯ್ಗೆ ಸಾಗಿಸಲಾಗುತ್ತಿದೆ …

ಒಂದಕ್ಕಿಂತ ಹೆಚ್ಚು ಮತದಾರ ಪಟ್ಟಿಯಲ್ಲಿ ಹೆಸರುಳ್ಳವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ-ಸುಪ್ರೀಂಕೋರ್ಟ್

ನವದೆಹಲಿ: ಒಂದಕ್ಕಿಂತ ಹೆಚ್ಚು ಮತದಾರ ಯಾದಿಯಲ್ಲಿ ಹೆಸರು ಹೊಂದಿದವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲವೆಂದು ಸ್ಪಷ್ಟಪಡಿಸಿ ಸುಪ್ರೀಂಕೋರ್ಟ್ ಮಹತ್ತರ ತೀರ್ಪು ನೀಡಿದೆ. ಒಂದಕ್ಕಿಂತ ಹೆಚ್ಚು ಮತದಾರ ಯಾದಿಯಲ್ಲಿ ಹೆಸರು ಹೊಂದಿರುವವರಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ತರಾಖಂಡ ಚುನಾವಣಾ  ಆಯೋಗ ಅನುಮತಿ ನೀಡಿ  ಅಧಿಸೂಚನೆ ಜ್ಯಾರಿಗೊಳಿಸಿತ್ತು. ಅದನ್ನು ಬಳಿಕ ಉತ್ತರಾಖಂಡ ಹೈಕೋರ್ಟ್ ರದ್ದುಪಡಿಸಿತ್ತು.  ಆ ತೀರ್ಪಿನ ವಿರುದ್ಧ ಉತ್ತರಾಖಂಡ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ ಮೇಲ್ಮನವಿ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಂನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾರನ್ನೊಳಗೊಂಡ ಸುಪ್ರೀಂಕೋರ್ಟ್‌ನ …

ಶಾಲಾ ಪರಿಸರದ ಅಂಗಡಿಗಳಲ್ಲಿ ತಪಾಸಣೆ : ನಾಲ್ಕು ಕಿಲೋ ತಂಬಾಕು ಉತ್ಪನ್ನ ವಶ

ಕುಂಬಳೆ: ವಿವಿಧೆಡೆಗಳಲ್ಲಿ ಶಾಲಾ ಪರಿಸರದ ವ್ಯಾಪಾರ ಸಂಸ್ಥೆಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ನಡೆಯುತ್ತಿದೆಯೆಂಬ ಮಾಹಿತಿಯಂತೆ ಅಬಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳು ಸಂಯುಕ್ತವಾಗಿ  ತಪಾಸಣೆ ನಡೆಸಿದ್ದಾರೆ. ಈ ವೇಳೆ ನಾಲ್ಕು ಕಿಲೋ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಈ ಸಂಬಂಧ  ಅಂಗಡಿ ಮಾಲಕನಿಂದ 3000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.  ಕುಂಬಳೆ ಅಬಕಾರಿ ರೇಂಜ್ ಕಚೇರಿ ಹಾಗೂ ಮಂಜೇಶ್ವರ ಆರೋಗ್ಯ ಇಲಾಖೆ ಅಧಿಕಾರಿಗಳು ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಹೊಸಂಗಡಿ, ಉದ್ಯಾವರ, ಕುಂಜತ್ತೂರು ಎಂಬಿಡೆಗಳ ಅಂಗಡಿಗಳಲ್ಲಿ ಪರಿಶೀಲನೆ ನಡೆಸಲಾಗಿದೆ. …

ಕಾರು-ಬೈಕ್ ಢಿಕ್ಕಿ ಇಬ್ಬರಿಗೆ ಗಾಯ

ಉಪ್ಪಳ: ಹೊಸಂಗಡಿ ಸರ್ವೀಸ್ ರಸ್ತೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಾಹನ ಅಪಘಾತದಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯ ಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖ ಲಿಸಲಾಗಿದೆ. ನಿನ್ನೆ ರಾತ್ರಿ 11.45 ರ ವೇಳೆ ಅಪಘಾತವುಂಟಾಗಿದೆ. ಹೊಸಂಗಡಿ ಭಾಗದಿಂದ ತಲಪಾಡಿಯತ್ತ ತೆರಳುತ್ತಿದ್ದ ಕಾರು ಹಾಗೂ ಎದುರು ಭಾಗದಿಂದ ಬರುತ್ತಿದ್ದ ಬೈಕ್ ಪರಸ್ಪರ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಗಾಯಗೊಂಡವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆಯೆಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.

