ಪ್ರಾಕೃತಿಕ ವಿಕೋಪ ಸಂತ್ರಸ್ತರ ಶಿಬಿರಕ್ಕೆ ನುಗ್ಗಿ ಅಧಿಕಾರಿಗಳಿಗೆ ಕೊಲೆ ಬೆದರಿಕೆ: ಯುವಕ ಸೆರೆ
ಕಾಸರಗೋಡು: ತೀವ್ರ ಮಳೆ ಹಿನ್ನೆಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರನ್ನು ಸ್ಥಳಾಂತರಿಸಿದ ಸುರಕ್ಷಿತ ಕೇಂದ್ರಕ್ಕೆ ನುಗ್ಗಿ ಅಲ್ಲಿದ್ದ ಅಧಿಕಾರಿಗಳಿಗೆ ಕೊಲೆ ಬೆದರಿಕೆಯೊಡ್ಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಾಲೋಂ ಪರಂಬದ ಶ್ಯಾಮ್ ಕುಮಾರ್ ಎಂಬಾತನನ್ನು ಚಿಟ್ಟಾರಿಕ್ಕಲ್ ಪೊಲೀಸರು ಸೆರೆ ಹಿಡಿದಿದ್ದಾರೆ.
ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರು ವಾಸ್ತವ್ಯ ಹೂಡಿರುವ ಮಾಲೋಂ ಪರಂಬ ಎಲ್ಪಿ ಶಾಲೆಗೆ ನಿನ್ನೆ ರಾತ್ರಿ 9.30ರ ವೇಳೆ ಅತಿಕ್ರಮಿಸಿ ನುಗ್ಗಿದ ಶ್ಯಾಮ್ ಕುಮಾರ್ ಅಲ್ಲಿದ್ದ ವೆಸ್ಟ್ ಎಳೇರಿ ಗ್ರಾಮಾಧಿಕಾರಿ ಸಹಿತ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಯೊಡ್ಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಅಧಿಕಾರಿಗಳು ನೀಡಿದ ದೂರಿನಂತೆ ಕೇಸು ದಾಖಲಿಸಿಕೊಂಡ ಚಿಟ್ಟಾರಿಕ್ಕಲ್ ಪೊಲೀಸರು ಶ್ಯಾಮ್ ಕುಮಾರ್ನನ್ನು ಬಂಧಿಸಿದ್ದಾರೆ.