ಕಾಸರಗೋಡು ಕೇಂದ್ರೀಯ ವಿವಿಯಲ್ಲಿ ಉದ್ಯೋಗ ಭರವಸೆ ಬಾಯಾರು ನಿವಾಸಿ ಯುವತಿಗೆ 13,80,000 ರೂ. ವಂಚನೆ
ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಗಳ ಸಂಸ್ಥೆಗಳಲ್ಲಿ ಕೆಲಸದ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ವಂಚಿಸಿದ ಮಾಜಿ ಡಿವೈಎಫ್ಐ ಮುಖಂಡೆ, ಅಧ್ಯಾಪಿಕೆ ಯಾಗಿರುವ ಪುತ್ತಿಗೆ ಬಾಡೂರಿನ ಸಚಿತಾ ರೈ ವಿರುದ್ಧ ಮಂಜೇಶ್ವರ ಪೊಲೀಸರು ಇನ್ನೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರೊಂ ದಿಗೆ ಸಚಿತಾ ರೈ ವಿರುದ್ಧದ ವಂಚನಾ ಪ್ರಕರಣಗಳಸಂಖ್ಯೆ 20 ದಾಟಿದೆ. ಬಾಯಾರು ಧರ್ಮತ್ತಡ್ಕ, ಕರುವಾಜೆಯ ಮರಿಯಮ್ಮತ್ ಸಫೂರಳ ದೂರಿನಂತೆ ಸಚಿತಾ ರೈ ವಿರುದ್ಧ ಮಂಜೇಶ್ವರ ಪೊಲೀಸರು ಕೊನೆಯದಾಗಿ ಕೇಸು ದಾಖಲಿಸಿದ್ದಾರೆ.
ಕಾಸರಗೋಡು ಕೇಂದ್ರೀಯ ವಿದ್ಯಾಲಯದಲ್ಲಿ ಸೀನಿಯರ್ ಕ್ಲಾರ್ಕ್ ಉದ್ಯೋಗ ಭರವಸೆ ನೀಡಿ 13,80,000 ರೂ. ವಂಚಿಸಿರುವುದಾಗಿ ಮರಿಯಮ್ಮತ್ ಸಫೂರ ದೂರು ನೀಡಿದ್ದಾಳೆ. 2023 ಡಿಸೆಂಬರ್ 13ರಿಂದ 2024 ಎಪ್ರಿಲ್ 30ರ ವರೆಗಿರುವ ಕಾಲಾವಧಿಯಲ್ಲಿ ಹಣ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದೇ ರೀತಿಯ 20ರಷ್ಟು ಪ್ರಕರಣಗಳಲ್ಲಿ ಆರೋಪಿ ಯಾದ ಸಚಿತಾ ರೈ ಸೆರೆಯಾಗಿ ಕಣ್ಣೂರಿನ ಮಹಿಳಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಆರ್ಥಿಕ ವಂಚನೆ ಪ್ರಕರಣಗಳಲ್ಲಿ ಆರೋಪಿಯಾದ ಹಿನ್ನೆಲೆಯಲ್ಲಿ ಸಚಿತಾಳನ್ನು ಡಿವೈಎಫ್ಐ ಸಂಘಟನೆಯಿAದ ಹೊರ ಹಾಕಿತ್ತು.