ಬಿದ್ದು ಸಿಕ್ಕಿದ ಸರ ವಾರಸದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

ಮುಂಡ್ಯತ್ತಡ್ಕ: ರಸ್ತೆಯಲ್ಲಿ ಬಿದ್ದು ಸಿಕ್ಕಿದ ಎರಡು ಪವನ್ ಚಿನ್ನದ ಸರ ವನ್ನು ಅದರ ವಾರಸುದಾರರಿಗೆ ಹಸ್ತಾಂ ತರಿಸಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದರು. ಮುಂಡ್ಯತ್ತಡ್ಕ ಬಳಿಯ ಅರಿಯಪ್ಪಾಡಿ ಪಳ್ಳಿ ರಸ್ತೆಯಲ್ಲಿ ನಿನ್ನೆ ಅರಿಯಪ್ಪಾಡಿಯ ಸುರೇಶ್ ಎಂಬವರಿಗೆ ಚಿನ್ನದ ಸರ ಬಿದ್ದು ಸಿಕ್ಕಿದೆ. ಈ ಬಗ್ಗೆ ಅವರು ಸ್ಥಳೀಯರಲ್ಲಿ ತಿಳಿಸಿದ್ದರು. ಬಳಿಕ ನಡೆದ ಪರಿಶೀಲನೆ ವೇಳೆ ಅದು ವಳಮೊಗರುವಿನ ಡೊಮಿನಿಕ್ ಎಂಬವರದ್ದೆಂದು ತಿಳಿದು ಬಂತು.  ಕೂಡಲೇ ಡೊಮಿನಿಕ್‌ರನ್ನು ಅರಿಯಪ್ಪಾಡಿ ಪಳ್ಳಕ್ಕೆ ಕರೆಸಿ ಚಿನ್ನದ ಸರವನ್ನು ಸುರೇಶ್ ಹಸ್ತಾಂತರಿಸಿದರು.

RELATED NEWS

You cannot copy contents of this page