ಮೀನುಲಾರಿ- ಆಟೋರಿಕ್ಷಾ ಢಿಕ್ಕಿ: ಇಬ್ಬರಿಗೆ ಗಾಯ

ಕುಂಬಳೆ: ಮೀನುಲಾರಿ- ಆಟೋರಿಕ್ಷಾ ಢಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂ ಡಿದ್ದಾರೆ. ಆಟೋರಿಕ್ಷಾ ಚಾಲಕ ಆರಿಕ್ಕಾಡಿ ಪಡವತ್‌ನ ಅಬ್ದುಲ್ ಸತ್ತಾರ್ (೪೦), ಪ್ರಯಾಣಿಕ ಬದ್ರಿಯ ನಗರ ನಿವಾಸಿ ಸತ್ತಾರ್ (೪೫) ಎಂಬಿವರು ಗಾಯಗೊಂಡಿ ದ್ದಾರೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಶನಿವಾರ ರಾತ್ರಿ ೭ ಗಂಟೆಗೆ ಕುಂಬಳೆ ರಾಷ್ಟ್ರೀಯ ಹೆದ್ದಾರಿ ದೇವಿನಗರದಲ್ಲಿ ಅಪಘಾತ ವುಂಟಾಗಿದೆ. ಕುಂಬಳೆ ಭಾಗಕ್ಕೆ ತೆರಳುತ್ತಿದ್ದ ಆಟೋರಿಕ್ಷಾಕ್ಕೆ ಕಾಸರಗೋಡು ಭಾಗಕ್ಕೆ ತೆರಳುತ್ತಿ ದ್ದ ಮೀನು ಲಾರಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

RELATED NEWS

You cannot copy contents of this page