ಕೊಯ್ಯೋಡ್ ಉಮರ್ ಮುಸ್ಲಿಯಾರ್ ಸಂಯುಕ್ತ ಜಮಾಯತ್ ಖಾಝಿ

ಕಾಸರಗೋಡು: ಸಮಸ್ತ ಕೇಂದ್ರ ಮುಶಾವರ ಕೋಶಾಧಿಕಾರಿಯಾದ ಕೊಯ್ಯೋಡ್ ಉಮರ್ ಮುಸ್ಲಿಯಾರ್ ರನ್ನು ಕಾಸರಗೋಡಿನ ಸಂಯುಕ್ತ ಜಮಾಯತ್ ಖಾಝಿಯಾಗಿ ನೇಮಕ ಗೊಳಿಸಲು ಸಂಯುಕ್ತ ಜಮಾಯತ್ ತೀರ್ಮಾನಿಸಿದೆ. ಅಧ್ಯಕ್ಷ ಎನ್.ಎ. ನೆಲ್ಲಿಕುನ್ನುರ ಅಧ್ಯಕ್ಷತೆಯಲ್ಲಿ ಜರಗಿದ ಸಂಯುಕ್ತ ಮುಸ್ಲಿಂ ಜಮಾಯತ್ ಸಮಿತಿ ಸದಸ್ಯರ ಹಾಗೂ ಮಾಲಿಕ್ ದೀನಾರ್ ವಲಿಯ ಜುಮುಯತ್ ಮಸೀದಿ ಅಧ್ಯಕ್ಷ, ಕಾರ್ಯದರ್ಶಿಗಳ ಜಂಟಿ ಸಭೆ ಯಲ್ಲಿ ಈ ತೀರ್ಮಾನ ಕೈಗೊಳ್ಳಲಾ ಗಿದೆ. ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್‌ರ ನಿಧನದ ಹಿನ್ನೆಲೆಯಲ್ಲಿ ಹೊಸ ಖಾಝಿಯವರ ನೇಮಕ ನಡೆದಿದೆ.

RELATED NEWS

You cannot copy contents of this page