ಪೈವಳಿಕೆಯಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ

ಪೈವಳಿಕೆ : ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಆಕ್ರಮಣದಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೈವಳಿಕೆ ಮಂಡಲ ಸಮಿತಿ ವತಿಯಿಂದ ಮೌನ ಮೆರವಣಿಗೆ ಮತ್ತು ಮೇಣದ ಬತ್ತಿ ಉರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೋಹನ ರೈ ಕಯ್ಯಾರು, ನಾರಾಯಣ ಏದಾರು, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಭಟ್, ಸಚ್ಚಿದಾನಂದ ರೈ,  ಅಬ್ದುಲ್ಲ ಹಾಜಿ, ಅಬ್ದುಲ್ಲ ಶಾ, ಮೊಹಮ್ಮದ್ ಕಯ್ಯಾರು, ರವಿಚಂದ್ರ ಬಲ್ಲಾಳ್, ಮೆಲ್ವಿನ್ ನೇತೃತ್ವ ನೀಡಿದರು. ಶಾಜಿ ಎನ್.ಸಿ. ಭಯೋತ್ಪಾದನೆಗೆ ಎದುರಾಗಿ ಪ್ರತಿಜ್ಞೆ ಬೋಧಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ  ನೌಶಾದ್ ಕಯ್ಯಾರು ಸ್ವಾಗತಿಸಿ, ಎಡ್ವರ್ಡ್ ಡಿಸೋಜ  ವಂದಿಸಿದರು.

RELATED NEWS

You cannot copy contents of this page