ಕಾಸರಗೋಡಿಗೆ ನೂತನ ಜಿಲ್ಲಾಧಿಕಾರಿ ನೇಮಕ

ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಭಶೇಖರ್‌ರನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ. ಇವರ ಬದಲಿಗೆ ಕಾಸರಗೋಡು ಜಿಲ್ಲಾಧಿಕಾರಿಯಾಗಿ ತೃಶೂರು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್‌ರನ್ನು ನೇಮಿಸಲಾಗಿದೆ. ರಾಜ್ಯದ ಅತ್ಯುತ್ತಮ ಜಿಲ್ಲಾಧಿಕಾರಿಗಿರುವ ಪ್ರಶಸ್ತಿಯನ್ನು ಗಳಿಸಿರುವ ಅರ್ಜುನ್ ಪಾಂಡ್ಯನ್ ಇಡುಕ್ಕಿ ನಿವಾಸಿಯಾಗಿದ್ದಾರೆ.  ತೋಟ ವಲಯದ  ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅರ್ಜುನ್ ಪಾಂಡ್ಯನ್ 2017 ರಲ್ಲಿ ಸಿವಿಲ್ ಸರ್ವೀಸ್‌ಗೆ  ತಲುಪಿದ್ದರು. ಇದೇ ವೇಳೆ ತೃಶೂರು   ಜಿಲ್ಲಾಧಿಕಾರಿಯಾಗಿ ಟೂರಿಸಂ ಡೈರೆಕ್ಟರ್ ಶಿಖಾ ಸುರೇಂದ್ರನ್‌ರನ್ನು ನೇಮಿಸಲಾಗಿದೆ.

You cannot copy contents of this page