ಬಾಲಡ್ಕ: ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ಸಾರ್ವಜನಿಕ ಸಾರಿಗೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕಾಸರಗೋಡನ್ನು ದೇಶದಲ್ಲೇ ಮಾದರಿ ನಗರವಾಗಿ ರೂಪಿಸ ಲಾಗುವುದು ಎಂದು ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಹೇಳಿದರು.
ರಾತ್ರಿ ಒಂಬತ್ತೂವರೆ ನಂತರ ಜನಸಂದಣಿ ಇಲ್ಲದ ರಾಜ್ಯದ ಏಕೈಕ ಜಿಲ್ಲಾ ಕೇಂದ್ರವೆAದರೆ ಅದು ಕಾಸರಗೋಡು. ಜಿಲ್ಲೆಯ ಇತರ ಮಧ್ಯಮ ಪಟ್ಟಣಗಳಿಗೆ ಹಾಗೂ ಮಂಗಳೂರು, ಕಾಞಂಗಾಡ್ಗಳಿಗೆ ರಾತ್ರಿ ಸಮಯದಲ್ಲಿ ಬಸ್ ಸೌಕರ್ಯವಿಲ್ಲ. ಕೆಎಸ್ಆರ್ಟಿಸಿ ಕಾಸರಗೋಡು ಜಿಲ್ಲೆಯನ್ನು ನಿರ್ಲಕ್ಷಿಸಿದೆ ಎಂದು ಅಶ್ವಿನಿ ಟೀಕಿಸಿದರು. ಮಹಿಳೆಯರಿಗೆ ಸÀÄರಕ್ಷಿತ ಹಾಗೂ ಕಡಿಮೆ ವೆಚ್ಚದ ಡಾರ್ಮಿಟರಿ ಸೇರಿದಂತೆ ವಸತಿ ಸೌಕರ್ಯಗಳನ್ನು ಖಚಿತಪಡಿಸಲಾಗುವುದು ಎಂದು ಅಶ್ವಿನಿ ಎಂ. ಎಲ್.ತಿಳಿಸಿದರು.






