ನೀರ್ಚಾಲು: ಮಾನ್ಯ ಕಾರ್ಮಾರು ನಿವಾಸಿ ನಿವೃತ್ತ ಅಧ್ಯಾಪಕ, ಕೃಷಿಕ ಕಾರಿಂಜ ವೆಂಕಪ್ಪ ಶೆಟ್ಟಿ (94) ನಿಧನ ಹೊಂದಿದರು. ಎಡನೀರು, ಕಡಂಬಳ ಸಹಿತ ಹಲವಾರು ಶಾಲೆಗಳಲ್ಲಿ ಅಧ್ಯಾಪಕನಾಗಿದ್ದರು. ಇವರ ಪತ್ನಿ ರತ್ನಾವತಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ವಿಶಾಲಾಕ್ಷಿ, ವಿನುತ, ವಿನೋದಿನಿ, ಅಳಿಯಂದಿರಾದ ಮಹಾಬಲ, ಪ್ರಸನ್ನ, ಸುಧೀರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







