ಉಪ್ಪಳ: ರಸ್ತೆ ಬದಿಯಲ್ಲಿರುವ ಮರದ ರೆಂಬೆಗಳು ಯಾವುದೇ ಕ್ಷಣ ವಿದ್ಯುತ್ ತಂತಿ ಮೇಲೆ ಮುರಿದು ಬೀಳುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಮೂಲಕ ಹಾದುಹೋಗುವ ಮೂಸೋಡಿ ರಸ್ತೆಯಲ್ಲಿ ಅಪಾಯಕಾರಿ ಮರಗಳಿಂದ ಆತಂಕ ಸೃಷ್ಟಿಯಾಗಿದೆ. ಈ ಪರಿಸರದಲ್ಲಿ ಬೃಹತ್ ಮರಗಳು, ತೆಂಗಿನ ಮರಗಳು ವಿದ್ಯುತ್ ತಂತಿ ಮೇಲೆ ಭಾಗಿಕೊಂಡಿವೆ. ಪ್ರಮುಖ ವಿದ್ಯುತ್ ತಂತಿಗಳು ಮನೆಗಳಿಗೆ, ವ್ಯಾಪಾರ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಮರಗಳ ರೆಂಬೆಗಳು ಮಳೆಗಾಲದಲ್ಲಿ ಯಾವುದೇ ಕ್ಷಣದಲ್ಲಿ ಮುರಿದು ಬಿದ್ದರೆ ಹಲವು ಕಂಬಗಳು, ತಂತಿ ಧರಾಶಾಯಿಯಾಗಿ ದುರಂತ ಸಂಭವಿಸಬುಹುದಾಗಿದೆ. ಈ ರಸ್ತೆಯಿಂದ ಮೂಸೋಡಿ, ಹಾರ್ಬರ್, ಮಣಿಮುಂಡ, ಶಾರದಾನಗರ ಸಹಿತ ಹಲವು ಪ್ರದೇಶಗಳಿಗೆ ಸಂಚರಿಸು ವವರು ಭಯಭೀತರಾಗುತ್ತಿದ್ದಾರೆ. ಮಳೆ ಗಾಳಿಗೆ ಪದೇ ಪದೇ ತಂತಿ ಮೇಲೆ ಸಣ್ಣಪುಟ್ಟ ರೆಂಬೆಗಳು ಬೀಳುವುದು ಸಾಮಾನ್ಯವಾಗಿರುವುದಾಗಿ ದೂರಲಾಗಿದೆ. ಸಂಬAಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ ವಿದ್ಯುತ್ ತಂತಿ ಮೇಲೆ ಇರುವ ಮರದ ರೆಂಬೆಗಳನ್ನು ಕಡಿದು ಉಂಟಾಗುವ ಅನಾಹುತವನ್ನು ತಪ್ಪಿಸಬೇಕೆಂದು ಊರವರು ಆಗ್ರಹಿಸಿದ್ದಾರೆ.







