ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಸುಹಾಸ್‌ರ ಸ್ಮೃತಿದಿನ ಕಾರ್ಯಕ್ರಮ

ಕಾಸರಗೋಡು: ಬಿ.ಎಂ.ಎಸ್. ಜಿಲ್ಲಾ ಸಮಿತಿ ಆಶ್ರಯದಲ್ಲಿ ಜಿಲ್ಲಾ ಕಚೇರಿ ಪರಿಸರದಲ್ಲಿ ನಡೆದ ಅಡ್ವಕೇಟ್ ಸುಹಾಸ್‌ರ ಸ್ಮೃತಿ ದಿನ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಪಿ. ಮುರಳೀಧರನ್ ಸಂಸ್ಮರಣಾ ಭಾಷಣ ಮಾಡಿದರು. ಆರ್‌ಎಸ್‌ಎಸ್ ಜಿಲ್ಲಾ ಸಹ ಸಂಪರ್ಕ್ ಪ್ರಮುಖ್ ಸುನಿಲ್ ಕುದ್ರೆಪ್ಪಾಡಿ, ಬಿ.ಎಂ.ಎಸ್. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ದಿನೇಶ್ ಬಂಬ್ರಾಣ, ಹರೀಶ್ ಕುದ್ರೆಪ್ಪಾಡಿ, ಅನಿಲ್ ಬಿ. ನಾಯರ್, ಟಿ. ಕೃಷ್ಣನ್, ಎ. ಕೇಶವ, ಬಾಬುಮೋನ್, ಜಯಶೀಲನ್, ಬಾಲಕೃಷ್ಣ ನೆಲ್ಲಿಕುಂಜೆ, ಮನೋಜ್ ಭಾಗವಹಿಸಿದರು.

You cannot copy contents of this page