ಕುಂಬಳೆ ಅಬ್ದುಲ್ಲರ ಚಿಕಿತ್ಸೆಗೆ ಕೆಜೆಯು ಸಂಗ್ರಹಿಸಿದ 2 ಲಕ್ಷ ರೂ. ಹಸ್ತಾಂತರ

ಕುಂಬಳೆ: ಎರಡು ಕಿಡ್ನಿಗಳು ವೈಫಲ್ಯಗೊಂಡು ಚಿಕಿತ್ಸೆಯಲ್ಲಿರುವ ಕುಂಬಳೆಯ ಪತ್ರಕರ್ತ ಅಬ್ದುಲ್ಲರ  ಚಿಕಿತ್ಸೆಗಾಗಿ ಕೇರಳ ಜರ್ನಲಿಸ್ಟ್ ಯೂನಿಯನ್ (ಕೆಜೆಯು) ರಾಜ್ಯ ಸಮಿತಿ ಸಂಗ್ರಹಿಸಿದ 2 ಲಕ್ಷ ರೂಪಾ ಯಿಗಳನ್ನು ಅಬ್ದುಲ್ಲರಿಗೆ ಹಸ್ತಾಂತರಿಸಲಾ ಯಿತು. ಕೆಜೆಯು ರಾಜ್ಯ ಸಮಿತಿ ಪ್ರತೀ ಜಿಲ್ಲೆಯಲ್ಲಿ ಹಾಗೂ ಆಯಾ ಜಿಲ್ಲಾ ಸಮಿತಿಗಳ ಮುಖಾಂತರ ಸದಸ್ಯರಿಂದ ಹಣ ಸಂಗ್ರಹಿಸಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಸ್ಮಿಜ ಅವರ ನೇತೃತ್ವದಲ್ಲಿ ಅಬ್ದುಲ್ಲರ ಮನೆಗೆ ತಲುಪಿ ಮೊತ್ತವನ್ನು ಹಸ್ತಾಂತರಿಸಲಾಯಿತು. ಕೆಜೆಯು ರಾಜ್ಯ ಕೋಶಾಧಿಕಾರಿ ಇ.ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷ ಪ್ರಕಾ ಶನ್ ಪಯ್ಯನ್ನೂರು, ಕಾರ್ಯದರ್ಶಿ ಪ್ರಮೋದ್ ಕುಮಾರ್, ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್, ಜಿಲ್ಲಾ ಕಾರ್ಯದರ್ಶಿ ಸುರೇಶ್ ಕೂಕಲ್, ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಸಾಜು ಚೆಂಬೇರಿ, ಉಪಾಧ್ಯಕ್ಷ ಪ್ರಿನ್ಸ್ ಥೋಮಸ್, ಕುಂಬಳೆ ಪ್ರೆಸ್ ಫೋರಂ ಕಾರ್ಯದರ್ಶಿ ಐ. ಮೊಹಮ್ಮದ್ ರಫೀಕ್, ಸದಸ್ಯರಾದ ಅಬ್ದುಲ್ ಲತೀಫ್ ಕುಂಬಳೆ, ಕೆಎಂಎ ಸತ್ತಾರ್, ಧನ್‌ರಾಜ್ ಉಪ್ಪಳ ಉಪಸ್ಥಿತರಿದ್ದರು.

You cannot copy contents of this page