ಮಂಗಲ್ಪಾಡಿ: ಪಂಜ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ೨೭ನೇ ವರ್ಷದ ಶ್ರೀ ಅಯ್ಯಪ್ಪ ಭಜನೋತ್ಸವ ಸಮಾಪ್ತಿಗೊಂಡಿತು. ಗುರುಸ್ವಾಮಿ ಈಶ್ವರ ಪಂಜ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ವೇಳೆ ಮಂದಿರ ಸಮಿತಿ ಪದಾಧಿಕಾರಿಗಳಾದ ಕೇಶವ ಪಂಜ, ಹೇಮರಾಜ ಶೆಟ್ಟಿ ಪಂಜ, ರಾಮ ಚಂದ್ರ ಬಲ್ಲಾಳ್, ರವೀಂದ್ರ ಪಂಜ ಉಪಸ್ಥಿತರಿದ್ದರು. ಮಧ್ಯಾಹ್ನ ಮಹಾ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಭಜನೋತ್ಸವ ಮಂಗಳಾರತಿ, ಕುಣಿತ ಭಜನೆ, ಶರಣು ಕರೆಯುವುದು, ನೃತ್ಯ ವೈವಿದ್ಯ, ಭಕ್ತಿಭಾವ ಸಂಗೀತ ನಡೆಯಿತು.







