ಉಪ್ಪಳ: ಜಿಲ್ಲಾ ಪಂಚಾಯತ್ ಮಂಜೇಶ್ವರ ಡಿವಿಶನ್ ಎಡರಂಗದ ಚುನಾವಣಾ ಕಚೇರಿಯನ್ನು ಎನ್ಸಿಪಿಎಸ್ ಜಿಲ್ಲಾ ಅಧ್ಯಕ್ಷ ಕರೀಂ ಚಂದೇರ ಉದ್ಘಾಟಿಸಿದರು. ಕೈಕಂಬ- ಬಾಯಾರ್ ರಸ್ತೆಯಲ್ಲಿನ ಕಟ್ಟಡದಲ್ಲಿ ಕಚೇರಿ ಆರಂಭಗೊಂಡಿದೆ. ಚುನಾವಣಾ ಸಮಿತಿ ಅಧ್ಯಕ್ಷ ಪ್ರಶಾಂತ್ ಕನಿಲ ಅಧ್ಯಕ್ಷತೆ ವಹಿಸಿದರು. ಹಮೀದ್ ಕೋಸ್ಮೋಸ್ ಎನ್ಸಿಪಿ ರಾಜ್ಯ ಕಾರ್ಯದರ್ಶಿ ಸಿ. ಬಾಲನ್, ಅಭ್ಯರ್ಥಿ ಖದೀಜ ಮೊಗ್ರಾಲ್, ಬ್ಲೋಕ್ ಪಂ. ಅಭ್ಯರ್ಥಿಗಳಾದ ವಾಣಿಶ್ರೀ, ಆಯಿಷಾ ಟಿ, ನಾರಾಯಣನ್, ಸಿದ್ದಿಕ್ ಕೈಕಂಬ, ಸುಬೈರ್ ಪಡ್ಪು, ಉದಿನೂರು ಸುಕುಮಾರನ್, ಅಬ್ದುಲ್ ರಹ್ಮಾನ್ ಹಾಜಿ, ಸುರೇಂದ್ರನ್ ಮಾತನಾಡಿದರು. ಮುಹಮ್ಮದ್ ಆನೆಬಾಗಿಲು ಸ್ವಾಗತಿಸಿದರು.







