ಕಾರಿನಲ್ಲಿ ಸಾಗಿಸುತ್ತಿದ್ದ 10ಸಾವಿರ ಪ್ಯಾಕೆಟ್ ತಂಬಾಕು ಉತ್ಪನ್ನ ವಶ: ಓರ್ವ ಸೆರೆ

ಮಂಜೇಶ್ವರ: ಕರ್ನಾಟಕ ಭಾಗದಿಂದ ಕಾರಿನಲ್ಲಿ ಸಾಗಿಸುತ್ತಿದ್ದ ಹತ್ತು ಸಾವಿರದಷ್ಟು ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳ ಸಹಿತ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ.

ಕಣ್ಣೂರು ಕನಿಯೇರಿ ಎಂಬಲ್ಲಿನ ಅಜ್ಮಲ್ ಇರ್ಫಾನ್ (23) ಎಂಬಾತ ಬಂಧಿತ ಆರೋಪಿ. ಈತ ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ  ಅದರಲ್ಲಿ ತಂಬಾಕು ಉತ್ಪನ್ನ ಪತ್ತೆಯಾಗಿದೆ.

ಮಂಜೇಶ್ವರ ಠಾಣೆ ಸಬ್ ಇನ್ ಸ್ಪೆಕ್ಟರ್ ರತೀಶ್‌ಗೋಪಿ, ಎಎಸ್‌ಐ ಸದನ್, ಸಿಪಿಒಗಳಾದ ರಜೀಶ್ ಕಾಟಾಂಬಳ್ಳಿ, ನಿತಿನ್ ಕುಮಾರ್, ಅನೀಶ ಎಂಬಿವರು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.

RELATED NEWS

You cannot copy contents of this page