ಮಾರಕಾಯುಧಗಳೊಂದಿಗೆ ತಲುಪಿ ಮನೆಗೆ ಹಾನಿ:  ಇರಿತ ಪ್ರಕರಣದ ಆರೋಪಿ ವಿರುದ್ದ ಮತ್ತೆ ಕೇಸು

ಬದಿಯಡ್ಕ: ವ್ಯಕ್ತಿಯೋರ್ವ ಮಾರಕಾಯುಧಗಳೊಂದಿಗೆ  ಮನೆಯೊಂದಕ್ಕೆ ತಲುಪಿ ಕಿಟಿಕಿ ಗಾಜುಗಳನ್ನು ಪುಡಿಗೈದು ಮನೆಯವರಿಗೆ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಈ ಬಗ್ಗೆ ನೆಕ್ರಾಜೆ ಚಂದ್ರಂಪಾರೆ  ತೋಟ ಹೌಸ್‌ನ ಹನೀಫ ಎಂಬವರು ನೀಡಿದ ದೂರಿನಂತೆ ಚಂದ್ರಂಪಾರೆಯ ಶರೀಫ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ನಿನ್ನೆ ರಾತ್ರಿ 8 ಗಂಟೆಗೆ ಶರೀಫ್ ಮಾರಕಾಯುಧಗಳ ಸಹಿತ ಹನೀಫರ ಮನೆಗೆ ತಲುಪಿ ದ್ದಾನೆನ್ನಲಾಗಿದೆ. ಘಟನೆ ವೇಳೆ ಮನೆಯಲ್ಲಿ ಹನೀಫರ ಮಗ ಹಾಗೂ ಮಗಳು ಮಾತ್ರವೇ ಇದ್ದರು. ಅವರು ಬಾಗಿಲು  ತೆರೆಯದಿರುವುದರಿಂದ ದ್ವೇಷಗೊಂಡ ಆರೋಪಿ ಕಿಟಿಕಿ ಗಾಜುಗಳನ್ನು ಪುಡಿಗೈದು ಮರಳಿದ್ದಾನೆಂದು ದೂರಲಾಗಿದೆ. ತಿಂಗಳುಗಳ ಹಿಂದೆ ಹನೀಫರಿಗೆ ಸ್ಕ್ರೂಡ್ರೈವರ್‌ನಿಂದ ಇರಿದು ಗಾಯಗೊಳಿಸಿದ ಪ್ರಕರಣ ದಲ್ಲೂ ಶರೀಫ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

RELATED NEWS

You cannot copy contents of this page