ಕುಳೂರುಬೀಡು ದಾಸಣ್ಣ ಆಳ್ವ ನಿಧನ
ಮೀಂಜ: ಪ್ರಗತಿಪರ ಕೃಷಿಕ ಕುಳೂರು ಬೀಡು ಕೆ. ದಾಸಣ್ಣ ಆಳ್ವ (92) ನಿಧನ ಹೊಂದಿದರು. ಬಂಟರ ಸಂಘದ ಮಂಜೇಶ್ವರ ಫಿರ್ಕಾ ಅಧ್ಯಕ್ಷರಾಗಿದ್ದರು. ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಮಾಗಣೆ ಪ್ರಮುಖರಾಗಿರುವ ಇವರು ಅವಿವಾಹಿತರಾಗಿದ್ದರು. ದಿ| ಪಕೀರ ಆಳ್ವ ಕೋಡಿಂಗಾರುಗುತ್ತು- ದಿ| ಕಮಲಮ್ಮ ಕುಳೂರುಬೀಡು ದಂಪತಿ ಪುತ್ರನಾಗಿದ್ದಾರೆ. ಇವರ ಸಹೋದರ ರಾದ ಜಗನ್ನಾಥ ಆಳ್ವ, ಜನಾರ್ದನ ಆಳ್ವ, ಸಹೋದರಿ ಸೋಮಾವತಿ ಹೆಗಡೆ ಈ ಹಿಂದೆ ನಿಧನ ಹೊಂದಿದ್ದಾರೆ.