ಮೃತದೇಹ 30 ತುಂಡುಗಳಾಗಿ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಘಟನೆ: ಆರೋಪಿ ಆತ್ಮಹತ್ಯೆ

ಬೆಂಗಳೂರು: ಯುವತಿಯನ್ನು ಕೊಲೆಗೈದ ಬಳಿಕ ಮೃತದೇಹವನ್ನು ತುಂಡುಗಳಾಗಿ ಮಾಡಿ ಫ್ರಿಡ್ಜ್‌ನಲ್ಲಿ ತೆಗೆದಿರಿಸಿದ ಪ್ರಕರಣದ ಪ್ರಧಾನ ಆರೋಪಿ ಒಡಿಶ್ಶಾದಲ್ಲಿ ಆತ್ಮಹತ್ಯೆಗೈದಿ ದ್ದಾನೆ. ಮುಕ್ತಿರಂಜನ್ ರಾಯ್  ನೇಣು ಬಿಗಿದು ಆತ್ಮಹತ್ಯೆಗೈದ ವ್ಯಕ್ತಿ. ಭದ್ರಕ್ ಜಿಲ್ಲೆಯ ಮನೆಯ ಸಮೀ ಪದಲ್ಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಮಾಲ್‌ನಲ್ಲಿ ನೌಕರೆ ಯಾದ ಮಹಾಲಕ್ಷ್ಮಿ (29)ಯನ್ನು ಕೊಲೆಗೈದು ಮೃತದೇಹವನ್ನು 30 ತುಂಡುಗಳಾಗಿ ಮಾಡಿ ಬೆಂಗಳೂರಿನ ವಯ್ಯಾಲಿಕಾವ್ ಅಪಾರ್ಟ್‌ಮೆಂಟ್‌ನ ಫ್ರಿಡ್ಜ್‌ನಲ್ಲಿ ಇರಿಸಿದ್ದನು. ಈ ತಿಂಗಳ 21ರಂದು ಘಟನೆ ಗಮನಕ್ಕೆ ಬಂದಿದೆ. ಮೊಬೈಲ್ ಫೋನ್ ಮಾಹಿತಿಯ ಆಧಾರದಲ್ಲಿ ರಹಸ್ಯ ಅಡಗುತಾಣಕ್ಕೆ ತಲುಪಿದಾಗ ಮುಕ್ತಿರಂಜನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಪತಿಯಿಂದ ಬೇರ್ಪಟ್ಟು ಒಂಟಿಯಾಗಿ ವಾಸಿಸುತ್ತಿದ್ದ ಮಹಾಲಕ್ಷ್ಮಿ  ಮುಕ್ತಿರಂಜನ್‌ನೊಂದಿಗೆ ಗೆಳೆತನ ಬೆಳೆಸಿದ್ದಳು. ಸಹೋದ್ಯೋಗಿ ಹಾಗೂ ಬೆಂಗಳೂರಿನ ಈಕೆಯ ಗೆಳೆಯರಲ್ಲಿ ಮುಕ್ತಿರಂಜನ್ ಕೂಡಾ ಓರ್ವನಾಗಿದ್ದ.

ಮಹಾಲಕ್ಷ್ಮಿಗೆ ಮತ್ತೋರ್ವ ನೊಂದಿಗೆ ಸಂಪರ್ಕವಿದೆ ಎಂಬ ಸಂಶಯದಿಂದ ಕೊಲೆ ನಡೆಸಿರಬೇಕೆಂದು ಪೊಲೀಸರು ಸೂಚನೆ ನೀಡುತ್ತಿದ್ದಾರೆ. ಎರಡು ವಾರದ ಹಿಂದೆ ಈ ಕ್ರೂರ ಕೃತ್ಯ ನಡೆದಿದೆ. ಮಹಾಲಕ್ಷ್ಮಿಯ ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಮನೆಯವರು ಸಂಬಂಧಿಕರಿಗೆ ತಿಳಿಸಿದ್ದು, ಕಳೆದ ಶನಿವಾರ ಮಹಾಲಕ್ಷ್ಮಿಯ ತಾಯಿ ಹಾಗೂ ಸಹೋದರಿ ಮನೆಗೆ ತಲುಪಿ ಪರಿಶೀಲಿಸಿದ್ದರು. ಇದೇ ವೇಳೆ ಸೆ.1ರಿಂದ ಇವರಿಬ್ಬರು ಕೆಲಸಕ್ಕೆ ತಲುಪಿರಲಿಲ್ಲವೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದ ಮಧ್ಯೆ ಕೊಲೆ ನಡೆಸಿರುವುದು ಬಹಿರಂಗಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page