ಕಾರು- ಸ್ಕೂಟರ್ ಢಿಕ್ಕಿ: ಸಹೋದರಿಯರಿಗೆ ಗಾಯ; ಆಸ್ಪತ್ರೆಗೆ

ಕುಂಬಳೆ: ಕುಂಬಳೆ ಬದಿಯಡ್ಕ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಕಾರು- ಸ್ಕೂಟರ್ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರರಾದ ಸಹೋದರಿ ಯರು ಗಾಯಗೊಂಡರು. ನಾಯ್ಕಾಪು ನಾರಾಯಣಮಂಗಲ ನಿವಾಸಿ ಚೈತನ್ಯ (೨೨)ರಿಗೆ ಗಂಭೀರ ಗಾಯಗೊಂಡಿದ್ದು ಇವರನ್ನು ಮಂಗಳೂರಿನ ಆಸ್ಪತ್ರೆಗೂ, ಗಾಯಗೊಂಡ ಚೈತ್ರಾ (೨೦)ರನ್ನು ಕಾಸರಗೋಡಿನ ಆಸ್ಪತ್ರೆಗೂ ದಾಖಲಿಸಲಾಗಿದೆ. ನಿನ್ನೆ ಸಂಜೆ ಅಪಘಾತ ಸಂಭವಿಸಿದೆ.

Leave a Reply

Your email address will not be published. Required fields are marked *

You cannot copy content of this page