ಮನೆಗೆ ಕಿಚ್ಚಿರಿಸಿ ಕುಟುಂಬದ ಕೊಲೆಗೆ ಯತ್ನ: ಆರೋಪಿ ಸೆರೆ

ಉಪ್ಪಳ:  ಮನೆಗೆ ಕಿಚ್ಚಿರಿಸಿ ಕುಟುಂಬವನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾ ರೆ. ವಯನಾಡು ಚುಂಡಲ್ ನಿವಾಸಿ  ಶಿವಕುಮಾರ್ (45) ಬಂಧಿತ ಆರೋಪಿಯಾಗಿದ್ದಾನೆ. ಮಂಜೇಶ್ವರ ಉದ್ಯಾವರಗುತ್ತುವಿನ ಐತ್ತಪ್ಪ ಎಂಬವರ ಮನೆಗೆ ಪೆಟ್ರೋಲ್ ಸುರಿದು ಕಿಚ್ಚಿರಿಸಿ ಕುಟುಂಬವನ್ನು ಕೊಲೆಗೈಯ್ಯ ಲೆತ್ನಿಸಿದ ಆರೋಪದಂತೆ ಶಿವಕುಮಾರ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಕಳೆದ ತಿಂಗಳು 23ರಂದು ಈ ಘಟನೆ ನಡೆದಿದೆ. ಬಳಿಕ ಆರೋಪಿ ತಲೆಮರೆಸಿಕೊಂಡಿದ್ದನು. ನಿನ್ನೆ ಕಲ್ಲಿಕೋಟೆ ಪಾಳಯಂ ಎಂಬಲ್ಲಿಂದ  ಆರೋಪಿಯನ್ನು ಮಂಜೇಶ್ವರ ಎಸ್‌ಐ ನಿಖಿಲ್, ಎಸ್‌ಸಿಪಿಒ ಪ್ರಮೋದ್, ಸಿಪಿಒ ಪ್ರಶೋಬ್ ಎಂಬಿವರು ಬಂಧಿಸಿದ್ದಾರೆ.

RELATED NEWS

You cannot copy contents of this page