ವಾಟ್ಸಪ್ ಮೂಲಕ ಮುತ್ತಲಾಕ್: ವಿಚ್ಛೇಧನ ನೀಡಿದ ಪತಿಯ ವಿರುದ್ಧ ಯುವತಿಯ ಕುಟುಂಬ ದೂರು

ಕಾಸರಗೋಡು: ವಾಟ್ಸಪ್ ಮೂಲಕ ೨೧ ವರ್ಷದ ಯುವತಿಗೆ ಮುತ್ತಲಾಕ್ ನೀಡಿದ ಪತಿ ವಿರುದ್ಧ ಕೇಸು ದಾಖಲಿಸಲಾಗಿದೆ. ನೆಲ್ಲಿಕಟ್ಟೆ ನಿವಾಸಿ ಅಬ್ದುಲ್ ರಝಾಕ್ ವಿರುದ್ಧ ಕಲ್ಲುರಾವಿ  ನಿವಾಸಿ ದೂರು ನೀಡಿ ದ್ದರು. ಯುವತಿಯ ತಂದೆಯ ಫೋ ನಿಗೆ ಕೊಲ್ಲಿಯಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ರಝಾಕ್ ಮುತ್ತಲಾಕ್ ಹೇಳುವ ಸಂದೇಶ ಕಳುಹಿಸಿಕೊಟ್ಟಿ ದ್ದನು. ಫೆ. 21ರಂದು ಘಟನೆ ನಡೆದಿತ್ತು. ಪತಿಯ ಸಂಬಂಧಿಕರು ನಿರಂತರ ಉಪದ್ರವ ನೀಡುತ್ತಿರುವುದಾಗಿ ಯುವತಿ ದೂರಿದ್ದಾಳೆ. ಪತಿಯ ತಾಯಿ, ಇಬ್ಬರು ಸಹೋದರಿಯರು ಸೇರಿ ಆಹಾರ ಕೂಡಾ ನೀಡದೆ ಕೊಠಡಿಯಲ್ಲಿ ಕೂಡಿಹಾಕಿ ದೌರ್ಜನ್ಯಗೈದಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಕಳೆದ ಎರಡೂವರೆ ವರ್ಷದಿಂದ ಈ ರೀತಿ ಮಾಡುತ್ತಿದ್ದರೆಂದು ಯುವತಿ ದೂರಿದ್ದಾರೆ. ಆ ವೇಳೆ ಪತಿ ನನ್ನೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸುತ್ತಿದ್ದು, ಆದರೆ ಈಗ ವಿಚ್ಛೇಧನ ನೀಡಲು ಕಾರಣವೇನೆಂದು ತಿಳಿದು ಬಂದಿಲ್ಲವೆಂದು ಯುವತಿ ತಿಳಿಸಿದ್ದಾರೆ.

೨೦೨೨ರಲ್ಲಿ ಇವರ ವಿವಾಹ ನಡೆದಿದೆ. ಆ ಬಳಿಕ 12 ಲಕ್ಷ ರೂ. ಅಬ್ದುಲ್ ರಝಾಕ್ ಪಡೆದು ಕೊಂಡಿರುವುದಾಗಿ ಯುವತಿಯ ತಂದೆ ಆರೋಪಿಸಿದ್ದಾರೆ. ಘಟನೆಯಲ್ಲಿ ಹೊಸದುರ್ಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page