ಮಾಜಿ ಮುಖ್ಯಮಂತ್ರಿ ಆರ್. ಶಂಕರ್ ಸಂಸ್ಮರಣೆ

ಮಂಜೇಶ್ವರ : ಕೇರಳದ ಮಾಜಿ ಮುಖ್ಯಮಂತ್ರಿ ಆರ್. ಶಂಕರ್ ಸಂಸ್ಮರಣೆ, ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ಜರಗಿತು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಹಮದ್ ಮನ್ಸೂರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಪುಷ್ಪಾರ್ಚನೆಗೈದರು.
ಕಾಂಗ್ರೆಸ್ ಮುಖಂಡರಾದ ಶಾಂತಾ ಆರ್. ನಾಯ್ಕ, ಮೊಹಮ್ಮದ್ ಮಜಲು, ನಾಗೇಶ್ ಮಂಜೇಶ್ವರ, ಚಂದ್ರಶೇಖರ ಶೆಟ್ಟಿ ಬೆಜ್ಜ, ಹಮೀದ್ ಕಣಿಯೂರು, ಪುರುಷೋತ್ತಮ ಅರಿಬೈಲು, ರಂಜಿತ್ ಮಂಜೇಶ್ವರ, ಬಾಬು ಬಂದ್ಯೋಡು, ಉಪಸ್ಥಿತರಿದ್ದರು. ಹನೀಫ್ ಸ್ವಾಗತಿಸಿ, ಇರ್ಷಾದ್ ಮಂಜೇಶ್ವರ ವಂದಿಸಿದರು.

RELATED NEWS

You cannot copy contents of this page