ಪಿ.ಸಿ. ಜೋರ್ಜ್ ಸಹಿತ ಜನಪಕ್ಷಂ ನೇತಾರರು ಇಂದು ಬಿಜೆಪಿ ಸೇರ್ಪಡೆ

ಹೊಸದಿಲ್ಲಿ: ಪಿ.ಸಿ. ಜೋರ್ಜ್ ಹಾಗೂ ಪುತ್ರ ಶೋನ್ ಜೋರ್ಜ್ ಸಹಿತ ಜನಪಕ್ಷಂ ಪಾರ್ಟಿ ನೇತಾರರು ಇಂದು ಬಿಜೆಪಿ ಸದಸ್ಯತ್ವ ಸ್ವೀಕರಿಸಲಿದ್ದಾರೆಂದು ತಿಳಿದು ಬಂದಿದೆ.

ಕೇರಳದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆ ಯಲ್ಲಿ ಜನಪಕ್ಷಂ ನೇತಾರರು ಸದಸ್ಯತ್ವ ಸ್ವೀಕರಿಸುವರೆಂದು ಸೂಚನೆಯಿದೆ. ಪಿ.ಸಿ. ಜೋರ್ಜ್ ಹಾಗೂ ಶೋನ್ ಜೋರ್ಜ್ ನಿನ್ನೆ ದೆಹಲಿಗೆ ತೆರಳಿ ಬಿಜೆಪಿ ಕೇಂದ್ರ ನಾಯಕರೊಂದಿಗೆ  ಸಮಾಲೋಚನೆ ನಡೆಸಿದ್ದಾರೆ. ಚರ್ಚೆ ಇಂದೂ ನಡೆಯಲಿದೆ. ಇಂದು ಸಂಜೆ ವೇಳೆ ನಿರ್ಧಾರ ತಿಳಿಸುವುದಾಗಿ ಪಿ.ಸಿ. ಜೋರ್ಜ್ ತಿಳಿಸಿದ್ದಾರೆ. ಇದೇ ವೇಳೆ ಪಿ.ಸಿ. ಜೋರ್ಜ್‌ರ ಬೆನ್ನಲ್ಲೇ ಇನ್ನಷ್ಟು ಮಂದಿ ಕೇರಳದಿಂದ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್‌ದಾಸ್ ಅಗರ್ವಾಲ್ ತಿಳಿಸಿದ್ದಾರೆ.

ಪಿ.ಸಿ. ಜೋರ್ಜ್‌ರ ಸೇರ್ಪಡೆಯೊಂದಿಗೆ ಕೇರಳದಲ್ಲಿ ಬಿಜೆಪಿಗೆ ಕ್ರಿಶ್ಚಿಯನ್ ಸಮುದಾಯದ ಬೆಂಬಲ ಹೆಚ್ಚಲಿದೆಯೆಂದೂ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page