ಬದಿಯಡ್ಕ: ವೃಕ್ಷಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕರ ನಿಧನಕ್ಕೆ ಜಿ.ಕೆ. ಚಾರಿಟೇಬಲ್ ಟ್ರಸ್ಟ್ ವಾಂತಿಚ್ಚಾಲು ಇವರ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಅಶ್ರುತರ್ಪಣ ಕಾರ್ಯಕ್ರಮ ಜರಗಿತು. ಡಾ. ಶ್ರೀನಿಧಿ ಸರಳಾಯ ಪುಷ್ಪಾರ್ಚನೆ ಗೈದು ನುಡಿನಮನ ಸಲ್ಲಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದರು. ಅವರು ಮಾತನಾಡಿ, ಸಾಲು ಮರದ ತಿಮ್ಮಕ್ಕ ಅವರ ಹೆಸರು ಸದಾ ಹಸಿರಾಗಿರುವಂತೆ ನೋಡಿಕೊ ಳ್ಳಲು ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಗಿಡವನ್ನು ನೆಟ್ಟು ಸದಾ ಕಾಲ ಪೋ ಷಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಕೇರಳದ ಪಠ್ಯಪುಸ್ತಕದಲ್ಲಿಯೂ ಅವರ ಜೀವನ ಚರಿತ್ರೆ ಮೂಡಿ ಬರಬೇಕೆಂಬ ಆಶಯ ನಮ್ಮದಾಗಿದೆ ಎಂದರು. ಜಿ.ಕೆ. ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಪ್ರಸ್ತಾಪಿಸಿದರು. ನಿವೃತ್ತ ಅಧ್ಯಾಪಕ ವೆಂಕಟ್ರಾಜ ವಾಶೆಮನೆ, ಹರೀಶ್ ನಾರಂಪಾಡಿ, ವ್ಯಾಪಾರಿ ವ್ಯವಸಾಯ ಏಕೋಪನಾ ಸಮಿತಿ ಅಧ್ಯಕ್ಷ ನರೇಂದ್ರ ಬದಿಯಡ್ಕ, ಉದಯ ಮನ್ನಿಪ್ಪಾಡಿ, ಜಗನ್ನಾಥ ರೈ, ಸಂತೋಷ್ ರೈ, ದಯಾನಂದ ರೈ, ಪಾಂಡುರಂಗ ಪ್ರಭು, ಜಗನ್ನಾಥ ರೈ ಕೊರೆಕ್ಕಾನ, ಜಗದೀಶ್ ಜೋಗಿ, ಜಿಶನ್ ವಾಂತಿಚ್ಚಾಲು, ಶ್ಯಾಮ್ಪ್ರಸಾದ್ ಸರಳಿ ಭಾಗವಹಿಸಿದರು. ಅಭಿಷೇಕ್ ಬದಿಯಡ್ಕ ವಂದಿಸಿದರು.







