ಸಂಚರಿಸುತ್ತಿದ್ದ ಬಸ್ ಬೆಂಕಿಗಾಹುತಿ

ಆಲಪ್ಪುಳ: ಕಾಯಂಕುಳಂನಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೆಂಕಿಗಾಹುತಿಯಾಗಿದೆ. ಅಲ್ಲಿನ ಎಂಎಸ್‌ಎಂ ಕಾಲೇಜು ಮುಂಭಾ ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ ಸಂಭವಿಸಿದೆ. ಬಸ್ ಪೂರ್ಣ ವಾಗಿ ಉರಿದು ನಾಶಗೊಂಡಿದೆ. ಕಾಯಂಕು ಳಂನಿಂದ ಆಲಪ್ಪುಳಕ್ಕೆ  ತೆರಳುತ್ತಿದ್ದ ಬಸ್‌ಗೆ ಬೆಂಕಿ ತಗಲಿದೆ. ಬಸ್‌ನಿಂದ ಹೊಗೆ ಕಾಣಿಸುತ್ತಿದ್ದಂತೆ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿ ಕರನ್ನು  ಕೆಳಗಿಳಿಸಿ ದ್ದನು. ಇದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

You cannot copy contents of this page