ಯುವಕನಿಗೆ ಇರಿತ: ಇಬ್ಬರ ವಿರುದ್ಧ ನರಹತ್ಯಾಯತ್ನ ಕೇಸು ದಾಖಲು

ಕಾಸರಗೋಡು: ಕೂಡ್ಲು ಉಳಿಯತ್ತಡ್ಕ ನೇಶನಲ್ ನಗರದಲ್ಲಿ ನಿನ್ನೆ ಮಧ್ಯಾಹ್ನ ಯುವಕರ ಮಧ್ಯೆ ಘರ್ಷಣೆಯುಂಟಾಗಿ ಅದರಲ್ಲಿ ಓರ್ವ ಇರಿತಕ್ಕೊಳಗಾದ ಘಟನೆ ನಡೆದಿದೆ.  ಉಳಿಯತ್ತಡ್ಕ ನೇಶನಲ್ ನಗರದ ಶಬಾನ ಮಂಜಿಲ್ ನಿವಾಸಿ ಮೊಹಮ್ಮದ್ ಸಲಾಲ್ ಅಕ್ತರ್ (21) ಇರಿತಕ್ಕೊಳಗಾದ ಯುವಕನಾಗಿದ್ದಾನೆ. ಆತ ನೀಡಿದ ದೂರಿನಂತೆ ಕುಂಬಳೆ ನಾಯ್ಕಾಪು ನಿವಾಸಿಗಳಾದ ಅಮಾನ್ ಮತ್ತು ಅನಾನ್ ಎಂಬಿಬ್ಬರ ವಿರುದ್ಧ ಕಾಸರಗೋಡು ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ನೇಶನಲ್ ನಗರದಲ್ಲಿ ನನ್ನನ್ನು ತಡೆದು ನಿಲ್ಲಿಸಿ ಇರಿದು, ತುಳಿದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಗಾಯಾಳು ಮೊಹಮ್ಮದ್ ಸಲಾಲ್ ಅಕ್ತ್ತರ್ ಆರೋಪಿಸಿದ್ದಾನೆ.

You cannot copy contents of this page