ಸನ್ನಿಧಾನದಲ್ಲಿ ತೀರ್ಥಾಟಕರಿಗೆ ಪೊಲೀಸ್ ಹಲ್ಲೆ-ದೂರು

ಶಬರಿಮಲೆ: ಸನ್ನಿಧಾನದಲ್ಲಿ ತೀರ್ಥಾಟಕನಿಗೆ ಪೊಲೀಸರು ಹಲ್ಲೆಗೈಯ್ದುದಾಗಿ ಆರೋಪವುಂಟಾಗಿದೆ. ತಮಿಳುನಾಡು ತಂಜಾವೂರು ನಿವಾಸಿ ದಯಾನಂದ್ (೨೪) ಎಂಬವರು ಈ ಬಗ್ಗೆ ಆರೋಪಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಇವರು ಸನ್ನಿಧಾನದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಿನ್ನೆ ಬೆಳಿಗ್ಗೆ ಹದಿನೆಂಟು ಮೆಟ್ಟಿಲೇರುತ್ತಿದ್ದಾಗ ಪೊಲೀಸ್ ಹಲ್ಲೆಗೈದುದಾಗಿ ದೂರಲಾಗಿದೆ. ಹಲ್ಲೆಗೈದುದನ್ನು ಪ್ರಶ್ನಿಸಿದ ಇತರ ತೀರ್ಥಾಟಕರಿಗೂ ಪೊಲೀಸ್ ಹಲ್ಲೆಗೈದುದಾಗಿ ದೂರಲಾಗಿದೆ.

RELATED NEWS

You cannot copy contents of this page