ಕೋಳಿ ಅಂಕಕ್ಕೆ ದಾಳಿ: ಆರು ಮಂದಿ ಸೆರೆ, ೮ ಕೋಳಿ ವಶ

ಮಂಜೇಶ್ವರ: ಕೋಳಿಅಂಕ ನಡೆಯುತ್ತಿದ್ದ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ೮ ಕೋಳಿಯನ್ನು ವಶಪಡಿಸಿ, ಆರು ಮಂದಿಯನ್ನು ಸೆರೆ ಹಿಡಿದಿದ್ದಾರೆ. ಇವರಿಂದ ೪೭೦೦ ರೂ. ವಶಪಡಿಸಲಾಗಿದೆ.

ನಿನ್ನೆ ಸಂಜೆ ಕಡಂಬಾರ್ ಹೊಸಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಯುತ್ತಿದ್ದಾಗ ಎಸ್‌ಐ ನಿಖಿಲ್ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಬಾಳಿಯೂರು ನಿವಾಸಿ ರಾಜೀವ, ಚಿಗುರುಪಾದೆಯ ಹರೀಶ, ಸಂತೋಷ್ ಮಜಿಬೈಲ್, ರಾಜೇಶ್ ಮಜಿಬೈಲ್, ಪುಷ್ಪರಾಜ ಶೆಟ್ಟಿ ಹೊಸಕಟ್ಟೆ, ಸಂದೀಪ್ ಕುಂಜತ್ತೂರುನನ್ನು ಸೆರೆ ಹಿಡಿಯಲಾಗಿದೆ. ಹಲವರು ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿಯಲ್ಲಿ ಪೊಲೀಸರಾದ ಚಂದ್ರಕಾಂತ್, ಅಪ್ಸಲ್, ಸುಭಾಶ್, ಮಹೇಶ್ ಭಾಗವಹಿಸಿದ್ದರು. ಕೋಳಿಯನ್ನು ಠಾಣೆಯಲ್ಲಿರಿಸಲಾಗಿದೆ.

RELATED NEWS

You cannot copy contents of this page