ಓಣಂ ಬಂಪರ್ ಡ್ರಾ ಅ. 4ಕ್ಕೆ ಮುಂದೂಡಿಕೆ

ತಿರುವನಂತಪುರ: ಇಂದು ನಡೆಯಬೇಕಾಗಿದ್ದ ಓಣಂ ಬಂಪರ್ ಲಾಟರಿಯ ಡ್ರಾವನ್ನು ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ. ಜಿಎಸ್‌ಟಿಯಲ್ಲಿ ಕೈಗೊಳ್ಳಲಾಗಿ ರುವ ಸುಧಾರಣಾ ಕ್ರಮ, ಮಳೆ, ಹವಾಮಾನ ವೈಪರೀತ್ಯ ಇತ್ಯಾದಿ ಕಾರಣಗಳಿಂದಾಗಿ ಲಾಟರಿ ಟಿಕೆಟ್ ಮಾರಾಟವನ್ನು ಪೂರ್ತೀಕರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಡ್ರಾವನ್ನು ಮುಂದೂಡಬೇಕೆಂದು  ಲಾಟರಿ ಟಿಕೆಟ್ ಮಾರಾಟ ಏಜೆನ್ಸಿಗಳು ಮತ್ತು  ಮಾರಾಟಗಾರರು ಆಗ್ರಹಪಟ್ಟಿದ್ದರು. ಅದನ್ನು ಪರಿಗಣಿಸಿ ಇಂದು ನಡೆಯಬೇಕಾಗಿದ್ದ ಡ್ರಾವನ್ನು ಹಣಕಾಸು ಇಲಾಖೆ ಅ. ೪ಕ್ಕೆ ಮುಂದೂಡಿದೆ.

ಅಂಗಡಿಯ ಗೋಡೆ ಕೊರೆದು ಮೂರು ಗೋಣಿ ಚೀಲ ಕಾಳುಮೆಣಸು ಕಳವು

ಕಾಸರಗೋಡು: ಕಾಡುತ್ಪನ್ನ ಅಂಗಡಿಯ ಗೋಡೆ ಕೊರೆದು ಒಳನುಗ್ಗಿದ ಕಳ್ಳರು ಮೂರು ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಒಂದೂವರೆ ಕ್ವಿಂಟಾಲ್ ಕಾಳುಮೆಣ ಸನ್ನು ಕಳವುಗೈದ ಘಟನೆ ನಡೆದಿದೆ. ಹೊಸದುರ್ಗ ಮಾವುಂಗಾಲ್ ರಾಷ್ಟ್ರೀಯ ಹೆದ್ದಾರಿ ಬಳಿ ಕಾರ್ಯವೆಸಗುತ್ತಿರುವ ವೆಳ್ಳಿಕ್ಕೋತ್ ನಿವಾಸಿ ಬಿ. ಗುರುದತ್ತ್ ಪ್ರಭು ಎಂಬವರ ಆರ್ಯ ದುರ್ಗಾ ಟ್ರೇಡರ್ಸ್ ಎಂಬ ಅಂಗಡಿಯಲ್ಲಿ ಈ ಕಳವು ನಡೆದಿದೆ.  ಮಾಲಕ ನಿನ್ನೆ ಬೆಳಿಗ್ಗೆ ಅಂಗಡಿ ಬಾಗಿಲು ತೆಗೆಯಲು ಬಂದಾಗ ಕಳವು ನಡೆದ ವಿಷಯ ಅವರ ಗಮನಕ್ಕೆ ಬಂದಿದೆ. ಒಂದು ಲಕ್ಷ ರೂಪಾಯಿ ಮೌಲ್ಯದ …

ಕುಂಬಳೆ ಪೇಟೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ: ವಿಜಿಲೆನ್ಸ್‌ನಿಂದ ತನಿಖೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಹಾಗೂ ಅದಕ್ಕೆ ಪಂಚಾಯತ್ ಆಡಳಿತ ಸಮಿತಿ ಒತ್ತಾಸೆ ನೀಡುತ್ತಿದೆ ಎಂಬ ಆರೋಪದ ಕುರಿತು ವಿಜಿಲೆನ್ಸ್ ತನಿಖೆ ಆರಂಭಗೊಂಡಿದೆ. ವಿಜಿಲೆನ್ಸ್ ಡಿವೈಎಸ್‌ಪಿ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ತಲುಪಿದ ವಿಜಿಲೆನ್ಸ್ ತಂಡ ಕಟ್ಟಡನಿರ್ಮಾಣ ಹಾಗೂ ಅದಕ್ಕೆ ಪಂಚಾಯತ್ ನೀಡಿದ ಅನುಮತಿಯ ಕುರಿತಾದ ಕಡತಗಳನ್ನು ಪರಿಶೀಲಿಸಿದೆ. ಮಾತ್ರವಲ್ಲದೆ ಹೆಚ್ಚಿನ ತನಿಖೆಗೆ ಅಗತ್ಯವುಳ್ಳ ಕಡತಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆರೋಪಕ್ಕೆಡೆಯಾದ ಕುಂಬಳೆ ಪೇಟೆಯ ಕೆಲವು ಕಟ್ಟಡಗಳನ್ನು ಅಳತೆ ಮಾಡಿ ವಿಜಿಲೆನ್ಸ್ ತಂಡ ಪರಿಶೀಲಿಸಿದೆ. ಕುಂಬಳೆ ಪಂಚಾಯತ್ …

ಒಂಭತ್ತು ಜಿಲ್ಲೆಗಳಿಗೆ ಮಳೆ ಎಚ್ಚರಿಕೆ

ತಿರುವನಂತಪುರ: ಅತಿ ತೀವ್ರ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡು ಸಹಿತ 9 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಘೋಷಿಸಿದೆ. ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ ಜಿಲ್ಲೆಗಳಲ್ಲಿ ಅತಿ ತೀವ್ರ ಮಳೆಯ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಎರ್ನಾಕುಲಂ, ಇಡುಕ್ಕಿ, ತ್ರಿಶೂರು, ಪಾಲಕ್ಕಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಜತೆ ಭಾರೀ ಬಿರುಗಾಳಿ, ಸಿಡಿಲು, ಮಿಂಚು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇಂದು ಕೇರಳ, ಕರ್ನಾಟಕ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