ಪ್ರಕೃತಿ ವಿಕೋಪ: ಜಿಲ್ಲೆಯಲ್ಲಿ ಇದುವರೆಗೆ 77 ಮನೆಗಳು ಆಂಶಿಕ, 3 ಪೂರ್ಣವಾಗಿ ನಾಶ


ಕಾಸರಗೋಡು: ಇದುವರೆಗೆ ಸುರಿದ ಮಳೆಗೆ ಜೂನ್ 2ನೇ ವಾರದಿಂದ 77 ಮನೆಗಳು ಆಂಶಿಕವಾಗಿ ಹಾಗೂ 3 ಮನೆಗಳು ಸಂಪೂರ್ಣವಾಗಿ ನಾಶವಾ ಗಿವೆ. ಮಂಜೇಶ್ವರ ತಾಲೂಕಿನಲ್ಲಿ ಇದುವರೆಗೆ 29 ಮನೆಗಳು ಆಂಶಿಕ ವಾಗಿಯೂ, 3 ಮನೆಗಳು ಪೂರ್ಣವಾಗಿ ನಾಶವಾಗಿದೆ. 13ಕಡೆಗಳಲ್ಲಿ ಗುಡ್ಡೆ ಕುಸಿತ ಉಂಟಾಗಿದೆ. 50 ಕಡೆಗಳಲ್ಲಿ ನೆರೆ ನುಗ್ಗಿದ್ದು, 6 ಬಾವಿಗಳು ಕುಸಿದಿವೆ. 11 ಕುಟುಂಬಗಳನ್ನು ಸಂಬAಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಕಾಸರಗೋಡು ತಾಲೂಕಿನಲ್ಲಿ ಇದುವರೆಗೆ 8 ಮನೆಗಳು ಆಂಶಿಕವಾಗಿ ಹಾನಿಗೊಂಡಿವೆ. 21 ಮನೆಗಳಿಗೆ ನೆರೆ ನೀರು ನುಗ್ಗಿದ್ದು, 4 ಬಾವಿಗಳು ಕುಸಿದಿವೆ. ಹೊಸದುರ್ಗ ತಾಲೂಕಿನಲ್ಲಿ ಇದುವರೆಗೆ 38 ಮನೆಗಳು ಆಂಶಿಕವಾಗಿ ಹಾನಿಯಾಗಿದ್ದು, 6 ಕಡೆಗಳಲ್ಲಿ ಕ್ಯಾಂಪ್ಗಳು ಕಾರ್ಯಾ ಚರಿಸುತ್ತಿವೆ. ವೆಳ್ಳರಿಕುಂಡ್ ತಾಲೂಕಿನಲ್ಲಿ ಇದುವರೆಗೆ 2 ಮನೆಗಳು ಆಂಶಿಕವಾಗಿ ಹಾನಿಗೊಂಡಿದೆ. 3 ಕಡೆಗಳಲ್ಲಿ ಗುಡ್ಡೆ ಕುಸಿದಿದೆ. ಇಲ್ಲಿ 2 ಕಡೆಗಳಲ್ಲಿ ಆರಂಭಿಸಿದ ಪುನರ್ವಸತಿ ಕೇಂದ್ರಗಳನ್ನು ರದ್ದುಪಡಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page